ಕಾರವಾರ: ಹೊಟ್ಟೆಪಾಡಿಗಾಗಿ ನೇಪಾಳದಿಂದ ಬಂದ ಕಾರ್ಮಿಕರಿಗೆ ಕೆಲಸವಿಲ್ಲದಂತಾಗಿದ್ದು, ಕೈಯಲ್ಲಿ ಕಾಸಿಲ್ಲದೆ, ಊಟಕ್ಕೂ ಪರದಾಡುವಂತಾಗಿದೆ.
ನೇಪಾಳದಿಂದ ಉತ್ತರ ಕನ್ನಡದ ಕಾರವಾರ, ಅಂಕೋಲಗಳಲ್ಲಿ ಹಲವು ವರ್ಷಗಳಿಂದ ಹೋಟೆಲ್ಗಳಲ್ಲಿ ದುಡಿಯುತ್ತಿದ್ದಾರೆ. ಲಾಕ್ಡೌನ್ ಕಾರಣ ಹೋಟೆಲ್ಗಳು ಬಂದ್ ಆಗಿವೆ.
ಮಾಲೀಕರು ಕೆಲಸವಿಲ್ಲದ ಕಾರಣ ಸಂಬಳ ಕೂಡ ನೀಡುತ್ತಿಲ್ಲ. ನಮ್ಮ ಬಳಿಯೂ ಹಣವಿಲ್ಲ. ಊರಿಗೂ ಹೋಗಲಾಗದೆ, ಇಲ್ಲಿಯೂ ಇರಲಾಗದೆ ತೊಂದರೆ ಅನುಭವಿಸುತ್ತಿದ್ದೇವೆ. ಸರ್ಕಾರ ಕೂಡಲೇ ನಮ್ಮನ್ನು ಮನೆಗೆ ಕಳುಹಿಸುವ ವ್ಯವಸ್ಥೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.