ತುಮಕೂರು: ಸರಿಯಾಗಿ ಕಾರ್ಯನಿರ್ವಹಿಸದ ಶುದ್ದ ನೀರಿನ ಘಟಕಗಳನ್ನು ಮಹಾನಗರ ಪಾಲಿಕೆ ಅಧಿಕಾರಿಗಳು ವಶಕ್ಕೆ ಪಡೆಯುವ ವೇಳೆ ಪ್ರಶ್ನಿಸಲು ಮುಂದಾದ ಮಾಜಿ ಕಾರ್ಪೋರೇಟರ್ ಪುತ್ರನನ್ನು ತುಮಕೂರು ಮಹಾನಗರ ಪಾಲಿಕೆ ಆಯುಕ್ತ ಭೂಬಾಲನ್ ತೀವ್ರ ತರಾಟೆಗೆ ತೆಗೆದುಕೊಂಡರು.
ವಿದ್ಯುತ್ ಬಿಲ್ ಪಾವತಿ ಸೇರಿದಂತೆ ಘಟಕಗಳನ್ನು ಸರಿಯಾಗಿ ನಿರ್ವಹಿಸದ ಹಿನ್ನೆಲೆಯಲ್ಲಿ ನೀರಿನ ಘಟಕಗಳನ್ನು ವಶಕ್ಕೆ ಪಡೆಯಲು ಪಾಲಿಕೆ ಅಧಿಕಾರಿಗಳು ಮುಂದಾದ್ರು. ಈ ವೇಳೆ 24ನೇ ವಾರ್ಡ್ನ ನೀರಿನ ಘಟಕದ ನಿರ್ವಹಣೆಯ ಉಸ್ತುವಾರಿವಹಿಸಿರುವ ವಸೀಂಖಾನ್ ಶೇರಾನಿ ಎಂಬುವರು 'ನಾನು ಮಾಜಿ ಕಾರ್ಪೋರೇಟರ್ ಮಗ' ಎಂದು ಆಕ್ಷೇಪ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಕೋಪಗೊಂಡ ಪಾಲಿಕೆ ಆಯುಕ್ತ ಭೂಬಾಲನ್ 'ಏನಿವಾಗ ಮಾಜಿ ಕಾರ್ಪೋರೇಟರ್ ಮಗ ಅಂದ್ರೆ ಕೊಂಬಿದಿಯಾ' ಎಂದು ಚಳಿ ಬಿಡಿಸಿದರು.