ETV Bharat / state

ಜಿ.ಪಂ ನೌಕರ ಅಮಾನತು: ಒಂದೇ ದಿನ ಆದೇಶ ಹಿಂಪಡೆದ ಸಿಇಓ

ಸಾಕಷ್ಟು ವಿವಾದಗಳಿಂದಲೇ ಗುರುತಿಸಿಕೊಂಡಿರುವ ಜಿ.ಪಂ ಇಲಾಖೆಯ ನೌಕರ ಡಿ.ಎಂ.ರವಿಕುಮಾರ್, ಮೂಲತಃ ಪಂಚಾಯತ್ ರಾಜ್ ಇಲಾಖೆಯ ನೌಕರನಲ್ಲ. ಹಟ್ಟಿ ಚಿನ್ನದಗಣಿಯಲ್ಲಿ ಆಕೃತಿ ಫೋರ್ ಮ್ಯಾನ್ ಆಗಿದ್ದರು. ಬಳಿಕ ಕರ್ತವ್ಯ ಲೋಪದಲ್ಲಿ ಅಮಾನತು ಮಾಡಲಾಯಿತು, ಆದರೆ ಈ ಆದೇಶಕ್ಕೆ ತಡೆ ತಂದು ಮತ್ತೆ ಕರ್ತವ್ಯ ನಿರ್ವಹಿಸಲು ಅರ್ಹತೆ ಪಡೆದುಕೊಂಡಿದ್ದಾರೆ.

author img

By

Published : Jul 1, 2020, 6:49 PM IST

GM Employee Suspension: CEO withdraws his suspension order in a same day
ಜಿ.ಪಂ ನೌಕರ ಅಮಾನತು: ಒಂದೇ ದಿನ ಅಮಾನತು ಆದೇಶ ಹಿಂಪಡೆದ ಸಿಇಓ

ಗಂಗಾವತಿ (ಕೊಪ್ಪಳ): ಜಿಲ್ಲಾ ಪಂಚಾಯಿತಿಯ ಇಲ್ಲಿನ ಉಪ ವಿಭಾಗ ಕಚೇರಿಯ ಕಿರಿಯ ಎಂಜಿನಿಯರ್ ಆಗಿದ್ದ ಡಿ.ಎಂ.ರವಿ ಕುಮಾರ್​ ಸೇವಾಲೋಪ ಎಸಗಿದ ಹಿನ್ನೆಲೆ ಅಮಾನತಾಗಿದ್ದರು. ಆದರೆ ನೌಕರ ಕೆಎಟಿಗೆ ಹೋಗಿ ಮೇಲಾಧಿಕಾರಿಯ ಆದೇಶಕ್ಕೆ ತಡೆ ತಂದಿದ್ದರು.

ಈ ಹಿನ್ನೆಲೆ ತಾವು ಹೊರಡಿಸಿದ್ದ ಅಮಾನತು ಆದೇಶ ಕೂಡಲೆ ಹಿಂಪಡೆದಿದ್ದು, ಇದೀಗ, ಡಿ.ಎಂ. ರವಿ ಅವರ ಸೇವೆ ಮುಂದುವರೆಸಲು ಜಿಲ್ಲಾ ಪಂಚಾಯಿತಿ ಸಿಇಓ ರಘುನಂದನ್ ಮೂರ್ತಿ ಅವಕಾಶ ನೀಡಿದ್ದಾರೆ.

ಸಾಕಷ್ಟು ವಿವಾದಗಳಿಂದಲೇ ಗುರುತಿಸಿಕೊಂಡಿರುವ ಜಿ.ಪಂ ಇಲಾಖೆಯ ನೌಕರ ಡಿ.ಎಂ.ರವಿಕುಮಾರ್, ಮೂಲತಃ ಪಂಚಾಯತ್ ರಾಜ್ ಇಲಾಖೆಯ ನೌಕರನಲ್ಲ. ಹಟ್ಟಿ ಚಿನ್ನದಗಣಿಯಲ್ಲಿ ಆಕೃತಿ ಫೋರ್ ಮ್ಯಾನ್ ಆಗಿದ್ದರು.

ನೌಕರನನ್ನು ಇಲ್ಲಿನ ಜಿಲ್ಲಾ ಪಂಚಾಯಿತಿ ಉಪ ವಿಭಾಗಕ್ಕೆ ಆಕೃತಿ ರಚನೆಯ (ಡ್ರಾಫ್ಟ್ ಮ್ಯಾನ್) ಉದ್ದೇಶಕ್ಕೆ ನಿಯೋಜನೆ ಮಾಡಲಾಗಿತ್ತು. ಇದೀಗ ಸರ್ಕಾರದ ಆದೇಶದ ಮೆರೆಗೆ ತಕ್ಷಣದಿಂದ ಜಾರಿಯಾಗುವಂತೆ ಮಾತೃ ಸಂಸ್ಥೆಗೆ ನಿಯೋಜನೆ ಮಾಡಲಾಗಿದೆ.

ಗಂಗಾವತಿ (ಕೊಪ್ಪಳ): ಜಿಲ್ಲಾ ಪಂಚಾಯಿತಿಯ ಇಲ್ಲಿನ ಉಪ ವಿಭಾಗ ಕಚೇರಿಯ ಕಿರಿಯ ಎಂಜಿನಿಯರ್ ಆಗಿದ್ದ ಡಿ.ಎಂ.ರವಿ ಕುಮಾರ್​ ಸೇವಾಲೋಪ ಎಸಗಿದ ಹಿನ್ನೆಲೆ ಅಮಾನತಾಗಿದ್ದರು. ಆದರೆ ನೌಕರ ಕೆಎಟಿಗೆ ಹೋಗಿ ಮೇಲಾಧಿಕಾರಿಯ ಆದೇಶಕ್ಕೆ ತಡೆ ತಂದಿದ್ದರು.

ಈ ಹಿನ್ನೆಲೆ ತಾವು ಹೊರಡಿಸಿದ್ದ ಅಮಾನತು ಆದೇಶ ಕೂಡಲೆ ಹಿಂಪಡೆದಿದ್ದು, ಇದೀಗ, ಡಿ.ಎಂ. ರವಿ ಅವರ ಸೇವೆ ಮುಂದುವರೆಸಲು ಜಿಲ್ಲಾ ಪಂಚಾಯಿತಿ ಸಿಇಓ ರಘುನಂದನ್ ಮೂರ್ತಿ ಅವಕಾಶ ನೀಡಿದ್ದಾರೆ.

ಸಾಕಷ್ಟು ವಿವಾದಗಳಿಂದಲೇ ಗುರುತಿಸಿಕೊಂಡಿರುವ ಜಿ.ಪಂ ಇಲಾಖೆಯ ನೌಕರ ಡಿ.ಎಂ.ರವಿಕುಮಾರ್, ಮೂಲತಃ ಪಂಚಾಯತ್ ರಾಜ್ ಇಲಾಖೆಯ ನೌಕರನಲ್ಲ. ಹಟ್ಟಿ ಚಿನ್ನದಗಣಿಯಲ್ಲಿ ಆಕೃತಿ ಫೋರ್ ಮ್ಯಾನ್ ಆಗಿದ್ದರು.

ನೌಕರನನ್ನು ಇಲ್ಲಿನ ಜಿಲ್ಲಾ ಪಂಚಾಯಿತಿ ಉಪ ವಿಭಾಗಕ್ಕೆ ಆಕೃತಿ ರಚನೆಯ (ಡ್ರಾಫ್ಟ್ ಮ್ಯಾನ್) ಉದ್ದೇಶಕ್ಕೆ ನಿಯೋಜನೆ ಮಾಡಲಾಗಿತ್ತು. ಇದೀಗ ಸರ್ಕಾರದ ಆದೇಶದ ಮೆರೆಗೆ ತಕ್ಷಣದಿಂದ ಜಾರಿಯಾಗುವಂತೆ ಮಾತೃ ಸಂಸ್ಥೆಗೆ ನಿಯೋಜನೆ ಮಾಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.