ಚಾರ್ಮಾಡಿ ಘಾಟಿಯಲ್ಲಿ ಬಿರುಕು: ರಸ್ತೆ ಕುಸಿಯುವ ಆತಂಕ! - ಚಿಕ್ಕಮಗಳೂರಿನಲ್ಲಿ ಮಳೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-8352281-899-8352281-1596958172324.jpg)
ಚಿಕ್ಕಮಗಳೂರು ಜಿಲ್ಲೆಯ ಚಾರ್ಮಾಡಿ ಘಾಟಿ ರಸ್ತೆಯಲ್ಲಿ ನಿರಂತರ ಮಳೆಯಿಂದಾಗಿ ಭೂ ಕುಸಿತ, ಗುಡ್ಡ ಕುಸಿತ ಉಂಟಾಗುತ್ತಿದೆ. ನಿನ್ನೆ ಸುರಿದ ಧಾರಾಕಾರ ಮಳೆಗೆ ಗುಡ್ಡ ಕುಸಿತದಿಂದಾಗಿ ಘಾಟಿ ರಸ್ತೆ ಅಲ್ಲಲ್ಲಿ ಬಿರುಕು ಬಿಟ್ಟಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಿಬ್ಬಂದಿ ರಸ್ತೆ ಬಿರುಕನ್ನು ಸಿಮೆಂಟ್ನಿಂದ ಮುಚ್ಚುತ್ತಿದ್ದಾರೆ. ಬಿರುಕು ಬಿಟ್ಟಿರುವ ರಸ್ತೆಯ ಮಧ್ಯೆ ನೀರು ಹರಿಯುತ್ತಿದ್ದು, ಇದು ಹೀಗೆಯೇ ಮುಂದುವರೆದರೆ ರಸ್ತೆ ಕುಸಿಯುವ ಭೀತಿ ಎದುರಾಗಲಿದೆ. ಸಿಮೆಂಟ್ ಪ್ಯಾಚ್ ಕಾರ್ಯ ನಡೆಸುತ್ತಿರುವ ಸ್ಥಳದಿಂದ ನಮ್ಮ ಪ್ರತಿನಿಧಿ ನಡೆಸಿದ ಪ್ರತ್ಯಕ್ಷ ವರದಿ ಇಲ್ಲಿದೆ.
Last Updated : Aug 9, 2020, 2:18 PM IST