ETV Bharat / state

ರಾಜಣ್ಣ ದೊಡ್ಡವರು, ಅವರ ಬಗ್ಗೆ ನಾನು ಮಾತನಾಡಲ್ಲ: ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನದ ಬಳಿಕ ಡಿಸಿಎಂ ಮಾತು - DK SHIVAKUMAR REACTION

ಕೆ ಎನ್ ರಾಜಣ್ಣ ಅವರ ದಿಢೀರ್ ದೆಹಲಿ ಪ್ರವಾಸ, ಉದಯಗಿರಿ ಗಲಾಟೆಗೆ ಪೊಲೀಸರ ಕರ್ತವ್ಯಲೋಪ ಕಾರಣ ಎಂಬ ಅವರ ಹೇಳಿಕೆಗೆ ಮೈಸೂರಿನಲ್ಲಿಂದು ಡಿಸಿಎಂ ಡಿ ಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.

Deputy Chief Minister DK Shivakumar reaction on KN Rajanna's sudden visit to Delhi
ಪವಿತ್ರ ಸ್ನಾನ ಮಾಡಿದ ಬಳಿಕ ಪೂಜೆಯಲ್ಲಿ ಭಾಗಿಯಾದ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ (ETV Bharat)
author img

By ETV Bharat Karnataka Team

Published : Feb 12, 2025, 11:57 AM IST

Updated : Feb 12, 2025, 12:09 PM IST

ಮೈಸೂರು : ಸಚಿವ ಕೆ ಎನ್ ರಾಜಣ್ಣ ದೊಡ್ಡವರು. ಅವರ ಬಗ್ಗೆ ನಾನು ಮಾತನಾಡಲ್ಲ. ನಾನು ಕಾಂಗ್ರೆಸ್ ಪಕ್ಷದಲ್ಲಿ ಓರ್ವ ಸಣ್ಣ ಕಾರ್ಯಕರ್ತ ಎಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮಾರ್ಮಿಕವಾಗಿ ಹೇಳಿದರು.

ಕೆ ಎನ್ ರಾಜಣ್ಣ ಅವರ ದಿಢೀರ್ ದೆಹಲಿ ಪ್ರವಾಸ, ಉದಯಗಿರಿ ಗಲಾಟೆಗೆ ಪೊಲೀಸರ ಕರ್ತವ್ಯಲೋಪ ಕಾರಣ ಎಂಬ ಅವರ ಹೇಳಿಕೆಗೆ ಮೈಸೂರಿನಲ್ಲಿಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಎಂ, ರಾಜಣ್ಣ ದೊಡ್ಡವರು, ನಾನು ಅವರ ಬಗ್ಗೆ ಮಾತನಾಡಲ್ಲ. ಕಾಂಗ್ರೆಸ್ ಪಕ್ಷದಲ್ಲಿ ನಾನೊಬ್ಬ ಸಣ್ಣ ಕಾರ್ಯಕರ್ತ ಅಷ್ಟೇ. ಉದಯಗಿರಿ ಪೊಲೀಸ್ ಠಾಣೆಯ ಮೇಲೆ ದಾಳಿ ವಿಚಾರದಲ್ಲಿ ಪೊಲೀಸರು ಉತ್ತಮ ಕೆಲಸ ಮಾಡಿದ್ದಾರೆ. ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಈ ಬಗ್ಗೆ ನೋಡಿಕೊಳ್ಳುತ್ತಾರೆ . ಅದರ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.

ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ (ETV Bharat)

ಪ್ರಯಾಗ್​ರಾಜ್ ಪುಣ್ಯಸ್ನಾನದಷ್ಟೇ ಶ್ರೇಷ್ಠ : ಈ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ್ದು ಪ್ರಯಾಗ್​ರಾಜ್​ನಲ್ಲಿ ಮಾಡಿದ್ದಷ್ಟೇ ಸಂತಸವಾಗಿದೆ. ನಮ್ಮ‌ ತ್ರಿವೇಣಿ ಸಂಗಮವಾದ ಕಾವೇರಿ, ಕಪಿಲ, ಸ್ಫಟಿಕ ಬಹಳ ಪವಿತ್ರವಾದ ಸ್ಥಳ. ತಲಕಾಡಿನ ಗಂಗರು ಸೇರಿದಂತೆ ನಮ್ಮ ಅನೇಕ ಪೂರ್ವಜರು ಇದೇ ಸ್ಥಳದಿಂದ ಆಳಿದಂತಹ ದಾಖಲೆಗಳಿವೆ. ಈಗ ಅನೇಕ ಮಠಾಧೀಶರು ಕರ್ನಾಟಕದಲ್ಲಿ ಕುಂಭಮೇಳದ ಪರಂಪರೆಯನ್ನು ಬೆಳೆಸಿಕೊಂಡು ಬಂದಿದ್ದಾರೆ. ಇದು ಕೂಡಾ ಯಾವುದಕ್ಕೂ ಕಡಿಮೆ‌ ಇಲ್ಲ. ನಿನ್ನೆ ರಾತ್ರಿ ನಾನು ಕೂಡ ಮೇಳದಲ್ಲಿ ಸ್ನಾನ ಮಾಡಿದೆ. ನೀರು ಬಹಳ ಪವಿತ್ರವಾಗಿದೆ. ನಾವು ಇದನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕು. ನಮ್ಮ ನಾಡಿನಲ್ಲಿ ಇಂಥ ಜಾಗ ಇರುವುದು ನಮ್ಮೆಲ್ಲರ ಭಾಗ್ಯ. ಮೈಸೂರು ಜಿಲ್ಲಾಡಳಿತವು ಗಂಗಾರತಿ ಮಾದರಿಯಲ್ಲೇ, ಕಾವೇರಿ ಆರತಿ ಮಾಡಿದ್ದಾರೆ. ಬಹಳ ಚೆನ್ನಾಗಿ ಕೆಲಸ ಮಾಡಿದ್ದಾರೆ ಎಂದು ಡಿ ಕೆ ಶಿವಕುಮಾರ್ ಪ್ರಶಂಸೆ ವ್ಯಕ್ತಪಡಿಸಿದರು.

Deputy Chief Minister DK Shivakumar reaction on KN Rajanna's sudden visit to Delhi
ಟಿ.ನರಸೀಪುರದ ತ್ರಿವೇಣಿ ಸಂಗಮದಲ್ಲೇ ಪವಿತ್ರ ಸ್ನಾನ ಮಾಡಿದ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ (ETV Bharat)

ಕಾವೇರಿ ಆರತಿ ಬಜೆಟ್​ನಲ್ಲಿ ಸೇರ್ಪಡೆ : ಮುಂದಿನ ದಿನಗಳಲ್ಲಿ ಸರ್ಕಾರವು ಈ ಕುಂಭಮೇಳಕ್ಕೆ ಮಾಸ್ಟರ್ ಪ್ಲಾನ್ ಮಾಡುತ್ತದೆ. ಕಾವೇರಿ ಆರತಿ ಬಗ್ಗೆ ವರದಿ ತರಿಸಿಕೊಂಡಿದ್ದೇನೆ. ಈ ಬಾರಿಯ ಬಜೆಟ್​ನಲ್ಲಿ ಅದನ್ನು ಅಧಿಕೃತವಾಗಿ ಸೇರಿಸಲು ಪ್ರಯತ್ನ ಮಾಡುತ್ತೇನೆ. ಮಾರ್ಚ್ 22 ರಂದು ವಿಶ್ವ ಜಲ ದಿನವಿದೆ. ಅದಕ್ಕೂ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ. ಕರ್ನಾಟಕದ ಜನರು ಪ್ರಯಾಗ್​ರಾಜ್ ಹೋಗುವ ಅವಶ್ಯಕತೆ ಇಲ್ಲ.‌ ಗಂಗಾ, ಯಮುನಾ , ಸರಸ್ವತಿ, ನದಿಗಳಿಗೆ ಎಷ್ಟು ಪಾವಿತ್ರ್ಯತೆ ಇದೆಯೋ ಅಷ್ಟೇ ಪಾವಿತ್ರ್ಯತೆ ಕಾವೇರಿ ನದಿಗೂ ಇದೆ. ಹೀಗಾಗಿ ಇಲ್ಲಿಯೂ ಕೂಡ ವ್ಯವಸ್ಥೆ ಚೆನ್ನಾಗಿದೆ. ಪ್ರಯತ್ನಕ್ಕಿಂತ ಪ್ರಾರ್ಥನೆ ದೊಡ್ಡದು. ಮುಖ್ಯಮಂತ್ರಿಗಳು ಕೂಡ ಬರಬೇಕಿತ್ತು. ಮಂಡಿ ನೋವು ಇದ್ದುದರಿಂದ ಬರಲು ಸಾಧ್ಯವಾಗಲಿಲ್ಲ. ನೀನು ಹೋಗಿ ಬಾ ಅಂತ ನನ್ನನ್ನು ಕಳಿಸಿಕೊಟ್ಟಿದ್ದಾರೆ. ಹೀಗಾಗಿ ಬಂದೆ. ನಮ್ಮ ಸರ್ಕಾರದ ವತಿಯಿಂದ ಪ್ರೋತ್ಸಾಹ ನೀಡಲು ನಾನು ಇಲ್ಲಿಗೆ ಬಂದು ಪುಣ್ಯ ಸ್ನಾನ ಮಾಡಿದ್ದೇನೆ. ಎಲ್ಲರೂ ನಮ್ಮ‌ ರಾಜ್ಯದ ತ್ರಿವೇಣಿ ಸಂಗಮದಲ್ಲೇ ಪವಿತ್ರ ಸ್ನಾನ ಮಾಡಿ ಎಂದು ಮನವಿ ಮಾಡಿದರು.

Deputy Chief Minister DK Shivakumar reaction on KN Rajanna's sudden visit to Delhi
ಪವಿತ್ರ ಸ್ನಾನ ಮಾಡಿದ ಬಳಿಕ ಪೂಜೆಯಲ್ಲಿ ಭಾಗಿಯಾದ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ (ETV Bharat)

ಮೆಟ್ರೋ ದರ ಏರಿಕೆ : ಬಿಜೆಪಿಯವರು ಎಲ್ಲದರಲ್ಲೂ ರಾಜಕಾರಣ ಮಾಡುತ್ತಾರೆ. ಮೆಟ್ರೋ ವಿಚಾರದಲ್ಲಿ ಅದಕ್ಕೇ ಆದಂತಹ ಸಮಿತಿ ಇದೆ. ದರ ಏರಿಕೆ ಮತ್ತು ಇಳಿಕೆ ಕುರಿತು ಅವರೇ ತೀರ್ಮಾನ ತೆಗೆದುಕೊಳ್ಳುತ್ತಾರೆ. ಇನ್ನು ಡಬಲ್ ಡೆಕ್ಕರ್ ನಿರ್ಮಿಸಲು ಪಾಲಿಕೆ ವತಿಯಿಂದ ಶೇ.50 ರಷ್ಟು ಹಣ ನಮ್ಮ ಸರ್ಕಾರ ನೀಡುತ್ತದೆ ಎಂದು ಇದೇ ವೇಳೆ ವಿವಿರಣೆ ನೀಡಿದರು.

ನೀರಿನ ದರ ಏರಿಕೆ : ಕಳೆದ 14 ವರ್ಷದಿಂದ ನೀರಿನ ದರವು ಕೂಡ ಏರಿಕೆ ಆಗಿಲ್ಲ. ಏರಿಕೆ ಮಾಡಲು ನಿಗಮವು ಪ್ರಸ್ತಾವನೆ ಕೂಡ ಸಲ್ಲಿಸಿದೆ. ಅದರ ಕುರಿತು ಸದ್ಯದಲ್ಲೇ ತೀರ್ಮಾನ ಮಾಡುತ್ತೇವೆ ಎಂದರು.

Deputy Chief Minister DK Shivakumar reaction on KN Rajanna's sudden visit to Delhi
ಟಿ.ನರಸೀಪುರದ ತ್ರಿವೇಣಿ ಸಂಗಮದಲ್ಲೇ ಪವಿತ್ರ ಸ್ನಾನ ಮಾಡಿದ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ (ETV Bharat)

ಕಲ್ಲು ತೂರಾಟ : ಉದಯಗಿರಿ ಪೊಲೀಸ್ ಠಾಣೆಯ ಮೇಲೆ ನಡೆದ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿಸಿಎಂ, ಯಾರೇ ತಪ್ಪು ಮಾಡಿದರೂ ಕಠಿಣ ಕ್ರಮ ಆಗತ್ತೆ. ಪೊಲೀಸರು ಸಮಯ ಪ್ರಜ್ಞೆ ಮೆರೆದಿದ್ದಾರೆ. ಬೇಗನೆ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ನಾನು ಕೂಡ ವಿಡಿಯೋ ನೋಡಿದ್ದೇನೆ. ಘಟನೆ ಬಗ್ಗೆ ಮಾಹಿತಿ ಕೂಡ ಪಡೆದಿದ್ದೇನೆ. ಎಲ್ಲರೂ ಕೂಡ ಸಣ್ಣ ಹುಡುಗುರು ಅಂತ ಹೇಳಿದ್ದಾರೆ. ಆದರೆ, ಪೊಲೀಸರ ಮೇಲೆ ನಡೆದ ಹಲ್ಲೆ ಸಹಿಸಲ್ಲ. ಕ್ರಮಕ್ಕೆ ಈಗಾಗಲೇ ಸೂಚನೆ ನೀಡಿದ್ದೇವೆ ಹೇಳಿದರು.

ಇದನ್ನೂ ಓದಿ:

ಬೆಂಗಳೂರಿಗರಿಗೆ ಸದ್ಯದಲ್ಲೇ ನೀರಿನ ದರ ಏರಿಕೆ ಬಿಸಿ : ಪ್ರಸ್ತಾವನೆ ಸಲ್ಲಿಸಲು ಜಲಂಮಡಳಿ ಅಧಿಕಾರಿಗಳಿಗೆ ಡಿಸಿಎಂ ಸೂಚನೆ - WATER BILL INCREASE SOON

₹9,800 ಕೋಟಿ ವೆಚ್ಚದಲ್ಲಿ ಎಲ್ಲಾ ನೂತನ ಮೆಟ್ರೋ ಮಾರ್ಗಗಳಲ್ಲಿ ಡಬಲ್ ಡೆಕ್ಕರ್ ನಿರ್ಮಾಣ: ಡಿಸಿಎಂ - DK SHIVAKUMAR ON METRO PROJECTS

ಮಹಾಕುಂಭ ಮೇಳದಲ್ಲಿ ಕುಟುಂಬ ಪರಿವಾರ ಸಮೇತ 'ಪುಣ್ಯ ಸ್ನಾನ' ಮಾಡಿದ ಡಿಸಿಎಂ ಡಿ ಕೆ ಶಿವಕುಮಾರ್ - DCM D K SHIVAKUMAR

ಮೈಸೂರು : ಸಚಿವ ಕೆ ಎನ್ ರಾಜಣ್ಣ ದೊಡ್ಡವರು. ಅವರ ಬಗ್ಗೆ ನಾನು ಮಾತನಾಡಲ್ಲ. ನಾನು ಕಾಂಗ್ರೆಸ್ ಪಕ್ಷದಲ್ಲಿ ಓರ್ವ ಸಣ್ಣ ಕಾರ್ಯಕರ್ತ ಎಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮಾರ್ಮಿಕವಾಗಿ ಹೇಳಿದರು.

ಕೆ ಎನ್ ರಾಜಣ್ಣ ಅವರ ದಿಢೀರ್ ದೆಹಲಿ ಪ್ರವಾಸ, ಉದಯಗಿರಿ ಗಲಾಟೆಗೆ ಪೊಲೀಸರ ಕರ್ತವ್ಯಲೋಪ ಕಾರಣ ಎಂಬ ಅವರ ಹೇಳಿಕೆಗೆ ಮೈಸೂರಿನಲ್ಲಿಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಎಂ, ರಾಜಣ್ಣ ದೊಡ್ಡವರು, ನಾನು ಅವರ ಬಗ್ಗೆ ಮಾತನಾಡಲ್ಲ. ಕಾಂಗ್ರೆಸ್ ಪಕ್ಷದಲ್ಲಿ ನಾನೊಬ್ಬ ಸಣ್ಣ ಕಾರ್ಯಕರ್ತ ಅಷ್ಟೇ. ಉದಯಗಿರಿ ಪೊಲೀಸ್ ಠಾಣೆಯ ಮೇಲೆ ದಾಳಿ ವಿಚಾರದಲ್ಲಿ ಪೊಲೀಸರು ಉತ್ತಮ ಕೆಲಸ ಮಾಡಿದ್ದಾರೆ. ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಈ ಬಗ್ಗೆ ನೋಡಿಕೊಳ್ಳುತ್ತಾರೆ . ಅದರ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.

ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ (ETV Bharat)

ಪ್ರಯಾಗ್​ರಾಜ್ ಪುಣ್ಯಸ್ನಾನದಷ್ಟೇ ಶ್ರೇಷ್ಠ : ಈ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ್ದು ಪ್ರಯಾಗ್​ರಾಜ್​ನಲ್ಲಿ ಮಾಡಿದ್ದಷ್ಟೇ ಸಂತಸವಾಗಿದೆ. ನಮ್ಮ‌ ತ್ರಿವೇಣಿ ಸಂಗಮವಾದ ಕಾವೇರಿ, ಕಪಿಲ, ಸ್ಫಟಿಕ ಬಹಳ ಪವಿತ್ರವಾದ ಸ್ಥಳ. ತಲಕಾಡಿನ ಗಂಗರು ಸೇರಿದಂತೆ ನಮ್ಮ ಅನೇಕ ಪೂರ್ವಜರು ಇದೇ ಸ್ಥಳದಿಂದ ಆಳಿದಂತಹ ದಾಖಲೆಗಳಿವೆ. ಈಗ ಅನೇಕ ಮಠಾಧೀಶರು ಕರ್ನಾಟಕದಲ್ಲಿ ಕುಂಭಮೇಳದ ಪರಂಪರೆಯನ್ನು ಬೆಳೆಸಿಕೊಂಡು ಬಂದಿದ್ದಾರೆ. ಇದು ಕೂಡಾ ಯಾವುದಕ್ಕೂ ಕಡಿಮೆ‌ ಇಲ್ಲ. ನಿನ್ನೆ ರಾತ್ರಿ ನಾನು ಕೂಡ ಮೇಳದಲ್ಲಿ ಸ್ನಾನ ಮಾಡಿದೆ. ನೀರು ಬಹಳ ಪವಿತ್ರವಾಗಿದೆ. ನಾವು ಇದನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕು. ನಮ್ಮ ನಾಡಿನಲ್ಲಿ ಇಂಥ ಜಾಗ ಇರುವುದು ನಮ್ಮೆಲ್ಲರ ಭಾಗ್ಯ. ಮೈಸೂರು ಜಿಲ್ಲಾಡಳಿತವು ಗಂಗಾರತಿ ಮಾದರಿಯಲ್ಲೇ, ಕಾವೇರಿ ಆರತಿ ಮಾಡಿದ್ದಾರೆ. ಬಹಳ ಚೆನ್ನಾಗಿ ಕೆಲಸ ಮಾಡಿದ್ದಾರೆ ಎಂದು ಡಿ ಕೆ ಶಿವಕುಮಾರ್ ಪ್ರಶಂಸೆ ವ್ಯಕ್ತಪಡಿಸಿದರು.

Deputy Chief Minister DK Shivakumar reaction on KN Rajanna's sudden visit to Delhi
ಟಿ.ನರಸೀಪುರದ ತ್ರಿವೇಣಿ ಸಂಗಮದಲ್ಲೇ ಪವಿತ್ರ ಸ್ನಾನ ಮಾಡಿದ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ (ETV Bharat)

ಕಾವೇರಿ ಆರತಿ ಬಜೆಟ್​ನಲ್ಲಿ ಸೇರ್ಪಡೆ : ಮುಂದಿನ ದಿನಗಳಲ್ಲಿ ಸರ್ಕಾರವು ಈ ಕುಂಭಮೇಳಕ್ಕೆ ಮಾಸ್ಟರ್ ಪ್ಲಾನ್ ಮಾಡುತ್ತದೆ. ಕಾವೇರಿ ಆರತಿ ಬಗ್ಗೆ ವರದಿ ತರಿಸಿಕೊಂಡಿದ್ದೇನೆ. ಈ ಬಾರಿಯ ಬಜೆಟ್​ನಲ್ಲಿ ಅದನ್ನು ಅಧಿಕೃತವಾಗಿ ಸೇರಿಸಲು ಪ್ರಯತ್ನ ಮಾಡುತ್ತೇನೆ. ಮಾರ್ಚ್ 22 ರಂದು ವಿಶ್ವ ಜಲ ದಿನವಿದೆ. ಅದಕ್ಕೂ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ. ಕರ್ನಾಟಕದ ಜನರು ಪ್ರಯಾಗ್​ರಾಜ್ ಹೋಗುವ ಅವಶ್ಯಕತೆ ಇಲ್ಲ.‌ ಗಂಗಾ, ಯಮುನಾ , ಸರಸ್ವತಿ, ನದಿಗಳಿಗೆ ಎಷ್ಟು ಪಾವಿತ್ರ್ಯತೆ ಇದೆಯೋ ಅಷ್ಟೇ ಪಾವಿತ್ರ್ಯತೆ ಕಾವೇರಿ ನದಿಗೂ ಇದೆ. ಹೀಗಾಗಿ ಇಲ್ಲಿಯೂ ಕೂಡ ವ್ಯವಸ್ಥೆ ಚೆನ್ನಾಗಿದೆ. ಪ್ರಯತ್ನಕ್ಕಿಂತ ಪ್ರಾರ್ಥನೆ ದೊಡ್ಡದು. ಮುಖ್ಯಮಂತ್ರಿಗಳು ಕೂಡ ಬರಬೇಕಿತ್ತು. ಮಂಡಿ ನೋವು ಇದ್ದುದರಿಂದ ಬರಲು ಸಾಧ್ಯವಾಗಲಿಲ್ಲ. ನೀನು ಹೋಗಿ ಬಾ ಅಂತ ನನ್ನನ್ನು ಕಳಿಸಿಕೊಟ್ಟಿದ್ದಾರೆ. ಹೀಗಾಗಿ ಬಂದೆ. ನಮ್ಮ ಸರ್ಕಾರದ ವತಿಯಿಂದ ಪ್ರೋತ್ಸಾಹ ನೀಡಲು ನಾನು ಇಲ್ಲಿಗೆ ಬಂದು ಪುಣ್ಯ ಸ್ನಾನ ಮಾಡಿದ್ದೇನೆ. ಎಲ್ಲರೂ ನಮ್ಮ‌ ರಾಜ್ಯದ ತ್ರಿವೇಣಿ ಸಂಗಮದಲ್ಲೇ ಪವಿತ್ರ ಸ್ನಾನ ಮಾಡಿ ಎಂದು ಮನವಿ ಮಾಡಿದರು.

Deputy Chief Minister DK Shivakumar reaction on KN Rajanna's sudden visit to Delhi
ಪವಿತ್ರ ಸ್ನಾನ ಮಾಡಿದ ಬಳಿಕ ಪೂಜೆಯಲ್ಲಿ ಭಾಗಿಯಾದ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ (ETV Bharat)

ಮೆಟ್ರೋ ದರ ಏರಿಕೆ : ಬಿಜೆಪಿಯವರು ಎಲ್ಲದರಲ್ಲೂ ರಾಜಕಾರಣ ಮಾಡುತ್ತಾರೆ. ಮೆಟ್ರೋ ವಿಚಾರದಲ್ಲಿ ಅದಕ್ಕೇ ಆದಂತಹ ಸಮಿತಿ ಇದೆ. ದರ ಏರಿಕೆ ಮತ್ತು ಇಳಿಕೆ ಕುರಿತು ಅವರೇ ತೀರ್ಮಾನ ತೆಗೆದುಕೊಳ್ಳುತ್ತಾರೆ. ಇನ್ನು ಡಬಲ್ ಡೆಕ್ಕರ್ ನಿರ್ಮಿಸಲು ಪಾಲಿಕೆ ವತಿಯಿಂದ ಶೇ.50 ರಷ್ಟು ಹಣ ನಮ್ಮ ಸರ್ಕಾರ ನೀಡುತ್ತದೆ ಎಂದು ಇದೇ ವೇಳೆ ವಿವಿರಣೆ ನೀಡಿದರು.

ನೀರಿನ ದರ ಏರಿಕೆ : ಕಳೆದ 14 ವರ್ಷದಿಂದ ನೀರಿನ ದರವು ಕೂಡ ಏರಿಕೆ ಆಗಿಲ್ಲ. ಏರಿಕೆ ಮಾಡಲು ನಿಗಮವು ಪ್ರಸ್ತಾವನೆ ಕೂಡ ಸಲ್ಲಿಸಿದೆ. ಅದರ ಕುರಿತು ಸದ್ಯದಲ್ಲೇ ತೀರ್ಮಾನ ಮಾಡುತ್ತೇವೆ ಎಂದರು.

Deputy Chief Minister DK Shivakumar reaction on KN Rajanna's sudden visit to Delhi
ಟಿ.ನರಸೀಪುರದ ತ್ರಿವೇಣಿ ಸಂಗಮದಲ್ಲೇ ಪವಿತ್ರ ಸ್ನಾನ ಮಾಡಿದ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ (ETV Bharat)

ಕಲ್ಲು ತೂರಾಟ : ಉದಯಗಿರಿ ಪೊಲೀಸ್ ಠಾಣೆಯ ಮೇಲೆ ನಡೆದ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿಸಿಎಂ, ಯಾರೇ ತಪ್ಪು ಮಾಡಿದರೂ ಕಠಿಣ ಕ್ರಮ ಆಗತ್ತೆ. ಪೊಲೀಸರು ಸಮಯ ಪ್ರಜ್ಞೆ ಮೆರೆದಿದ್ದಾರೆ. ಬೇಗನೆ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ನಾನು ಕೂಡ ವಿಡಿಯೋ ನೋಡಿದ್ದೇನೆ. ಘಟನೆ ಬಗ್ಗೆ ಮಾಹಿತಿ ಕೂಡ ಪಡೆದಿದ್ದೇನೆ. ಎಲ್ಲರೂ ಕೂಡ ಸಣ್ಣ ಹುಡುಗುರು ಅಂತ ಹೇಳಿದ್ದಾರೆ. ಆದರೆ, ಪೊಲೀಸರ ಮೇಲೆ ನಡೆದ ಹಲ್ಲೆ ಸಹಿಸಲ್ಲ. ಕ್ರಮಕ್ಕೆ ಈಗಾಗಲೇ ಸೂಚನೆ ನೀಡಿದ್ದೇವೆ ಹೇಳಿದರು.

ಇದನ್ನೂ ಓದಿ:

ಬೆಂಗಳೂರಿಗರಿಗೆ ಸದ್ಯದಲ್ಲೇ ನೀರಿನ ದರ ಏರಿಕೆ ಬಿಸಿ : ಪ್ರಸ್ತಾವನೆ ಸಲ್ಲಿಸಲು ಜಲಂಮಡಳಿ ಅಧಿಕಾರಿಗಳಿಗೆ ಡಿಸಿಎಂ ಸೂಚನೆ - WATER BILL INCREASE SOON

₹9,800 ಕೋಟಿ ವೆಚ್ಚದಲ್ಲಿ ಎಲ್ಲಾ ನೂತನ ಮೆಟ್ರೋ ಮಾರ್ಗಗಳಲ್ಲಿ ಡಬಲ್ ಡೆಕ್ಕರ್ ನಿರ್ಮಾಣ: ಡಿಸಿಎಂ - DK SHIVAKUMAR ON METRO PROJECTS

ಮಹಾಕುಂಭ ಮೇಳದಲ್ಲಿ ಕುಟುಂಬ ಪರಿವಾರ ಸಮೇತ 'ಪುಣ್ಯ ಸ್ನಾನ' ಮಾಡಿದ ಡಿಸಿಎಂ ಡಿ ಕೆ ಶಿವಕುಮಾರ್ - DCM D K SHIVAKUMAR

Last Updated : Feb 12, 2025, 12:09 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.