ಶಿರಸಿ: ವಿಜಯಪುರದ ಸಂಸದ, ಕೇಂದ್ರ ಸಚಿವ ರಮೇಶ ಜಿಗಜಿಣಗಿ ಅವರ ಮಗ ಆನಂದ ರಮೇಶ ಜಿಗಜಿಣಗಿ ಅವರ ಕಾರಿಗೆ ಲಾರಿ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭಸಿಲ್ಲ.
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ರಾಷ್ಟ್ರೀಯ ಹೆದ್ದಾರಿ-63, ಕೆ.ಮಿಲನ್ ಹೋಟೆಲ್ ಸಮೀಪ ಆನಂದ ಜಿಗಜಿಣಗಿ ಅವರು ಕುಟುಂಬ ಸಮೇತ ಕಾರಿನಲ್ಲಿ ಹೋಗುವಾಗ ಈ ಘಟನೆ ನಡೆದಿದೆ.
ಆನಂದ ಜಿಗಜಿಣಗಿ ತಮ್ಮ ಕಾರಿನಲ್ಲಿ ( ಕೆ.ಎ-04/ಎಮ್.ಟಿ-3247 ) ಉಡುಪಿಯಿಂದ ವಿಜಯಪುರಕ್ಕೆ ಪ್ರಯಾಣ ಮಾಡುತ್ತಿದ್ದರು. ಅಂಕೋಲಾ ಕಡೆಯಿಂದ ಬಂದ ಲಾರಿ (ಕೆ.ಎ -30/ಎ -1299 ) ಡಿಕ್ಕಿ ಹೊಡೆದಿದೆ. ಘಟನೆಯಿಂದ ಕಾರು ಜಖಂ ಗೊಂಡಿದೆ. ಯಲ್ಲಾಪುರ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.