ಹಾವೇರಿ: ಅನಧಿಕೃತ ಕಲ್ಲಿನ ಕ್ವಾರಿ ಮೇಲೆ ಐಜಿಪಿ ವಿಶೇಷ ತಂಡ ದಾಳಿ ಮಾಡಿರುವ ಘಟನೆ ಜಿಲ್ಲೆಯ ಬ್ಯಾಡಗಿ ತಾಲೂಕಿನ ಛತ್ರ ಗ್ರಾಮದಲ್ಲಿ ನಡೆದಿದೆ.
ಕ್ವಾರಿಯಲ್ಲಿ ಅಧಿಕೃತ ಸ್ಪೋಟಕ್ಕೆ ಬಳಸುತ್ತಿದ್ದ ಒಂದು ಹಿಟಾಚಿ, 2 ಕಂಪ್ರೆಸರ್, 55 ಜಿಲೆಟಿನ್ ಜೆಲ್ ಹಾಗೂ 19 ಎಲೆಕ್ಟ್ರಾನಿಕ್ ಡಿಟೋನೇಟರ್ಗಳನ್ನು ತಂಡ ವಶಕ್ಕೆ ಪಡೆದಿದೆ. ಜೊತೆಗೆ ಸ್ಥಳದಲ್ಲಿದ್ದ ನಾಲ್ವರನ್ನು ಬಂಧಿಸಿದೆ.
ದಾವಣಗೆರೆ ಪೂರ್ವ ವಲಯದ ಐಜಿಪಿ ವಿಶೇಷ ತಂಡದ ಡಿವೈಎಸ್ಪಿ ತಿರುಮಲೇಶ್ ನೇತೃತ್ವದಲ್ಲಿ ದಾಳಿ ನಡೆದಿದೆ. ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ನಡೆದಿದೆ.
ಇದನ್ನೂ ಓದಿ: ಕೋವಿಡ್ ಕಟ್ಟಿಹಾಕುವುದರಲ್ಲೇ ಬಹುಪಾಲು ಶ್ರಮಿಸಿದ ಬಿಎಸ್ವೈ ಆಡಳಿತ; ಈ ಮಧ್ಯೆ ಒಂದಿಷ್ಟು ಸಾಧನೆಯ ತೃಪ್ತಿ..