ಗಂಗಾವತಿ/ಕೊಪ್ಪಳ: ಹಜ್ ಯಾತ್ರೆಗೆ ತೆರಳಿದ್ದ ಇಲ್ಲಿನ ಇಂದಿರಾನಗರ ಮೂಲದ ಕುಟುಂಬವೊಂದು ಲಾಕ್ಡೌನ್ ಪರಿಣಾಮ ಮುಂಬೈನಲ್ಲಿ ಸಿಲುಕಿದ್ದು, ಊಟ, ಉಪಹಾರಕ್ಕೂ ಪರದಾಡುತ್ತಿದೆ.
ಕೂಲಿ ಕಾರ್ಮಿಕರಾಗಿರುವ ರಜಾಕ್ ಹಾಗೂ ಆತನ ತಂದೆ ತಾಯಿ ಹಾಗೂ ಸಹೋದರ ಒಟ್ಟು ನಾಲ್ಕು ಮಂದಿ ಕಳೆದ ಫೆಬ್ರವರಿಯಲ್ಲಿ ಹಜ್ ಯಾತ್ರೆ ಕೈಗೊಂಡಿದ್ದರು. ಆದರೆ ಮರಳುವಷ್ಟರಲ್ಲಿ ಇಡೀ ದೇಶ ಲಾಕ್ಡೌನ್ ಆಗಿತ್ತು. ಹೀಗಾಗಿ ಸುರಕ್ಷಿತವಾಗಿ ಊರು ಸೇರಿಕೊಳ್ಳಲಾಗದೇ ಇಡೀ ಕುಟುಂಬ ಪರದಾಡುತ್ತಿದೆ. ಕೈಯಲ್ಲಿದ್ದ ಹಣವೆಲ್ಲಾ ಖಾಲಿಯಾಗಿದ್ದು, ಊಟ, ಉಪಹಾರಕ್ಕೂ ತೀವ್ರ ಸಂಕಷ್ಟ ಎದುರಿಸುತ್ತಿದ್ದೇವೆ. ಕೂಡಲೇ ನಮ್ಮನ್ನು ಸ್ವಗ್ರಾಮಕ್ಕೆ ಕರೆಸಿಕೊಳ್ಳಿ ಎಂದು ಕುಟುಂಬವು ವಿಡಿಯೋ ಮೂಲಕ ಮನವಿ ಮಾಡಿದೆ.
ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ಜಿಲ್ಲಾಡಳಿತ ಈ ಕುಟುಂಬವನ್ನು ರಕ್ಷಿಸುವ ನಿಟ್ಟಿನಲ್ಲಿ ಯತ್ನ ನಡೆಸಿದೆ ಎಂದು ತಿಳಿದು ಬಂದಿದೆ.