ದಾವಣಗೆರೆ : ನಾನು ಶಾಸ್ತ್ರ ಹೇಳಲು ರೇವಣ್ಣ ಅಲ್ಲ, ತುಮಕೂರಿನಲ್ಲಿ ದೇವೇಗೌಡರು 100% ಗೆಲ್ಲುತ್ತಾರೆ ಎಂದು ದಾವಣಗೆರೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಆರ್ ಶ್ರೀನಿವಾಸ್ ಚಟಾಕಿ ಹಾರಿಸಿದರು.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ತುಮಕೂರಿನಲ್ಲಿ ರಾಜಕೀಯವನ್ನು ತಳಮಟ್ಟದಿಂದ ನೋಡಿದ್ದೇನೆ, ದೇವೆಗೌಡರು ಗೆಲ್ಲುತ್ತಾರೆ, ಎಷ್ಟು ವೋಟ್ ನಲ್ಲಿ ಗೆಲ್ಲುತ್ತಾರೆ ಎಂದು ಶಾಸ್ತ್ರ ಹೇಳಲು ನಾನು ರೇವಣ್ಣ ಅಲ್ಲ ಎಂದು ಹೇಳಿದರು..
ದೋಸ್ತಿ ಡಿವೋರ್ಸ್ ಆಗಲ್ಲ:
ಸಿದ್ದರಾಮಯ್ಯ ಮತ್ತು ಹೆಚ್ ವಿಶ್ವನಾಥ್ ನಡುವೆ ನಡೆಯುತ್ತಿರುವ ವಾಗ್ದಾಳಿ ಹಿನ್ನಲೆ ಪ್ರತಿಕ್ರಿಯಿಸಿದ ಶ್ರೀನಿವಾಸ್, ನಾನೊಬ್ಬ ಸಚಿವ ಅಷ್ಟೆ, ದೊಡ್ಡವರ ಬಗ್ಗೆ ಹೇಳಲ್ಲ, ಈ ಹಿಂದಿನಿಂದಲೂ ಎರಡು ಪಕ್ಷಗಳು ಕಿತ್ತಾಡಿಕೊಂಡು ಬಂದಿರುವಂತವು, ಹೀಗಾಗಿ ಗಂಡ ಹೆಂಡತಿ ಕಿತ್ತಾಟ ಆಗುತ್ತದೆ ಅಷ್ಟೆ. ಆದರೆ ಡಿವೋರ್ಸ್ ಆಗಲ್ಲ, ಕೆಲವರು ಚಟಕ್ಕೆ ಸರ್ಕಾರ ಬೀಳುತ್ತದೆ ಎಂದು ಹೇಳುತ್ತಾರೆ ಎಂದು ಕಿಡಿಕಾರಿದರು..