ಧಾರವಾಡ: ಜಮೀನಿನಿಂದ ವಾಪಸ್ ಬರುವಾಗ ಮೂವರು ಬೆಣ್ಣೆಹಳ್ಳದಲ್ಲಿ ಸಿಲುಕಿಕೊಂಡ ಘಟನೆ ಜಿಲ್ಲೆಯ ನವಲಗುಂದ ತಾಲೂಕಿನ ಗುಡಿಸಾಗರ ಗ್ರಾಮದಲ್ಲಿ ಜರುಗಿದೆ.
ಜಮೀನಿಂದ ವಾಪಸ್ ಬರುವ ವೇಳೆ ಏಕಾಏಕಿ ಹಳ್ಳದ ನೀರು ತುಂಬಿದೆ. ಪರಿಣಾಮ ಗುಡಿಸಾಗರ ನಿವಾಸಿಗಳಾದ ಶರಣಪ್ಪ ಮೇಟಿ, ಗಂಗವ್ವ ಮತ್ತು ಭೀಮಪ್ಪ ಎಂಬುವವರು ಹಳ್ಳದಲ್ಲಿ ಸಿಲುಕಿಕೊಂಡಿದ್ದಾರೆ.
ಬೆಳಗಾವಿ ಜಿಲ್ಲೆಯ ಕಿತ್ತೂರು ಭಾಗದಲ್ಲಿ ಮಳೆ ಹೆಚ್ಚಾದ ಹಿನ್ನೆಲೆ ಬೆಣ್ಣೆಹಳ್ಳ ತುಂಬಿ ಹರಿಯುತ್ತಿದೆ. ಹಳ್ಳದಲ್ಲಿ ಸಿಲುಕಿಕೊಂಡವರ ರಕ್ಷಣೆಗೆ ನವಲಗುಂದ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ದೌಡಾಯಿಸಿದ್ದಾರೆ.