ಚಿಕ್ಕೋಡಿ: ನಿಪ್ಪಾಣಿ-ಇಚಲಕರಂಜಿ ಹೆದ್ದಾರಿಯಲ್ಲಿ ಬೈಕ್ಗೆ ಲಾರಿ ಡಿಕ್ಕಿಯಾದ ಪರಿಣಾಮ ಯುವಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬೊರಗಾಂವ ಗ್ರಾಮದ ಹೊರ ವಲಯದಲ್ಲಿ ನಡೆದಿದೆ.
ನಿಪ್ಪಾಣಿ ಪಟ್ಟಣದ ಸ್ವಪ್ನಿಲ್ ನಾರಾಯಣ ಬೋಧಲೆ (28) ಮೃತ ಯುವಕ. ಸಂದೇಶ ಕುಂಬಾರ ಎಂಬಾತ ತೀವ್ರವಾಗಿ ಗಾಯಗೊಂಡ ಯುವಕ. ಸ್ವಪ್ನಿಲ್ ತನ್ನ ಸೇಹಿತ ಸಂದೀಪ ಕುಂಬಾರ ಜೊತೆ ನಿಪ್ಪಾಣಿಯಿಂದ ಇಚಲಕರಂಜಿಗೆ ಹೊರಟಿದ್ದ. ಇಚಲಕರಂಜಿಯಿಂದ ತಮಿಳುನಾಡಿಗೆ ಹೊರಟಿದ್ದ ಲಾರಿ ಬೈಕ್ಗೆ ಡಿಕ್ಕಿ ಹೊಡೆದಿದ್ದು ಗಾಯಾಳುಗಳನ್ನು ಕೊಲ್ಲಾಪುರ ಸಿಪಿಆರ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಅಪಘಾತ ಸಂಭವಿಸಿದ ಕೂಡಲೇ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಕುರಿತು ಸದಲಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.