thumbnail

By

Published : Feb 27, 2023, 9:08 AM IST

Updated : Feb 27, 2023, 11:20 AM IST

ETV Bharat / Videos

ಲಕ್ಷ್ಮಿ ಹೆಬ್ಬಾಳ್ಕರ್ ಕಾರಿಗೆ ಘೇರಾವ್ ಹಾಕಿದ ರಾಜಹಂಸಗಡ ಗ್ರಾಮಸ್ಥರು

ಬೆಳಗಾವಿ: ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್​ ಕಾರಿಗೆ ರಾಜಹಂಸಗಡ ಗ್ರಾಮಸ್ಥರು ಘೇರಾವ್ ಹಾಕಿ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಬೆಳಕಿಗೆ ಬಂದಿದೆ. ರಾಜಹಂಸಗಡದಲ್ಲಿ ನಿರ್ಮಾಣವಾಗಿರುವ ಶಿವಾಜಿ ಮಹಾರಾಜರ ಪ್ರತಿಮೆ ಅನಾವರಣಕ್ಕೆ ಹೆಬ್ಬಾಳ್ಕರ್​ ಸಿದ್ಧತೆ ಮಾಡಿಕೊಂಡಿದ್ದಾರೆ.  ಮಾರ್ಚ್ ಐದರಂದು  ಶಿವಾಜಿ ಮಹಾರಾಜರ ಪ್ರತಿಮೆ ಅನಾವರಣ  ಮಾಡುವುದಕ್ಕೆ ಪೂರ್ವ ಸಿದ್ದತೆ ಮಾಡಿಕೊಂಡಿದ್ದಾರೆ. 

ಇನ್ನು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಬಣ  ಮಾರ್ಚ್ 2ನೇ ತಾರೀಕು ಸಿಎಂ ಅವರ ಕೈಯಿಂದ ಪ್ರತಿಮೆ  ಉದ್ಘಾಟನೆಗೆ ತಿರ್ಮಾನ ಮಾಡಿದ್ದಾರೆ. ಇದು ಕಾಂಗ್ರೆಸ್​ - ಬಿಜೆಪಿ ನಡುವೆ ವಾಗ್ಯುದ್ಧಕ್ಕೆ ಕಾರಣವಾಗಿದೆ. ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಎಸ್​ಎಂ ಬೆಳವಟಕರ ಕರೆದುಕೊಂಡು ಸಂಧಾನಕ್ಕೆ ಹೋಗಿ ಬರುವಾಗ,   ರಾಜಹಂಸಗಡ ಗ್ರಾಮಸ್ಥರು  ಶಾಸಕಿ ಕಾರಿ ಘೇರಾವ್ ಹಾಕಿದ ಪ್ರಸಂಗ ನಡೆದಿದೆ ಎಂದು ತಿಳಿದು ಬಂದಿದೆ. ಪೊಲೀಸರು ಮಧ್ಯ ಪ್ರವೇಶಿಸಿ ಶಾಸಕಿ ಕಾರನ್ನು ಮುಂದೆ ಬಿಟ್ಟಿರುವ ಪ್ರಸಂಗ ನಡೆಯಿತು.

ಓದಿ:  ಕಲ್ಯಾಣ‌ ಕರ್ನಾಟಕ‌ ಸಮಗ್ರ ಅಭಿವೃದ್ದಿಗೆ ಬದ್ದ: ಮುಖ್ಯಮಂತ್ರಿ ಬಸವರಾಜ‌ ಬೊಮ್ಮಾಯಿ

Last Updated : Feb 27, 2023, 11:20 AM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.