ನಟ ರಜನಿಕಾಂತ್ ಬಿಜೆಪಿ ಸೇರ್ತಾರೆ ಎಂಬುದು ಹತ್ತು ವರ್ಷಗಳಿಂದ ಕೇಳಿ ಬರುತ್ತಿರುವ ಮಾತಾಗಿದೆ: ಸಿ.ಟಿ.ರವಿ
ಚಿಕ್ಕಮಗಳೂರು: ನಟ ರಜನಿಕಾಂತ್ ಅವರು ಬಿಜೆಪಿಗೆ ಬರುತ್ತಾರೆ ಎಂಬುದು ಕಳೆದ ಹತ್ತು ವರ್ಷಗಳಿಂದ ಕೇಳಿ ಬರುತ್ತಿರುವ ಮಾತು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅವರು ನಿರ್ಣಯ ಮಾಡದ ಹೊರತು ನಾವು ಪ್ರತಿಕ್ರಿಯಿಸೋದು ಸೂಕ್ತವಲ್ಲ. ಅವರು ನಿರ್ಣಯ ಮಾಡಿದ ನಂತರ ಸನ್ನಿವೇಶ, ಸಂದರ್ಭ ನೋಡಿ ಮುಂದಿನ ತೀರ್ಮಾನವನ್ನು ಅವರು ಕೈಗೊಳ್ಳುತ್ತಾರೆ. ನಂತರ ಪ್ರತಿಕ್ರಿಯೇ ನಾವು ನೀಡುತ್ತೇವೆ. ಈವರೆಗೂ ನಾನು ರಜನಿಕಾಂತ್ ಅವರ ಜೊತೆ ವೈಯಕ್ತಿಯವಾಗಿ ಮಾತನಾಡಿಲ್ಲ ಎಂದರು.