ಮಂಗಳೂರು: ದ. ಕ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿರುವ ಸಿಎಂ ಫೋಟೋ ಗ್ಯಾಲರಿಯಲ್ಲಿ ಹರಿದು ಹಾಕಲಾಗಿದ್ದ ಮಾಜಿ ಸಿ ಎಂ ಎಸ್.ಎಂ.ಕೃಷ್ಣ ಅವರ ಫೋಟೊ ಮತ್ತೆ ಕಾಣಿಸಿಕೊಂಡಿದೆ.
ದ.ಕ ಜಿಲ್ಲಾ ಕಾಂಗ್ರೆಸ್ ಕಚೇರಿ ಕಟ್ಟಡದ ಒಳ ಪ್ರವೇಶದ ದ್ವಾರದ ಗೋಡೆಯಲ್ಲಿ ರಾಜ್ಯದ ಇಷ್ಟು ವರ್ಷಗಳ ಮುಖ್ಯಮಂತ್ರಿಗಳ ಫೋಟೋವನ್ನು ಹಾಕಲಾಗಿದೆ. ಆದರೆ, ಅದರಲ್ಲಿ ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರ ಫೋಟೊ ಹರಿದು ಹಾಕಲಾಗಿತ್ತು. ಎಸ್. ಎಂ ಕೃಷ್ಣ ಅವರು ಕೆಲ ವರ್ಷಗಳ ಹಿಂದೆ ಕಾಂಗ್ರೆಸ್ ನಿಂದ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಆ ನಂತರ ಅವರ ಫೋಟೊವನ್ನು ಇದುವರೆಗೆ ಮೂರು ಸಲ ತೆಗೆದು ಹಾಕಲಾಗಿತ್ತಂತೆ.
ಎರಡು ಸಲ ಹರಿದು ಹಾಕಿರುವ ಫೋಟೋವನ್ನು ಮತ್ತೆ ಅಂಟಿಸಲಾಗಿತ್ತು. ಆದರೆ, ಇತ್ತೀಚಿಗೆ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ರಕ್ಷಾ ರಾಮಯ್ಯ ಕಾಂಗ್ರೆಸ್ ದ.ಕ.ಜಿಲ್ಲಾ ಕಚೇರಿಗೆ ಭೇಟಿ ನೀಡಿದ್ದ ವೇಳೆ ನೂರಾರು ಕಾರ್ಯಕರ್ತರು ಸೇರಿದ್ದರು. ಆ ವೇಳೆ, ಅವರ ಫೋಟೋವನ್ನು ಹರಿದುಹಾಕಿದ್ದರು ಎನ್ನಲಾಗಿದೆ. ಇದೀಗ ಆ ಫೋಟೊವನ್ನು ಮತ್ತೆ ಅಂಟಿಸಲಾಗಿದೆ.
ಓದಿ: ಗಾಯದ ಮೇಲೆ ಬರೆ: ಆರಂಭಿಕ ತ್ರೈಮಾಸಿಕದಲ್ಲಿ ಕೇಂದ್ರ ಬಿಡುಗಡೆಗೊಳಿಸುವ ತೆರಿಗೆ ಪಾಲು, ಸಹಾಯಧನಕ್ಕೂ ಕತ್ತರಿ!