ಚಿಕ್ಕೋಡಿ: ಈ ಹಿಂದಿನ ಸರ್ಕಾರ ಔರಾದ್ಕರ್ ವರದಿಯನ್ನು ನೇಮಿಸಿತ್ತು. ಆದರೆ, ಅದನ್ನು ಅನುಷ್ಠಾನಕ್ಕೆ ನಮ್ಮ ಸರ್ಕಾರ ತಂದಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದರು.
ನಿಪ್ಪಾಣಿಯಲ್ಲಿ ಪೊಲೀಸ್ ವಸತಿ ಗೃಹ ಮತ್ತು ಅಗ್ನಿಶಾಮಕ ಠಾಣೆ ಉದ್ಘಾಟಿಸಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಡಿಆರ್ ವ್ಯಾನ್ನಲ್ಲಿ ಪತ್ರಕರ್ತರನ್ನು ನಿಪ್ಪಾಣಿಗೆ ಕರೆತಂದ ಪ್ರಕರಣಕ್ಕೆ ಜಿಲ್ಲಾ ವಾರ್ತಾ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರುತ್ತೇನೆ. ಹೀಗೆ ಮಾಡಿದ್ದು ಸರಿಯಲ್ಲ ಎಂದರು.
ಆಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಯಡಿಯೂರಪ್ಪನವರು ಪ್ರಸ್ತುತ ಇರುವ ರಾಜಕೀಯ ಸ್ಥಿತಿಯನ್ನ ವಿಶ್ಲೇಷಣೆ ಮಾಡಿದ್ದಾರೆ ಅಷ್ಟೇ ಎಂದರು. ಅನರ್ಹರಿಗೆ ಟಿಕೆಟ್ ಕೊಡೋ ವಿಚಾರದ ಬಗ್ಗೆ ಕೋರ್ ಕಮಿಟಿ ಮತ್ತು ಪಾರ್ಲಿಮೆಂಟರಿ ಕಮಿಟಿ ತಿರ್ಮಾನ ಮಾಡುತ್ತದೆ ಎಂದರು ಸಚಿವ ಬೊಮ್ಮಾಯಿ