ETV Bharat / state

ಹಾಸನ: ಕುಡಿದ ಅಮಲಿನಲ್ಲಿ ಮಹಿಳೆ ಮೇಲೆ ಇಟ್ಟಿಗೆ ಎತ್ತಿ ಹಾಕಿ ಕೊಂದ ಭಿಕ್ಷುಕರು!

ಹಾಸನದ ಎನ್​.ಆರ್​ ವೃತ್ತದ ಶ್ರೀ ಕನ್ನಿಕಾಪರಮೇಶ್ವರಿ ಸಹಕಾರಿ ಬ್ಯಾಂಕ್ ಮುಂದೆ ಮಹಿಳೆಯನ್ನು ಬರ್ಬರವಾಗಿ ಕೊಲೆಗೈದು ಆರೋಪಿಗಳು ಪರಾರಿಯಾಗಿದ್ದಾರೆ.

author img

By

Published : Aug 25, 2020, 11:03 AM IST

Murder of a woman in in Hassan
ಹಾಸನದ ಎನ್​.ಆರ್​ ವೃತ್ತದ ಬಳಿ ಮಹಿಳೆಯ ಕೊಲೆ

ಹಾಸನ: ಕುಡಿದ ಅಮಲಿನಲ್ಲಿ ಭಿಕ್ಷುಕರ ಗುಂಪೊಂದು ಮಹಿಳೆ ಮೇಲೆ ಇಟ್ಟಿಗೆ ಎತ್ತಿ ಹಾಕಿ ಕೊಲೆಗೈದಿರುವ ಘಟನೆ ನಗರದ ಹೃದಯ ಭಾಗದ ಎನ್​.ಆರ್​ ವೃತ್ತದಲ್ಲಿ ನಡೆದಿದೆ.

ಎನ್​.ಆರ್​ ವೃತ್ತದ ಶ್ರೀ ಕನ್ನಿಕಾಪರಮೇಶ್ವರಿ ಸಹಕಾರಿ ಬ್ಯಾಂಕ್ ಮುಂದೆ ಮಹಿಳೆಯನ್ನು ಬರ್ಬರವಾಗಿ ಕೊಲೆಗೈದು ಆರೋಪಿಗಳು ಪರಾರಿಯಾಗಿದ್ದಾರೆ. ಮೃತ ಮಹಿಳೆಯ ವಯಸ್ಸು 45ರಿಂದ 50 ಎಂದು ಅಂದಾಜಿಸಲಾಗಿದ್ದು, ಆಕೆಯ ಹಿನ್ನೆಲೆ ತಿಳಿದು ಬಂದಿಲ್ಲ. ಸ್ಥಳಕ್ಕೆ ಭೇಟಿ ನೀಡಿದ ಡಿವೈಎಸ್ಪಿ, ವೃತ್ತ ನಿರೀಕ್ಷಕ ಮತ್ತು ನಗರ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ಹಾಸನದ ಎನ್​.ಆರ್​ ವೃತ್ತದ ಬಳಿ ಮಹಿಳೆಯ ಕೊಲೆ

ಗಣೇಶ ಹಬ್ಬದ ದಿನ ಕ್ಷುಲ್ಲಕ ಕಾರಣಕ್ಕೆ ನಗರದಲ್ಲಿ ಗೋವಿಂದೇಗೌಡ ಎಂಬುವರನ್ನು ಕುಮಾರ್​ ಎಂಬಾತ ಕೊಲೆ ಮಾಡಿದ್ದ. ಅದರ ಬೆನ್ನಲ್ಲೇ ಮತ್ತೊಂದು ಕೊಲೆ ನಡೆದಿರುವುದು ಸ್ಥಳೀಯ ನಿವಾಸಿಗಳನ್ನು ಬೆಚ್ಚಿ ಬೀಳಿಸಿದೆ.

ಹಾಸನ: ಕುಡಿದ ಅಮಲಿನಲ್ಲಿ ಭಿಕ್ಷುಕರ ಗುಂಪೊಂದು ಮಹಿಳೆ ಮೇಲೆ ಇಟ್ಟಿಗೆ ಎತ್ತಿ ಹಾಕಿ ಕೊಲೆಗೈದಿರುವ ಘಟನೆ ನಗರದ ಹೃದಯ ಭಾಗದ ಎನ್​.ಆರ್​ ವೃತ್ತದಲ್ಲಿ ನಡೆದಿದೆ.

ಎನ್​.ಆರ್​ ವೃತ್ತದ ಶ್ರೀ ಕನ್ನಿಕಾಪರಮೇಶ್ವರಿ ಸಹಕಾರಿ ಬ್ಯಾಂಕ್ ಮುಂದೆ ಮಹಿಳೆಯನ್ನು ಬರ್ಬರವಾಗಿ ಕೊಲೆಗೈದು ಆರೋಪಿಗಳು ಪರಾರಿಯಾಗಿದ್ದಾರೆ. ಮೃತ ಮಹಿಳೆಯ ವಯಸ್ಸು 45ರಿಂದ 50 ಎಂದು ಅಂದಾಜಿಸಲಾಗಿದ್ದು, ಆಕೆಯ ಹಿನ್ನೆಲೆ ತಿಳಿದು ಬಂದಿಲ್ಲ. ಸ್ಥಳಕ್ಕೆ ಭೇಟಿ ನೀಡಿದ ಡಿವೈಎಸ್ಪಿ, ವೃತ್ತ ನಿರೀಕ್ಷಕ ಮತ್ತು ನಗರ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ಹಾಸನದ ಎನ್​.ಆರ್​ ವೃತ್ತದ ಬಳಿ ಮಹಿಳೆಯ ಕೊಲೆ

ಗಣೇಶ ಹಬ್ಬದ ದಿನ ಕ್ಷುಲ್ಲಕ ಕಾರಣಕ್ಕೆ ನಗರದಲ್ಲಿ ಗೋವಿಂದೇಗೌಡ ಎಂಬುವರನ್ನು ಕುಮಾರ್​ ಎಂಬಾತ ಕೊಲೆ ಮಾಡಿದ್ದ. ಅದರ ಬೆನ್ನಲ್ಲೇ ಮತ್ತೊಂದು ಕೊಲೆ ನಡೆದಿರುವುದು ಸ್ಥಳೀಯ ನಿವಾಸಿಗಳನ್ನು ಬೆಚ್ಚಿ ಬೀಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.