ಕೊಪ್ಪಳ : ಪ್ಲಾಸ್ಟಿಕ್ ಮಾರಾಟ ನಿಷೇಧವಿದ್ದರೂ ಸಹ ಕೊಪ್ಪಳದಲ್ಲಿ ಪ್ಲಾಸ್ಟಿಕ್ ಮಾರಾಟ ಅವ್ಯಾಹತವಾಗಿ ಮುಂದುವರೆದಿದೆ. ನಗರಸಭೆ ಅಧಿಕಾರಿಗಳು ದಾಳಿ ನಡೆಸಿ ಪ್ಲಾಸ್ಟಿಕ್ ಚೀಲಗಳನ್ನು ವಶಪಡಿಸಿಕೊಂಡಿದ್ದಾರೆ.
ನಗರದ ಟಾಂಗಾಕೂಟದ ಬಳಿ ಅಂಗಡಿಯ ಹೆಸರು ಗೊತ್ತಾಗದ ರೀತಿ ವಿಳಾಸ ಬರೆದಿದ್ದ ಪ್ಲಾಸ್ಟಿಕ್ ತುಂಬಿದ ಒಟ್ಟು 9 ಬ್ಯಾಗ್ಗಳನ್ನು ನಗರಸಭೆ ಆಯುಕ್ತ ಮಂಜುನಾಥ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ. ಪ್ಲಾಸ್ಟಿಕ್ ಬ್ಯಾಗ್ಗಳ ವಾರಸುದಾರರು ಯಾರು ಎಂಬುದು ತಿಳಿಯದ ಕಾರಣ ಯಾರ ಮೇಲೆ ಪ್ರಕರಣ ದಾಖಲಿಸಬೇಕು ಎಂಬುದು ಈಗ ನಗರಸಭೆಗೆ ತಲೆ ನೋವಾಗಿ ಪರಿಣಮಿಸಿದೆ.
ಈ ಸುದ್ದಿಯನ್ನೂ ಓದಿ: ಕಟ್ಟಿಗೆ ಬಳಸಿ ಒಲೆಯಲ್ಲಿ ಅಡುಗೆ ಮಾಡುವ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ
ನಗರದಲ್ಲಿ ನಿಷೇಧಿತ ಪ್ಲಾಸ್ಟಿಕ್ ಮಾರಾಟ ಜೋರಾಗಿದೆ. ಆದರೆ, ನಗರಸಭೆ ಅಧಿಕಾರಿಗಳು ನೆನಪಾದಾಗೊಮ್ಮೆ, ನೆಪ ಮಾತ್ರಕ್ಕೆ ಎಂಬಂತೆ ದಾಳಿ ಮಾಡುತ್ತಾರೆ ಅಷ್ಟೇ ಎಂಬ ಮಾತುಗಳು ಸಾರ್ವಜನಿಕರಿಂದ ಕೇಳಿ ಬರುತ್ತಿವೆ.