ವಿಜಯಪುರ : ರಾಜ್ಯದಲ್ಲಿ ಸಂಚಲನ ಮೂಡಿಸಿರುವ ಐಎಂಎ ಜುವೆಲ್ಸರ್ ವಂಚನೆ ಪ್ರಕರಣ ವಿಜಯಪುರಕ್ಕೂ ಹಬ್ಬಿರುವ ಸಂಶಯದ ಹಿನ್ನೆಲೆಯಲ್ಲಿ ವಂಚನೆಗೊಳಗಾದವರು ದೂರು ಸಲ್ಲಿಸಲು ವಿಜಯಪುರ ಜಿಲ್ಲಾ ಪೊಲೀಸ್ ಇಲಾಖೆ ಅವಕಾಶ ಮಾಡಿಕೊಟ್ಟಿದೆ.
ಈ ಕುರಿತು ಪ್ರಕಟಣೆ ನೀಡಿರುವ ಎಸ್ಪಿ ಪ್ರಕಾಶ್ ನಿಕಂ ಐಎಂಎ ವಂಚನೆಗೊಳಗಾಗಿದ್ದರೆ ನಗರದ ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ದಾಖಲೆ ಸಮೇತ ದೂರು ದಾಖಲಿಸುವಂತೆ ಮನವಿ ಮಾಡಿದ್ದಾರೆ.
ಇದಕ್ಕಾಗಿ ಗಾಂಧಿಚೌಕ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಕೌಂಟರ್ ತೆರೆಯಲಾಗಿದ್ದು, ಅಲ್ಲಿ ದೂರು ಸಲ್ಲಿಸುವಂತೆ ತಿಳಿಸಿದ್ದಾರೆ. ನಗದು, ಬಂಗಾರ ಸೇರಿದಂತೆ ಯಾವುದೇ ಆಸ್ತಿ ಪತ್ರ ಇಟ್ಟಿದ್ದರೆ ಅದರ ದಾಖಲೆ ಸಲ್ಲಿಸಿ ರಶೀದಿ ಪಡೆಯುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.