ಹಾಸನ: ಪೌರತ್ವ ತಿದ್ದುಪಡಿ ಕಾಯಿದೆ ಬಗ್ಗೆ ಇರುವ ಗೊಂದಲವನ್ನು ದೂರ ಮಾಡಲು ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಅವರು ಜನರ ಬಳಿ ತೆರಳಿ ಕರಪತ್ರದ ಮೂಲಕ ಸಿಎಎ ಬಗ್ಗೆ ಜಾಗೃತಿ ಮೂಡಿಸಿದರು.
ನಗರದ ಹೊಸಲೈನ್ ರಸ್ತೆ ಸೇರಿದಂತೆ ಇತರೆ ಪ್ರಮುಖ ಕಡೆಗಳಲ್ಲಿ ನಡಿಗೆ ಮೂಲಕ ಮನೆ, ಅಂಗಡಿ, ಮಾರುಕಟ್ಟೆಗಳಿಗೆ ತೆರಳಿ ಕರಪತ್ರಗಳನ್ನು ಹಂಚಿ ಸಿಎಎ ಕುರಿತು ಜಾಗೃತಿ ಮೂಡಿಸಿದರು. ಇದಕ್ಕೂ ಮೊದಲು ನಗರದ ಹಾಸನಾಂಬ ದೇವಾಲಯ ವೃತ್ತದಲ್ಲಿ ಸಹಿ ಸಂಗ್ರಹದ ಹಾಳೆಗೆ ಸಹಿ ಹಾಕಿ ಅಭಿಯಾನಕ್ಕೆ ಚಾಲನೆ ನೀಡಿದರು. ಗುಂಪು- ಗುಂಪಾಗಿ ನಿಂತಿದ್ದ ಸಾರ್ವಜನಿಕರ ಬಳಿ ತೆರಳಿ ಪೌರತ್ವ ಕಾಯಿದೆ ಬಗ್ಗೆ ವಿವರಿಸಿದರು.
ಈ ಸಂದರ್ಭದಲ್ಲಿ ಶಾಸಕ ಪ್ರೀತಮ್ ಜೆ. ಗೌಡ, ಬಿಜೆಪಿ ಜಿಲ್ಲಾ ಘಕದ ಅಧ್ಯಕ್ಷ ನವೀಲೆ ಅಣ್ಣಪ್ಪ, ಪದಾಧಿಕಾರಿಗಳಾದ ರೇಣುಕುಮಾರ್, ವೇಣುಗೋಪಾಲ್ ಸೇರಿದಂತೆ ಇತರರು ಭಾಗವಹಿಸಿದ್ದರು.