ಕಾರವಾರ : ವ್ಯಕ್ತಿಯೋರ್ವ ರೈಲ್ವೆ ಹಳಿ ಮೇಲೆ ಮಲಗಿ ಆತ್ಮಹತ್ಯೆಗೆ ಶರಣಾದ ಘಟನೆ ಕುಮಟಾ ತಾಲೂಕಿನ ಕಲಕೋಡ ಬಳಿ ಸಂಭವಿಸಿದೆ.
ಕಲಕೋಡ ನಿವಾಸಿ ರಾಜು ವೆಂಕಟ ಗೌಡ (45) ಮೃತ ವ್ಯಕ್ತಿ. ಈತ ಜೀವನದಲ್ಲಿ ಜುಗುಪ್ಸೆಗೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಹೇಳಲಾಗ್ತಿದೆ. ರೈಲು ದೇಹದ ಮೇಲೆ ಹರಿದ ಪರಿಣಾಮ ಮೃತದೇಹ ಛಿದ್ರವಾಗಿದೆ.
ಓದಿ : ಕಾರವಾರವನ್ನು ಮಹಾರಾಷ್ಟ್ರಕ್ಕೆ ಸೇರಿಸಿದ ಬಿಎಸ್ಎನ್ಎಲ್ ಕಂಪನಿ..
ಸ್ಥಳಕ್ಕೆ ರೈಲ್ವೆ ಪೊಲೀಸರು, ಕುಮಟಾ ಪಿಎಸ್ಐ ರವಿ ಗುಡ್ಡಿ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.