ಖಾಸಗಿ ವೈದ್ಯರು ಅಗತ್ಯ ಸೇವೆ ಒದಗಿಸದಿದ್ರೆ ಲೈಸೆನ್ಸ್ ರದ್ದು : ಸಚಿವ ಬಿ ಸಿ ಪಾಟೀಲ್
ಹಾವೇರಿ : ಕೊರೊನಾ ಸೋಂಕಿನ ತಡೆಗೆ ಜಿಲ್ಲಾಡಳಿತ ಎಲ್ಲಾ ರೀತಿಯ ಕ್ರಮಕೈಗೊಂಡಿದೆ. ತರಕಾರಿ, ದಿನಸಿ ವಸ್ತುಗಳನ್ನು ಹೆಚ್ಚಿನ ಧರಕ್ಕೆ ಮಾರಾಟ ಮಾಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು. ಜಿಲ್ಲೆಯ ಹಲವೆಡೆ ಬಂದ್ ಮಾಡಲಾಗಿರುವ ಖಾಸಗಿ ಕ್ಲಿನಿಕ್ಗಳನ್ನು ಓಪನ್ ಮಾಡಿ ಅಗತ್ಯ ಸೇವೆಯನ್ನು ಜನರಿಗೆ ಕೊಡಬೇಕು. ಈ ಕುರಿತು ವೈದ್ಯರಿಗೆ ನೋಟಿಸ್ ನೀಡುವಂತೆ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ. ನೋಟಿಸ್ ನೀಡಿದ್ಮೇಲೂ ಕ್ಲಿನಿಕ್ ಆರಂಭ ಮಾಡದಿದ್ದರೆ ಅಂಥವರ ಲೈಸನ್ಸ್ ರದ್ದು ಮಾಡಲು ಕ್ರಮತೆಗೆದುಕೊಳ್ಳುವುದಾಗಿ ಕೃಷಿ ಸಚಿವ ಬಿ ಸಿ ಪಾಟೀಲ್ ಎಚ್ಚರಿಸಿದ್ದಾರೆ.