ಮುಂದುವರೆದ ಅನ್ನದಾತರ ಹೋರಾಟ: ಪ್ರತಿಭಟನಾ ಸ್ಥಳದಲ್ಲಿ ಇಟ್ಟಿಗೆ ಕಟ್ಟೆ ನಿರ್ಮಾಣ!
ನವದೆಹಲಿ: ಕೇಂದ್ರ ಸರ್ಕಾರದ ಕೃಷಿ ಮಸೂದೆಗಳ ವಿರುದ್ಧ ರೈತರ ಹೋರಾಟ ಮುಂದುವರೆದಿದ್ದು, ಇದೀಗ ಮಳೆಯಿಂದ ರಕ್ಷಣೆ ಪಡೆಯಲು ಇಟ್ಟಿಗೆ ಬಳಸಿ ಕಟ್ಟೆ ನಿರ್ಮಿಸಿದ್ದಾರೆ. ಕಳೆದ ಎರಡು ದಿನಗಳಿಂದ ದೆಹಲಿಯಲ್ಲಿ ಮಳೆಯಾಗುತ್ತಿದ್ದು, ಅದರಿಂದ ರಕ್ಷಣೆ ಪಡೆಯಲು ಇಟ್ಟಿಗೆ ಹಾಗೂ ಸಿಮೆಂಟ್ ಬಳಕೆ ಮಾಡಿ ಕಟ್ಟೆ ನಿರ್ಮಿಸಿಕೊಂಡಿದ್ದಾರೆ.