ETV Bharat / state

ಹಾನಗಲ್​​: ಪಕ್ಷಿಗಳ ನೀರಿನ ದಾಹ ನೀಗಿಸುತ್ತಿದೆ ತಹಶೀಲ್ದಾರ್​​​ ಕಚೇರಿ

ಬೇಸಿಗೆಯ ತಾಪ ಹೇಳತೀರದಂತಾಗಿದ್ದು, ಬಿರು ಬಿಸಿಲಿಗೆ ಪಕ್ಷಿಗಳು ನೀರಿಗಾಗಿ ಪರದಾಡುತ್ತಿರುತ್ತವೆ. ಹಾಗಾಗಿ ತಹಶೀಲ್ದಾರ್​​ ಕಚೇರಿ ಆವರಣದಲ್ಲಿ ಶುದ್ಧವಾದ ಪರಿಸರ ನಿರ್ಮಿಸಿ, ಆ ಪರಿಸರದ ನಡುವೆ ಪಕ್ಷಿಗಳಿಗೆ ನೀರನ್ನಿಟ್ಟು ಪಕ್ಷಿ ಕಾಳಜಿ ಮೆರೆಯಲಾಗಿದೆ.

author img

By

Published : May 21, 2020, 3:51 PM IST

Tahsildar office helps to birds and animals to solve thirsty problem
ಹಾನಗಲ್​​: ಪ್ರಾಣಿ-ಪಕ್ಷಿಗಳ ನೀರಿನ ದಾಹ ನೀಗಿಸುತ್ತಿರುವ ತಹಶೀಲ್ದಾರ್​​ ಕಚೇರಿ

ಹಾನಗಲ್: ತಹಶೀಲ್ದಾರ್​​ ಕಚೇರಿ ಆವರಣದಲ್ಲಿ ಶುದ್ಧವಾದ ಪರಿಸರ ನಿರ್ಮಿಸಿ, ಆ ಪರಿಸರದ ನಡುವೆ ಪಕ್ಷಿಗಳಿಗೆ ನೀರನ್ನಿಟ್ಟು ಪಕ್ಷಿ ಕಾಳಜಿ ಮೆರೆಯಲಾಗಿದೆ.

ಹೌದು, ಬೇಸಿಗೆ ಬಂತೆಂದರೆ ಸಾಕು ಬಿರು ಬಿಸಿಲಿಗೆ ಪ್ರಾಣಿ, ಪಕ್ಷಿಗಳು ನೀರಿಗಾಗಿ ಪರದಾಡುತ್ತಿರುತ್ತವೆ. ಹಾಗಾಗಿ ತಹಶೀಲ್ದಾರ್​​ ಕಚೇರಿ ಆವರಣದಲ್ಲಿ ನೀರಿನ ಬುಟ್ಟಿಗಳನ್ನಿಡುವ ಮೂಲಕ ಪಕ್ಷಿಗಳ ನೀರಿನ ದಾಹ ನೀಗಿಸಲಾಗುತ್ತಿದೆ.

ತಹಶೀಲ್ದಾರ್​​ ಕಚೇರಿ ಆವರಣ

ತಹಶೀಲ್ದಾರ್​ ಮತ್ತು ಕಚೇರಿ ಸಿಬ್ಬಂದಿಯ ಈ ಪ್ರಯತ್ನಕ್ಕೆ ಜನರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಲ್ಲದೇ ತಹಶೀಲ್ದಾರ್​​ ಕಚೇರಿ ಆವರಣ ಪರಿಶುದ್ಧ ವಾತಾವರಣದಿಂದ ಕೂಡಿದ್ದು, ಕಚೇರಿಗೆ ಬಂದ ಜನತೆ ತಂಪಾದ ಗಾಳಿ ಪಡೆದು, ನಿಸರ್ಗದ ಸೌಂದರ್ಯ ಅನುಭವಿಸುತ್ತಿದ್ದಾರೆ. ಮನುಷ್ಯರಂತೆ ಪ್ರಾಣಿ-ಪಕ್ಷಿಗಳಿಗೂ ಸೂಕ್ತ ಸಮಯದಲ್ಲಿ ನೀರು ಸಿಗುವಂತಾಗಬೇಕು ಎಂಬುದು ನಮ್ಮ ಉದ್ದೇಶವಾಗಿದೆ ಅಂತಾರೆ ಇಲ್ಲಿಯ ಸಿಬ್ಬಂದಿ ವರ್ಗ.

ಹಾನಗಲ್: ತಹಶೀಲ್ದಾರ್​​ ಕಚೇರಿ ಆವರಣದಲ್ಲಿ ಶುದ್ಧವಾದ ಪರಿಸರ ನಿರ್ಮಿಸಿ, ಆ ಪರಿಸರದ ನಡುವೆ ಪಕ್ಷಿಗಳಿಗೆ ನೀರನ್ನಿಟ್ಟು ಪಕ್ಷಿ ಕಾಳಜಿ ಮೆರೆಯಲಾಗಿದೆ.

ಹೌದು, ಬೇಸಿಗೆ ಬಂತೆಂದರೆ ಸಾಕು ಬಿರು ಬಿಸಿಲಿಗೆ ಪ್ರಾಣಿ, ಪಕ್ಷಿಗಳು ನೀರಿಗಾಗಿ ಪರದಾಡುತ್ತಿರುತ್ತವೆ. ಹಾಗಾಗಿ ತಹಶೀಲ್ದಾರ್​​ ಕಚೇರಿ ಆವರಣದಲ್ಲಿ ನೀರಿನ ಬುಟ್ಟಿಗಳನ್ನಿಡುವ ಮೂಲಕ ಪಕ್ಷಿಗಳ ನೀರಿನ ದಾಹ ನೀಗಿಸಲಾಗುತ್ತಿದೆ.

ತಹಶೀಲ್ದಾರ್​​ ಕಚೇರಿ ಆವರಣ

ತಹಶೀಲ್ದಾರ್​ ಮತ್ತು ಕಚೇರಿ ಸಿಬ್ಬಂದಿಯ ಈ ಪ್ರಯತ್ನಕ್ಕೆ ಜನರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಲ್ಲದೇ ತಹಶೀಲ್ದಾರ್​​ ಕಚೇರಿ ಆವರಣ ಪರಿಶುದ್ಧ ವಾತಾವರಣದಿಂದ ಕೂಡಿದ್ದು, ಕಚೇರಿಗೆ ಬಂದ ಜನತೆ ತಂಪಾದ ಗಾಳಿ ಪಡೆದು, ನಿಸರ್ಗದ ಸೌಂದರ್ಯ ಅನುಭವಿಸುತ್ತಿದ್ದಾರೆ. ಮನುಷ್ಯರಂತೆ ಪ್ರಾಣಿ-ಪಕ್ಷಿಗಳಿಗೂ ಸೂಕ್ತ ಸಮಯದಲ್ಲಿ ನೀರು ಸಿಗುವಂತಾಗಬೇಕು ಎಂಬುದು ನಮ್ಮ ಉದ್ದೇಶವಾಗಿದೆ ಅಂತಾರೆ ಇಲ್ಲಿಯ ಸಿಬ್ಬಂದಿ ವರ್ಗ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.