thumbnail

By

Published : Jul 31, 2022, 8:36 PM IST

Updated : Feb 3, 2023, 8:25 PM IST

ETV Bharat / Videos

ಸಕ್ಕರೆ ನಾಡಲ್ಲಿ ಅಣ್ತಮ್ಮನ ಕಣ್ಣೀರಧಾರೆ.. ತಂದೆಯ ವಿಡಿಯೋ ನೋಡಿ ಗಳಗಳನೇ ಅತ್ತ ಹೆಚ್​ಡಿಕೆ-ರೇವಣ್ಣ

ಮಂಡ್ಯ: ಜಿಲ್ಲೆಯ ನಾಗಮಂಗಲ ವಿಧಾನಸಭಾ ಕ್ಷೇತ್ರದ ಚೀಣ್ಯ ಗ್ರಾಮದಲ್ಲಿ ಭಾನುವಾರ ಜೆಡಿಎಸ್ ಸಮಾರಂಭದಲ್ಲಿ ಮಾಜಿ ಸಿಎಂ ಹೆಚ್. ಡಿ ಕುಮಾರಸ್ವಾಮಿ ಹಾಗೂ ಹೆಚ್​. ಡಿ ರೇವಣ್ಣ ತಮ್ಮ ತಂದೆ ದೇವೇಗೌಡರನ್ನು ಪರದೆ ಮೇಲೆ ನೋಡಿ ಕಣ್ಣೀರು ಹಾಕಿದರು. ಈ ಕಾರ್ಯಕ್ರಮದಲ್ಲಿ ಕಾರ್ಯಕರ್ತರು, ಅಭಿಮಾನಿಗಳು ಸಹ ಭಾಗಿಯಾಗಿದ್ದರು. ಹೆಚ್. ಡಿ ದೇವೇಗೌಡರು ಮನೆಯಲ್ಲೇ ಕುಳಿತು ಕಾರ್ಯಕ್ರಮವನ್ನು ವೀಕ್ಷಿಸುವ ವಿಡಿಯೋವನ್ನು ಸ್ಕ್ರೀನ್​ ಪ್ಲೇ ಮಾಡಲಾಗಿತ್ತು. ಇದನ್ನುಇಲ್ಲಿ ವೇದಿಕೆಯಲ್ಲಿ ಸ್ಕ್ರೀನ್​ ಪ್ಲೇ ಆಗುತ್ತಿದ್ದಂತೆ ಮಾಜಿ ಸಿಎಂ ಹೆಚ್. ಡಿ ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ರೇವಣ್ಣ ವೇದಿಕೆ ಮೇಲೆಯೇ ಕಣ್ಣೀರಿಟ್ಟಿದ್ದಾರೆ. ದೇವೇಗೌಡರು ಅನಾರೋಗ್ಯದ ಹಿನ್ನೆಲೆ ಈ ಸಮಾವೇಶಕ್ಕೆ ಬಂದಿರಲಿಲ್ಲ.
Last Updated : Feb 3, 2023, 8:25 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.