ಹುಬ್ಬಳ್ಳಿ: ಉತ್ತರ ಕರ್ನಾಟಕ ಅಭಿವೃದ್ಧಿಯಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರದು ದೊಡ್ಡ ಪ್ರಮಾಣದ ಕೊಡುಗೆ ಇದೆ ಎಂದು ಹೇಳುವ ಮೂಲಕ ಹುಬ್ಬಳ್ಳಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗಡ್ಕರಿ ಅವರಿಗೆ ಅಭಿನಂದನೆ ಸಲ್ಲಿಸಿದರು.
ನಗರದಲ್ಲಿಂದು ರಾಷ್ಟ್ರೀಯ ಹೆದ್ದಾರಿ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ, ಗಡ್ಕರಿ ಅವರು ಕೇಂದ್ರ ಸಚಿವರಾದಾಗ ನಾವು ಬಹಳಷ್ಟು ಆಸೆ ಇಟ್ಟುಕೊಂಡಿದ್ದೆವು. ಅವರ ಹಲವಾರು ರಸ್ತೆ ಕಾಮಗಾರಿ, ದಾಖಲೆ ಜೊತೆಗೆ ಮಾದರಿಯಾಗಿತ್ತು. ಅದರಂತೆ ರಸ್ತೆಯಲ್ಲಿ ದೊಡ್ಡ ಕ್ರಾಂತಿ ಆಗುತ್ತದೆ ಎನ್ನುವ ನಿರೀಕ್ಷೆಯನ್ನು ಅವರು ಇಂದು ಈಡೇರಿಸುತ್ತಿದ್ದಾರೆ ಎಂದರು.
ಯಾವುದು ಅಸಾಧ್ಯ ಎನ್ನುತ್ತಿದ್ದೇವೋ ಇದೀಗ ಎಲ್ಲವೂ ಸಾಧ್ಯವಾಗುತ್ತಿದೆ. ಪ್ರಧಾನಿ ಮೋದಿಯವರ ಚಿಂತನೆಯನ್ನು ಕಾರ್ಯಗತ ಮಾಡುತ್ತಿರುವುದು ನಿತಿನ್ ಗಡ್ಕರಿ. ನಿಮ್ಮ ಕೆಲಸ ಮತ್ತು ಕಾಳಜಿಯಿಂದ ಇಷ್ಟೆಲ್ಲ ಕಾರ್ಯ ನಡೆಯುತ್ತಿದೆ ಎಂದು ಹೇಳಿದರು.
ಇದನ್ನೂ ಓದಿ: ನಾನು ಪಕ್ಷ ಹೇಳಿದರೆ ಸ್ಥಾನ ಬಿಟ್ಟುಕೊಡ್ತೇನಿ.. ಹರಿಪ್ರಸಾದ್ ಇಬ್ರಾಹಿಂಗೆ ಜಾಗ ಬಿಟ್ಟುಕೊಡ್ತಾರಾ?: ಈಶ್ವರಪ್ಪ ಸವಾಲು
ರಸ್ತೆಯಲ್ಲಿ ನಡೆಯುತ್ತಿರುವ ಹಲವಾರು ಸಾವು-ನೋವುಗಳಿಗೆ ಗಡ್ಕರಿ ಮುಕ್ತಿ ಕೊಟ್ಟಿದ್ದಾರೆ. ಹಲವಾರು ಕಾಮಗಾರಿಗೆ ನೀವು ಅಡಿಗಲ್ಲು ಹಾಕಿದ್ದೀರಿ. ಅದಕ್ಕಾಗಿ ನಿಮಗೆ ನನ್ನ ಧನ್ಯವಾದ ಎಂದರು. ಇದೇ ವೇಳೆ ರಾಜ್ಯದ ವಿವಿಧ ಜಿಲ್ಲೆಗಳ ಡಿಪಿಆರ್ಗೆ ಸಿಎಂ ಮನವಿ ಮಾಡಿದರು.