ETV Bharat / state

ಚಿನ್ನದ ವ್ಯಾಪಾರಿಗೆ ಸೆಲ್ಸ್​ಮೆನ್​​​​ಗಳಿಂದ ಕೋಟ್ಯಂತರ ರೂ ಮೌಲ್ಯದ ಚಿನ್ನಾಭರಣ ವಂಚನೆ

ವಿಜಯಪುರ ಜಿಲ್ಲೆಯಲ್ಲಿ ಇತ್ತೀಚಿಗೆ ವಂಚನೆ, ಆನ್​ಲೈನ್​ ಮೋಸ ಪ್ರಕರಣಗಳು ಹೆಚ್ಚಾಗುತ್ತಿವೆ.

author img

By

Published : Nov 21, 2022, 8:05 PM IST

ವಿಜಯಪುರ
ವಿಜಯಪುರ

ವಿಜಯಪುರ: ಐತಿಹಾಸಿಕ ಗೋಲಗುಮ್ಮಟ ಸ್ಮಾರಕ ಹೊಂದಿರುವ ವಿಜಯಪುರ ಜಿಲ್ಲೆಯಲ್ಲಿ ಇತ್ತೀಚಿಗೆ ವಂಚನೆ, ಆನ್​ಲೈನ್​ ಮೋಸ ಪ್ರಕರಣಗಳು ಹೆಚ್ಚಾಗುತ್ತಿವೆ. ಒಂದು ವಾರದಲ್ಲಿ ಮೂರು ವಿಭಿನ್ನ ಮೋಸದ ಪ್ರಕರಣಗಳು ದಾಖಲಾಗಿರುವುದು ಇದಕ್ಕೆ ಸಾಕ್ಷಿಯಾಗಿದೆ.

ಫೇಸ್​ಬುಕ್​​​ ಗೆಳತಿ ಸ್ನೇಹ ಮಾಡಿ ಸಿಂದಗಿಯ ಯುವಕನೊಬ್ಬ 39 ಲಕ್ಷ ರೂ. ಕಳೆದುಕೊಂಡಿದ್ದರೆ, ಬ್ಯಾಂಕ್ ಸಾಲ‌ ಕೊಡಿಸುವುದಾಗಿ ವ್ಯಕ್ತಿಯೊಬ್ಬ 11ಲಕ್ಷ ರೂ. ವಂಚನೆ ಮಾಡಿದ್ದಾನೆ. ಈ ಎರಡು ಪ್ರಕರಣದ ತನಿಖೆ ನಡೆಯುತ್ತಿರುವಾಗಲೇ ವಿಜಯಪುರ ನಗರದ ಚಿನ್ನದ ವ್ಯಾಪಾರಿಯೊಬ್ಬನಿಗೆ ಆತನ‌ ಅಂಗಡಿ ಸೆಲ್ಸ್‌ಮೆನ್​ಗಳಾಗಿ‌ ಕೆಲಸ ಮಾಡುತ್ತಿದ್ದ ಇಬ್ಬರು ಕೋಟ್ಯಂತರ ರೂ. ಬೆಲೆ ಬಾಳುವ ಚಿನ್ನಾಭರಣ ಲಪಟಾಯಿಸಿ ಪರಾರಿಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ನಡೆದಿದ್ದೇನು?: ವಿಜಯಪುರ ನಗರದ ರಾಮಮಂದಿರ ರಸ್ತೆಯ ಬಾಲಾಜಿ ಮಂದಿರ ಸಮೀಪ ಇರುವ ಕಾವ್ಯಾ ಜುವೆಲ್ಸ್ ಅಂಗಡಿಯಲ್ಲಿ ಈ ವಂಚನೆ ನಡೆದಿದೆ. ಜುವೆಲ್ಸ್ ಅಂಗಡಿ ಮಾಲೀಕ ಪರೇಶ ಗಜರಾಜ್ ಜೈನ್ ಅವರ ಮಾಲೀಕತ್ವದ ಹೋಲ್​ಸೆಲ್​ ಅಂಗಡಿಯಲ್ಲಿ ಕಳೆದ ಎರಡು ವರ್ಷಗಳಿಂದ ಮುಂಬೈ ಮೂಲದ ಜಗದೀಶ ಕಾಂತಿಲಾಲ್ ಗೋಮಾವತ್ ಹಾಗೂ ಉತ್ತರ ಪ್ರದೇಶ ಮೂಲದ ಧರ್ಮೇಂದ್ರ ಗೌರ ಎಂಬುವರು ಸೆಲ್ಸ್​​ಮನ್​​​ಗಳಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇವರು ಜಿಲ್ಲೆ ಹಾಗೂ ಹೊರ ಜಿಲ್ಲೆಯ ರಿಟೇಲ್ ಚಿನ್ನದ ವ್ಯಾಪಾರಿಗಳಿಗೆ ಪರೇಶ ಜೈನ್ ನೀಡುವ ಚಿನ್ನಾಭರಣ ಸರಬರಾಜು ಮಾಡುತ್ತಿದ್ದರು.

ಇದೇ ನವೆಂಬರ್ 13 ರಂದು ಚಿನ್ನದ ವ್ಯಾಪಾರಿ ಪರೇಶ ಜೈನ್ ತನ್ನ ಇಬ್ಬರು ಸೆಲ್ಸ್ ಮೆನ್​ಗಳಿಗೆ 2,10, 71,266 ಕೋಟಿ ರೂ. ಮೌಲ್ಯದ 4969.6 ಗ್ರಾಂ ಬಂಗಾರದ ಆಭರಣಗಳನ್ನು‌ ನೀಡಿ ಹುಬ್ಬಳ್ಳಿ, ರಾಮದುರ್ಗ, ಸವದತ್ತಿ, ಮುಧೋಳ ಹಾಗೂ ಜಮಖಂಡಿಯಲ್ಲಿರುವ ರಿಟೇಲ್ ಚಿನ್ನಾಭರಣ ಮಳಿಗೆಗಳಿಗೆ ನೀಡಿ ಹಣ ಪಡೆದುಕೊಂಡು ಬನ್ನಿ ಎಂದು ಹೇಳಿ ಕಳುಹಿಸಿದ್ದರು.‌

ಆದರೆ ಸೆಲ್ಸ್​​​ಮನ್​ಗಳಾದ ಜಗದೀಶ ಗೋಮಾವತ್ ಹಾಗೂ ಧರ್ಮೇಂದ್ರ ಗೌರ ಚಿನ್ನಾಭರಣ ಪಡೆದು ಚಿನ್ನದ ವ್ಯಾಪಾರಿಗಳಿಗೆ ನೀಡದೇ 2.10 ಕೋಟಿಗಿಂತ ಅಧಿಕ ಮೌಲ್ಯದ ಚಿನ್ನಾಭರಣ ದೋಚಿಕೊಂಡು ಪರಾರಿಯಾಗಿದ್ದಾರೆ. ಈ ಸಂಬಂಧ ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ಇಬ್ಬರು ಸೆಲ್ಸ್ ಮೆನ್​ಗಳ ವಿರುದ್ಧ ನಂಬಿಕೆ ದ್ರೋಹ, ವಂಚನೆ ಪ್ರಕರಣ ದಾಖಲಿಸಿದ್ದಾರೆ.

ಓದಿ: ಸಚಿವಾಲಯದ ಕಾರು ಬಳಸಿ ಸುಮಾರು ಕೋಟಿ ರೂ.ವಂಚನೆ: ಆರೋಪ ಮುಕ್ತಿಗೊಳಿಸಲು ಹೈಕೋರ್ಟ್ ನಿರಾಕರಣೆ

ವಿಜಯಪುರ: ಐತಿಹಾಸಿಕ ಗೋಲಗುಮ್ಮಟ ಸ್ಮಾರಕ ಹೊಂದಿರುವ ವಿಜಯಪುರ ಜಿಲ್ಲೆಯಲ್ಲಿ ಇತ್ತೀಚಿಗೆ ವಂಚನೆ, ಆನ್​ಲೈನ್​ ಮೋಸ ಪ್ರಕರಣಗಳು ಹೆಚ್ಚಾಗುತ್ತಿವೆ. ಒಂದು ವಾರದಲ್ಲಿ ಮೂರು ವಿಭಿನ್ನ ಮೋಸದ ಪ್ರಕರಣಗಳು ದಾಖಲಾಗಿರುವುದು ಇದಕ್ಕೆ ಸಾಕ್ಷಿಯಾಗಿದೆ.

ಫೇಸ್​ಬುಕ್​​​ ಗೆಳತಿ ಸ್ನೇಹ ಮಾಡಿ ಸಿಂದಗಿಯ ಯುವಕನೊಬ್ಬ 39 ಲಕ್ಷ ರೂ. ಕಳೆದುಕೊಂಡಿದ್ದರೆ, ಬ್ಯಾಂಕ್ ಸಾಲ‌ ಕೊಡಿಸುವುದಾಗಿ ವ್ಯಕ್ತಿಯೊಬ್ಬ 11ಲಕ್ಷ ರೂ. ವಂಚನೆ ಮಾಡಿದ್ದಾನೆ. ಈ ಎರಡು ಪ್ರಕರಣದ ತನಿಖೆ ನಡೆಯುತ್ತಿರುವಾಗಲೇ ವಿಜಯಪುರ ನಗರದ ಚಿನ್ನದ ವ್ಯಾಪಾರಿಯೊಬ್ಬನಿಗೆ ಆತನ‌ ಅಂಗಡಿ ಸೆಲ್ಸ್‌ಮೆನ್​ಗಳಾಗಿ‌ ಕೆಲಸ ಮಾಡುತ್ತಿದ್ದ ಇಬ್ಬರು ಕೋಟ್ಯಂತರ ರೂ. ಬೆಲೆ ಬಾಳುವ ಚಿನ್ನಾಭರಣ ಲಪಟಾಯಿಸಿ ಪರಾರಿಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ನಡೆದಿದ್ದೇನು?: ವಿಜಯಪುರ ನಗರದ ರಾಮಮಂದಿರ ರಸ್ತೆಯ ಬಾಲಾಜಿ ಮಂದಿರ ಸಮೀಪ ಇರುವ ಕಾವ್ಯಾ ಜುವೆಲ್ಸ್ ಅಂಗಡಿಯಲ್ಲಿ ಈ ವಂಚನೆ ನಡೆದಿದೆ. ಜುವೆಲ್ಸ್ ಅಂಗಡಿ ಮಾಲೀಕ ಪರೇಶ ಗಜರಾಜ್ ಜೈನ್ ಅವರ ಮಾಲೀಕತ್ವದ ಹೋಲ್​ಸೆಲ್​ ಅಂಗಡಿಯಲ್ಲಿ ಕಳೆದ ಎರಡು ವರ್ಷಗಳಿಂದ ಮುಂಬೈ ಮೂಲದ ಜಗದೀಶ ಕಾಂತಿಲಾಲ್ ಗೋಮಾವತ್ ಹಾಗೂ ಉತ್ತರ ಪ್ರದೇಶ ಮೂಲದ ಧರ್ಮೇಂದ್ರ ಗೌರ ಎಂಬುವರು ಸೆಲ್ಸ್​​ಮನ್​​​ಗಳಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇವರು ಜಿಲ್ಲೆ ಹಾಗೂ ಹೊರ ಜಿಲ್ಲೆಯ ರಿಟೇಲ್ ಚಿನ್ನದ ವ್ಯಾಪಾರಿಗಳಿಗೆ ಪರೇಶ ಜೈನ್ ನೀಡುವ ಚಿನ್ನಾಭರಣ ಸರಬರಾಜು ಮಾಡುತ್ತಿದ್ದರು.

ಇದೇ ನವೆಂಬರ್ 13 ರಂದು ಚಿನ್ನದ ವ್ಯಾಪಾರಿ ಪರೇಶ ಜೈನ್ ತನ್ನ ಇಬ್ಬರು ಸೆಲ್ಸ್ ಮೆನ್​ಗಳಿಗೆ 2,10, 71,266 ಕೋಟಿ ರೂ. ಮೌಲ್ಯದ 4969.6 ಗ್ರಾಂ ಬಂಗಾರದ ಆಭರಣಗಳನ್ನು‌ ನೀಡಿ ಹುಬ್ಬಳ್ಳಿ, ರಾಮದುರ್ಗ, ಸವದತ್ತಿ, ಮುಧೋಳ ಹಾಗೂ ಜಮಖಂಡಿಯಲ್ಲಿರುವ ರಿಟೇಲ್ ಚಿನ್ನಾಭರಣ ಮಳಿಗೆಗಳಿಗೆ ನೀಡಿ ಹಣ ಪಡೆದುಕೊಂಡು ಬನ್ನಿ ಎಂದು ಹೇಳಿ ಕಳುಹಿಸಿದ್ದರು.‌

ಆದರೆ ಸೆಲ್ಸ್​​​ಮನ್​ಗಳಾದ ಜಗದೀಶ ಗೋಮಾವತ್ ಹಾಗೂ ಧರ್ಮೇಂದ್ರ ಗೌರ ಚಿನ್ನಾಭರಣ ಪಡೆದು ಚಿನ್ನದ ವ್ಯಾಪಾರಿಗಳಿಗೆ ನೀಡದೇ 2.10 ಕೋಟಿಗಿಂತ ಅಧಿಕ ಮೌಲ್ಯದ ಚಿನ್ನಾಭರಣ ದೋಚಿಕೊಂಡು ಪರಾರಿಯಾಗಿದ್ದಾರೆ. ಈ ಸಂಬಂಧ ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ಇಬ್ಬರು ಸೆಲ್ಸ್ ಮೆನ್​ಗಳ ವಿರುದ್ಧ ನಂಬಿಕೆ ದ್ರೋಹ, ವಂಚನೆ ಪ್ರಕರಣ ದಾಖಲಿಸಿದ್ದಾರೆ.

ಓದಿ: ಸಚಿವಾಲಯದ ಕಾರು ಬಳಸಿ ಸುಮಾರು ಕೋಟಿ ರೂ.ವಂಚನೆ: ಆರೋಪ ಮುಕ್ತಿಗೊಳಿಸಲು ಹೈಕೋರ್ಟ್ ನಿರಾಕರಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.