ETV Bharat / state

ಅಥಣಿಯಲ್ಲಿ ಹರಿದ ನೆತ್ತರು: ಕೇವಲ ಐದು ಗುಂಟೆ ಜಮೀನಿಗಾಗಿ ಸಹೋದರನ ಬರ್ಬರ ಕೊಲೆ!

author img

By

Published : Jul 20, 2021, 7:31 PM IST

ಹುಟ್ಟುತ್ತ ಅಣ್ಣ ತಮ್ಮಂದಿರು, ಬೆಳೆಯುತ್ತ ದಾಯಾದಿ ಕಲಹ ಎಂಬ ಮಾತಿದೆ. ಇದಕ್ಕೆ ಸಾಕ್ಷಿಯಂತಿದೆ ಬೆಳಗಾವಿ ಜಿಲ್ಲೆಯಲ್ಲಿ ನಡೆದ ಬರ್ಬರ ಕೊಲೆ ಪ್ರಕರಣ. ಕೇವಲ 5 ಗುಂಟೆ ಜಮೀನಿಗಾಗಿ ಸಹೋದರನ ಜೊತೆ ಕ್ಯಾತೆ ತೆಗೆದು ಒಡಹುಟ್ಟಿದವನನ್ನೇ ಅಣ್ಣನನ್ನೇ ತಮ್ಮ ಕೊಂದಿದ್ದಾನೆ.

brother kills over  a small land issue
ಸಹೋದರನ ಕೊಲೆ

ಅಥಣಿ/ಬೆಳಗಾವಿ: ತಾಲೂಕಿನ ಹಾಲಳ್ಳಿ ಗ್ರಾಮದಲ್ಲಿ ಜಮೀನು ತಕರಾರಿಗೋಸ್ಕರ ಸಹೋದರನ ತಲೆ ಮೇಲೆ ಭಾರಿ ಗಾತ್ರದ ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಿರುವ ಪ್ರಕರಣ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ಶಿವಲಿಂಗ ಐಗಳಿ (63) ಎಂದು ಗುರುತಿಸಲಾಗಿದೆ.

ಕೊಲೆ ಮಾಡಿರುವ ಆರೋಪದಡಿ ಬಸಪ್ಪ ಐಗಳಿ ಎಂಬುವರನ್ನು ಸದ್ಯ ಐಗಳಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಇವರಿಬ್ಬರ ನಡುವೆ ಜಮೀನು ವ್ಯಾಜ್ಯಕ್ಕೆ ಆಗಾಗ್ಗೆ ಜಗಳ ನಡೆಯುತ್ತಿತ್ತು ಎಂದು ತಿಳಿದು ಬಂದಿದೆ.

brother kills over  a small land issue
ಕೇವಲ ಐದು ಗುಂಟೆ ಜಮೀನಿಗಾಗಿ ಕೊಲೆ

ಘಟನೆ ವಿವರ:

ಕೇವಲ ಐದು ಗುಂಟೆ ಜಮೀನು ಅಣ್ಣ- ತಮ್ಮಂದಿರ ಜಗಳಕ್ಕೆ ಕಾರಣವಾಗಿತ್ತು. ಕೊಲೆಯಾದ ಶಿವಲಿಂಗ ಸರ್ಕಾರಿ ಶಾಲೆಯ ಕಟ್ಟೆಯ ಮೇಲೆ ಮಲಗಿದ್ದ ಸಂದರ್ಭದಲ್ಲಿ ಬಸಪ್ಪ ಐಗಳಿ ದೊಡ್ಡ ಕಲ್ಲನ್ನು ತಲೆ ಮೇಲೆ ಹಾಕಿದ್ದರಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಈ ಘಟನೆ ಬಳಿಕ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು, ಸ್ಥಳಕ್ಕೆ ಅಥಣಿ ಡಿವೈಎಸ್​​ಪಿ ಎಸ್ ವಿ ಗಿರೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಐಗಳಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಥಣಿ/ಬೆಳಗಾವಿ: ತಾಲೂಕಿನ ಹಾಲಳ್ಳಿ ಗ್ರಾಮದಲ್ಲಿ ಜಮೀನು ತಕರಾರಿಗೋಸ್ಕರ ಸಹೋದರನ ತಲೆ ಮೇಲೆ ಭಾರಿ ಗಾತ್ರದ ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಿರುವ ಪ್ರಕರಣ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ಶಿವಲಿಂಗ ಐಗಳಿ (63) ಎಂದು ಗುರುತಿಸಲಾಗಿದೆ.

ಕೊಲೆ ಮಾಡಿರುವ ಆರೋಪದಡಿ ಬಸಪ್ಪ ಐಗಳಿ ಎಂಬುವರನ್ನು ಸದ್ಯ ಐಗಳಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಇವರಿಬ್ಬರ ನಡುವೆ ಜಮೀನು ವ್ಯಾಜ್ಯಕ್ಕೆ ಆಗಾಗ್ಗೆ ಜಗಳ ನಡೆಯುತ್ತಿತ್ತು ಎಂದು ತಿಳಿದು ಬಂದಿದೆ.

brother kills over  a small land issue
ಕೇವಲ ಐದು ಗುಂಟೆ ಜಮೀನಿಗಾಗಿ ಕೊಲೆ

ಘಟನೆ ವಿವರ:

ಕೇವಲ ಐದು ಗುಂಟೆ ಜಮೀನು ಅಣ್ಣ- ತಮ್ಮಂದಿರ ಜಗಳಕ್ಕೆ ಕಾರಣವಾಗಿತ್ತು. ಕೊಲೆಯಾದ ಶಿವಲಿಂಗ ಸರ್ಕಾರಿ ಶಾಲೆಯ ಕಟ್ಟೆಯ ಮೇಲೆ ಮಲಗಿದ್ದ ಸಂದರ್ಭದಲ್ಲಿ ಬಸಪ್ಪ ಐಗಳಿ ದೊಡ್ಡ ಕಲ್ಲನ್ನು ತಲೆ ಮೇಲೆ ಹಾಕಿದ್ದರಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಈ ಘಟನೆ ಬಳಿಕ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು, ಸ್ಥಳಕ್ಕೆ ಅಥಣಿ ಡಿವೈಎಸ್​​ಪಿ ಎಸ್ ವಿ ಗಿರೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಐಗಳಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.