ಸಂವಿಧಾನವನ್ನು ಬೈಪಾಸ್ ಮಾಡಿ ಕೃಷಿ ಕಾನೂನುಗಳನ್ನು ಜಾರಿಗೆ ತರಲಾಗಿದೆ : ಎಎಪಿ ನಾಯಕ
![ETV Thumbnail thumbnail](https://etvbharatimages.akamaized.net/etvbharat/prod-images/320-214-9941721-1107-9941721-1608441616513.jpg)
ನವದೆಹಲಿ: ಕೃಷಿ ಕಾನೂನುಳನ್ನು ವಿರೋಧಿಸಿ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಸಚಿವ ಗೋಪಾಲ್ ರಾಯ್ ಮತ್ತು ಇತರ ಇಬ್ಬರು ಶಾಸಕರು ಕೃಷಿ ಕಾನೂನುಗಳ ಪ್ರತಿಗಳನ್ನು ಹರಿದು ಹಾಕಿದರು. ಆನಂತರ ಅವುಗಳನ್ನು ಸುಟ್ಟು ಹಾಕಲಾಯಿತು. ಆಡಳಿತ ಪಕ್ಷದ ಶಾಸಕರ ಈ ದುರ್ವರ್ತನೆ ಹಿನ್ನೆಲೆ ಸದನವನ್ನು ಮುಂದೂಡಲಾಯಿತು. ಈ ಸಂಬಂಧ ಈಟಿವಿ ಭಾರತ ದೆಹಲಿಯ ಮುಖ್ಯಸ್ಥ ವಿಶಾಲ್ ಸೂರ್ಯಕಾಂತ್ ಅವರು ಎಎಪಿಯ ಹಿರಿಯ ಮುಖಂಡ ಸೋಮನಾಥ್ ಭಾರತಿ ಅವರೊಂದಿಗೆ ನಡೆಸಿದ ವಿಶೇಷ ಸಂವಾದ ಇಲ್ಲಿದೆ.