ಚೆನ್ನೈನಲ್ಲಿ ಚಂಡೆ ವಾದ್ಯ ಬಾರಿಸಿದ ಮಮತಾ ಬ್ಯಾನರ್ಜಿ.. ಗಮನಸೆಳೆದ ಪಶ್ಚಿಮ ಬಂಗಾಳ ಸಿಎಂ - ಪಶ್ಚಿಮ ಬಂಗಾಳ ರಾಜ್ಯಪಾಲ ಲಾ ಗಣೇಶನ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-16819766-thumbnail-3x2-lek.jpg)
ಚೆನ್ನೈ(ತಮಿಳುನಾಡು): ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಅವಕಾಶ ಸಿಕ್ಕಾಗಲೆಲ್ಲಾ ಜನರೊಂದಿಗೆ ಆತ್ಮೀಯವಾಗಿ ಬೆರೆಯುವುದನ್ನು ಕಾಣಬಹುದು. ಚೆನ್ನೈನಲ್ಲಿ ನಡೆದ ಪಶ್ಚಿಮ ಬಂಗಾಳ ರಾಜ್ಯಪಾಲ ಲಾ ಗಣೇಶನ್ ಅವರ ಕುಟುಂಬ ಕಾರ್ಯಕ್ರಮಕ್ಕೆ ಆಗಮಿಸಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಚಂಡೆ ವಾದ್ಯ ಬಾರಿಸುವ ಮೂಲಕ ಎಲ್ಲರ ಗಮನ ಸೆಳೆದರು. ಈ ಹಿಂದೆ ಸಹ ಅಲಿಪುರ್ದೌರ್ನಲ್ಲಿ ಆಯೋಜಿಸಿದ್ದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಭಾಗಿಯಾಗಿ ಜಾನಪದ ಕಲಾವಿದರೊಂದಿಗೆ ನೃತ್ಯ ಮಾಡಿದ್ದರು.
Last Updated : Feb 3, 2023, 8:31 PM IST