ETV Bharat / state

ಈ ವಿದ್ಯಾರ್ಥಿ ತಂಟೆಗೆ ಯಾರೂ ಬರಬಾರದಂತೆ, ಆಕೆಗೆ ಇಷ್ಟಪಟ್ಟ ಹುಡುಗ ಬೇಕಂತೆ: ಹುಂಡಿಯಲ್ಲಿ ಸಿಕ್ಕಿದ್ದು!

author img

By

Published : Oct 19, 2022, 10:14 PM IST

ಕೊಳ್ಳೇಗಾಲದ ಶಿವನಸಮುದ್ರ ಸಮೂಹ ದೇವಾಲಯಗಳ ಹುಂಡಿ ಎಣಿಕೆ ನಡೆದಿದ್ದು 10 ಲಕ್ಷ ರೂ.ಗೂ ಅಧಿಕ ಕಾಣಿಕೆ ಸಂಗ್ರಹವಾಗಿದೆ.

kolegala-temple-hundi-count
ಕಾಣಿಕೆ ಹುಂಡಿಯಲ್ಲಿ ಮನವಿ ಪತ್ರ

ಚಾಮರಾಜನಗರ: ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಸಮೀಪದ ಶಿವನಸಮುದ್ರ ಸಮೂಹ ದೇವಾಲಯಗಳಾದ ಆದಿಶಕ್ತಿ ಮಾರಮ್ಮ ದೇವಾಲಯ, ಪ್ರಸನ್ನಾ ಮೀನಾಕ್ಷಿ ರಂಗನಾಥಸ್ವಾಮಿ ದೇವಾಲಯ ಹಾಗೂ ಮಧ್ಯರಂಗನಾಥಸ್ವಾಮಿ ದೇವಾಲಯದ ಹುಂಡಿಗಳ ಎಣಿಕೆ ನಡೆದಿದೆ. 113 ದಿನಗಳ ಬಳಿಕ‌ ಸಮೂಹ ದೇವಾಲಯದಲ್ಲಿ ಹುಂಡಿ‌ ಎಣಿಕೆ‌ ಕಾರ್ಯ ನಡೆದಿದ್ದು 10,13,620 ರೂ‌. ಸಂಗ್ರಹವಾಗಿದೆ. ಇದಲ್ಲದೇ, 2.5 ಗ್ರಾಂ ಚಿನ್ನದ ಸರ, 23 ಗ್ರಾಂ ಬೆಳ್ಳಿ ಪದಾರ್ಥವನ್ನು ಭಕ್ತರು ಕಾಣಿಕೆ ರೂಪದಲ್ಲಿ ದೇವರಿಗೆ ಅರ್ಪಿಸಿದ್ದಾರೆ.

ಹುಂಡಿ ಎಣಿಕೆ ವೇಳೆ ದೇವರಿಗೆ ಬರೆದ ಎರಡು ಕೋರಿಕೆ ಪತ್ರಗಳು ಸಿಕ್ಕಿವೆ. ಒಂದು ಪತ್ರದಲ್ಲಿ ಕಾಲೇಜಿನಲ್ಲಿ ಯಾರೂ ತನ್ನ ಸುದ್ದಿಗೆ ಬರಬಾರದು, ಓದುವ ಜ್ಞಾನ ಕೊಡು, ಸರ್-ಮೇಡಂ ಯಾರೂ ತಪ್ಪಾಗಿ ತಿಳಿದುಕೊಳ್ಳದಂತೆ ಮಾಡು, ಹೆಚ್ಚು ಅಂಕ ಕೊಟ್ಟು ಪಾಸ್ ಮಾಡಿಸು ತಾಯಿ ಎಂದು ಕೋರಿರುವ ಚೀಟಿ ದೊರೆತಿದೆ.

Kolegala temple hundi count
ಇಷ್ಟ ಪಟ್ಟ ಹುಡುಗನನ್ನು ಕರುಣಿಸು ಎಂದು ಬೇಡಿಕೆ

ಮತ್ತೊಂದು ಪತ್ರದಲ್ಲಿ ಯುವತಿಯೊಬ್ಬಳು ಬರೆದಂತಿದ್ದು, ತಾನು ಇಚ್ಛೆ ಪಟ್ಟ ಹುಡುಗನನ್ನೇ ಮದುವೆ ಮಾಡಿಸುವ ಕೋರಿಕೆಯಂತೆ, 'ನಾ ಇಷ್ಟಪಟ್ಟ ಮನೆ ಸಿಗಲಿ, ಆ ಮನೆಯವರು ಒಳ್ಳೆಯದು ಮಾಡಲಿ, ಸಾಲ ತೀರಲಿ' ಎಂದು ಒಂದು ಪುಟ ತುಂಬೆಲ್ಲಾ ಬರೆದು ದೇವರಿಗೆ ಅರ್ಪಿಸಿದ್ದಾಳೆ.

ಇದನ್ನೂ ಓದಿ: 36 ದಿನಗಳಲ್ಲೇ ಮಲೆಮಹದೇಶ್ವರನಿಗೆ ಹರಿದುಬಂತು ಕೋಟ್ಯಂತರ ಕಾಣಿಕೆ

ಚಾಮರಾಜನಗರ: ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಸಮೀಪದ ಶಿವನಸಮುದ್ರ ಸಮೂಹ ದೇವಾಲಯಗಳಾದ ಆದಿಶಕ್ತಿ ಮಾರಮ್ಮ ದೇವಾಲಯ, ಪ್ರಸನ್ನಾ ಮೀನಾಕ್ಷಿ ರಂಗನಾಥಸ್ವಾಮಿ ದೇವಾಲಯ ಹಾಗೂ ಮಧ್ಯರಂಗನಾಥಸ್ವಾಮಿ ದೇವಾಲಯದ ಹುಂಡಿಗಳ ಎಣಿಕೆ ನಡೆದಿದೆ. 113 ದಿನಗಳ ಬಳಿಕ‌ ಸಮೂಹ ದೇವಾಲಯದಲ್ಲಿ ಹುಂಡಿ‌ ಎಣಿಕೆ‌ ಕಾರ್ಯ ನಡೆದಿದ್ದು 10,13,620 ರೂ‌. ಸಂಗ್ರಹವಾಗಿದೆ. ಇದಲ್ಲದೇ, 2.5 ಗ್ರಾಂ ಚಿನ್ನದ ಸರ, 23 ಗ್ರಾಂ ಬೆಳ್ಳಿ ಪದಾರ್ಥವನ್ನು ಭಕ್ತರು ಕಾಣಿಕೆ ರೂಪದಲ್ಲಿ ದೇವರಿಗೆ ಅರ್ಪಿಸಿದ್ದಾರೆ.

ಹುಂಡಿ ಎಣಿಕೆ ವೇಳೆ ದೇವರಿಗೆ ಬರೆದ ಎರಡು ಕೋರಿಕೆ ಪತ್ರಗಳು ಸಿಕ್ಕಿವೆ. ಒಂದು ಪತ್ರದಲ್ಲಿ ಕಾಲೇಜಿನಲ್ಲಿ ಯಾರೂ ತನ್ನ ಸುದ್ದಿಗೆ ಬರಬಾರದು, ಓದುವ ಜ್ಞಾನ ಕೊಡು, ಸರ್-ಮೇಡಂ ಯಾರೂ ತಪ್ಪಾಗಿ ತಿಳಿದುಕೊಳ್ಳದಂತೆ ಮಾಡು, ಹೆಚ್ಚು ಅಂಕ ಕೊಟ್ಟು ಪಾಸ್ ಮಾಡಿಸು ತಾಯಿ ಎಂದು ಕೋರಿರುವ ಚೀಟಿ ದೊರೆತಿದೆ.

Kolegala temple hundi count
ಇಷ್ಟ ಪಟ್ಟ ಹುಡುಗನನ್ನು ಕರುಣಿಸು ಎಂದು ಬೇಡಿಕೆ

ಮತ್ತೊಂದು ಪತ್ರದಲ್ಲಿ ಯುವತಿಯೊಬ್ಬಳು ಬರೆದಂತಿದ್ದು, ತಾನು ಇಚ್ಛೆ ಪಟ್ಟ ಹುಡುಗನನ್ನೇ ಮದುವೆ ಮಾಡಿಸುವ ಕೋರಿಕೆಯಂತೆ, 'ನಾ ಇಷ್ಟಪಟ್ಟ ಮನೆ ಸಿಗಲಿ, ಆ ಮನೆಯವರು ಒಳ್ಳೆಯದು ಮಾಡಲಿ, ಸಾಲ ತೀರಲಿ' ಎಂದು ಒಂದು ಪುಟ ತುಂಬೆಲ್ಲಾ ಬರೆದು ದೇವರಿಗೆ ಅರ್ಪಿಸಿದ್ದಾಳೆ.

ಇದನ್ನೂ ಓದಿ: 36 ದಿನಗಳಲ್ಲೇ ಮಲೆಮಹದೇಶ್ವರನಿಗೆ ಹರಿದುಬಂತು ಕೋಟ್ಯಂತರ ಕಾಣಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.