ETV Bharat / state

ಸ್ವಯಂ ಪ್ರೇರಿತ ಲಾಕ್​ಡೌನ್​ಗೆ ಜನರಲ್ಲಿ ಅರಿವು ಮೂಡಿಸಿ: ಶಾಸಕರ ಸೂಚನೆ

author img

By

Published : Jul 8, 2020, 3:49 PM IST

ಗಂಗಾವತಿಯಲ್ಲಿ ಟ್ರಾವೆಲ್ ಹಿಸ್ಟರಿ ಇಲ್ಲದವರಿಗೆ ಕೊರೊನಾ ಪಾಸಿಟಿವ್ ಕಂಡುಬರುತ್ತಿದೆ. ಇದಕ್ಕೆ ಕಡಿವಾಣ ಹಾಕುವುದಕ್ಕೆ ಇನ್ನು ಮುಂದೆ ಸ್ವಯಂಪ್ರೇರಿತ ಲಾಕ್​ಡೌನ್ ಅಗತ್ಯವೆಂದು ಶಾಸಕ ಪರಣ್ಣ ಮುನವಳ್ಳಿ ಅಭಿಪ್ರಾಯಪಟ್ಟರು.

mla-paranna-munavalli
ಶಾಸಕ ಪರಣ್ಣ ಮುನವಳ್ಳಿ

ಗಂಗಾವತಿ: ನಗರದಲ್ಲಿ ಕೊರೊನಾ ಪಾಸಿಟಿವ್​​ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ, ಜನ ಹಾಗೂ ವರ್ತಕರು ಸ್ವಯಂ‌ ಪ್ರೇರಿತವಾಗಿ ಲಾಕ್​ಡೌನ್​ಗೆ​ ಸಹಕರಿಸುವಂತೆ ಅರಿವು ಮೂಡಿಸಬೇಕು ಎಂದು ಶಾಸಕ ಪರಣ್ಣ ಮುನವಳ್ಳಿ ಹೇಳಿದರು.

ತಮ್ಮ ಮನೆಯಲ್ಲಿಯೇ ನಗರಸಭೆ, ಪೊಲೀಸ್, ಕಂದಾಯ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿದ ಅವರು, ಸಂಜೆ 4 ಗಂಟೆ ಬಳಿಕ ಸ್ವಯಂ ಪ್ರೇರಣೆಯಿಂದ ಅಂಗಡಿ‌ ಮುಂಗಟ್ಟುಗಳನ್ನು ಬಂದ್ ಮಾಡಲು ವರ್ತಕರಲ್ಲಿ ಜಾಗೃತಿ ಮೂಡಿಸುವ ಕೆಲಸ ನಗರಸಭೆ ಹಾಗೂ ಪೊಲೀಸ್ ಇಲಾಖೆಯಿಂದ ಆಗಬೇಕು ಎಂದರು.

ಕೊರೊನಾ ನಿಯಂತ್ರಣಕ್ಕೆ ಸ್ವಯಂಪ್ರೇರಿತ ಲಾಖ್​ಡೌನ್​ ಅಗತ್ಯvಎಂದ ಶಾಸಕರು

ನಗರದಲ್ಲಿ ಟ್ರಾವೆಲ್ ಹಿಸ್ಟರಿ ಇಲ್ಲದವರಿಗೆ ಕೊರೊನಾ ಪಾಸಿಟಿವ್ ಕಂಡುಬರುತ್ತಿದ್ದು, ಇದಕ್ಕೆ ಕಡಿವಾಣ ಹಾಕುವುದಕ್ಕೆ ಸ್ವಯಂಪ್ರೇರಿತ ಲಾಕ್​ಡೌನ್ ಅಗತ್ಯ ಎಂದರು.

ಸಭೆಯಲ್ಲಿ ಡಿವೈಎಸ್​ಪಿ ಬಿ.ಪಿ. ಚಂದ್ರಶೇಖರ, ತಹಶೀಲ್ದಾರ್​ ಎಲ್. ಡಿ. ಚಂದ್ರಕಾಂತ, ತಾಲೂಕು ಪಂಚಾಯತ್ ಇಒ ಡಾ.ಮೋಹನ್, ಸೆರಿದಂತೆ ಇತರರು ಇದ್ದರು.

ಗಂಗಾವತಿ: ನಗರದಲ್ಲಿ ಕೊರೊನಾ ಪಾಸಿಟಿವ್​​ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ, ಜನ ಹಾಗೂ ವರ್ತಕರು ಸ್ವಯಂ‌ ಪ್ರೇರಿತವಾಗಿ ಲಾಕ್​ಡೌನ್​ಗೆ​ ಸಹಕರಿಸುವಂತೆ ಅರಿವು ಮೂಡಿಸಬೇಕು ಎಂದು ಶಾಸಕ ಪರಣ್ಣ ಮುನವಳ್ಳಿ ಹೇಳಿದರು.

ತಮ್ಮ ಮನೆಯಲ್ಲಿಯೇ ನಗರಸಭೆ, ಪೊಲೀಸ್, ಕಂದಾಯ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿದ ಅವರು, ಸಂಜೆ 4 ಗಂಟೆ ಬಳಿಕ ಸ್ವಯಂ ಪ್ರೇರಣೆಯಿಂದ ಅಂಗಡಿ‌ ಮುಂಗಟ್ಟುಗಳನ್ನು ಬಂದ್ ಮಾಡಲು ವರ್ತಕರಲ್ಲಿ ಜಾಗೃತಿ ಮೂಡಿಸುವ ಕೆಲಸ ನಗರಸಭೆ ಹಾಗೂ ಪೊಲೀಸ್ ಇಲಾಖೆಯಿಂದ ಆಗಬೇಕು ಎಂದರು.

ಕೊರೊನಾ ನಿಯಂತ್ರಣಕ್ಕೆ ಸ್ವಯಂಪ್ರೇರಿತ ಲಾಖ್​ಡೌನ್​ ಅಗತ್ಯvಎಂದ ಶಾಸಕರು

ನಗರದಲ್ಲಿ ಟ್ರಾವೆಲ್ ಹಿಸ್ಟರಿ ಇಲ್ಲದವರಿಗೆ ಕೊರೊನಾ ಪಾಸಿಟಿವ್ ಕಂಡುಬರುತ್ತಿದ್ದು, ಇದಕ್ಕೆ ಕಡಿವಾಣ ಹಾಕುವುದಕ್ಕೆ ಸ್ವಯಂಪ್ರೇರಿತ ಲಾಕ್​ಡೌನ್ ಅಗತ್ಯ ಎಂದರು.

ಸಭೆಯಲ್ಲಿ ಡಿವೈಎಸ್​ಪಿ ಬಿ.ಪಿ. ಚಂದ್ರಶೇಖರ, ತಹಶೀಲ್ದಾರ್​ ಎಲ್. ಡಿ. ಚಂದ್ರಕಾಂತ, ತಾಲೂಕು ಪಂಚಾಯತ್ ಇಒ ಡಾ.ಮೋಹನ್, ಸೆರಿದಂತೆ ಇತರರು ಇದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.