ಸವದತ್ತಿಯಲ್ಲಿ ಹು - ಧಾ ಪಾಲಿಕೆ ಗುತ್ತಿಗೆ ನೌಕರರ ಮೇಲೆ ಲಾಠಿ ಪ್ರಹಾರ, ಹಲವರಿಗೆ ಗಾಯ

By

Published : Feb 15, 2023, 8:09 PM IST

thumbnail

ಬೆಳಗಾವಿ: ಸಂಬಳ ನೀಡುವಂತೆ ಹಾಗೂ 350ಕ್ಕೂ ಹೆಚ್ಚು ನೌಕರರನ್ನು ಕೆಲಸದಿಂದ ವಜಾ ಮಾಡಿರುವುದನ್ನು ಖಂಡಿ‌ಸಿ ಹು-ಧಾ ಮಹಾನಗರ ಪಾಲಿಕೆ ಗುತ್ತಿಗೆ ನೌಕರರರು ಮಂಗಳವಾರ ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದ ಕರ್ನಾಟಕ ಜಲಮಂಡಳಿ ಜಾಕ್​ವೆಲ್ ಬಳಿ ಪ್ರತಿಭಟನೆ ಹಮ್ಮಿಕೊಂಡರು. 

 ಹು ಧಾ ಪಾಲಿಕೆ ಎದುರು ಕೆಲವು ದಿನಗಳಿಂದ ಪ್ರತಿಭಟನೆ ಕೈಗೊಂಡಿದ್ದ ಗುತ್ತಿಗೆ ನೌಕರರು, ಮಂಗಳವಾರ ಹುಬ್ಬಳ್ಳಿ-ಧಾರವಾಡಕ್ಕೆ ಸರಬರಾಜು ಆಗುವ ನೀರನ್ನು ಬಂದ್​ ಮಾಡುವುದಕ್ಕೆ ಸವದತ್ತಿಗೆ ಆಗಮಿಸಿದ್ದರು. ಪ್ರತಿಭಟನಾ ಸ್ಥಳಕ್ಕೆ  ತಹಸೀಲ್ದಾರ್ ಬಂದು ಮನವಿ ಸ್ವೀಕರಿಸಿದರು. 

ನಂತರ ಸವದತ್ತಿ ಜಾಕ್​ವೇಲ್ ಬಂದ್ ಮಾಡಲು ಬ್ಯಾರಿಕೇಡ್ ತಳ್ಳಿ ಮುನ್ನುಗ್ಗುತ್ತಿದ್ದ ಪ್ರತಿಭಟನಾಕಾರರ ಮೇಲೆ ಲಾಠಿ ಪ್ರಹಾರ ನಡೆಸಿದರು. ಈ ವೇಲೆ ಪ್ರತಿಭಟನಾ ನಿರತರಿಗೆ ಚಿಕ್ಕಪುಟ್ಟ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ,ಚಿಕಿತ್ಸೆ ನೀಡಲಾಯಿತು.

ಇದನ್ನೂಓದಿ:ವಿಡಿಯೋ: ಜೋಡಿ ಚಿರತೆ ಬೋನಿಗೆ ಬಿದ್ದ ಸ್ಥಳದಲ್ಲೇ ಮತ್ತೊಂದು 8 ತಿಂಗಳ ಚಿರತೆ ಮರಿ ಸೆರೆ

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.