ETV Bharat / state

ಕೊರೊನಾ ನಿಯಂತ್ರಣಕ್ಕೆ ಸರ್ಕಾರದ ಜೊತೆ ಕೈಜೋಡಿಸಿ.. ಅಭಿನವ ಶ್ರೀಗಳ ಕರೆ

ದೇಶವನ್ನು ಕಾಡುತ್ತಿರುವ ಕೊರೊನಾ ಸೋಂಕು ತಡೆಗೆ ಸರ್ಕಾರ ವಿಧಿಸುವ ನಿಯಮಗಳನ್ನು ಎಲ್ಲರೂ ಪಾಲಿಸಬೇಕು. ಇದರೊಂದಿಗೆ ಸರ್ಕಾರ ಜೊತೆ ಕೈಜೋಡಿಸುವ ಪ್ರಯತ್ನ ಮಾಡಬೇಕು ಎಂದು ನಯಾನಗರ ಸುಖದೇವಾನಂದ ಮಠದ ಪೀಠಾಧ್ಯಕ್ಷ ಶ್ರೀ ಅಭಿನವಸಿದ್ದಲಿಂಗ ಸ್ವಾಮೀಜಿ ಹೇಳಿದರು.

author img

By

Published : May 1, 2020, 8:28 PM IST

Do not violate government regulations due to corona
ಸುಖದೇವಾನಂದ ಮಠದ ಪೀಠಾಧ್ಯಕ್ಷ ಶ್ರೀ ಅಭಿನವಸಿದ್ದಲಿಂಗ ಸ್ವಾಮೀಜಿ

ಬೈಲಹೊಂಗಲ(ಬೆಳಗಾವಿ): ಮಹಾಮಾರಿ ಕೊರೊನಾ ಸೋಂಕು ದೇಶಕ್ಕೆ ಅಂಟಿಕೊಂಡಿದೆ. ಪ್ರತಿಯೊಬ್ಬರು ಎಚ್ಚರವಹಿಸುವುದರ ಜೊತೆಗೆ ಸರ್ಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಸರ್ಕಾರದೊಂದಿಗೆ ಕೈಜೋಡಿಸಬೇಕು ಎಂದು ನಯಾನಗರ ಸುಖದೇವಾನಂದ ಮಠದ ಪೀಠಾಧ್ಯಕ್ಷ ಶ್ರೀ ಅಭಿನವಸಿದ್ದಲಿಂಗ ಸ್ವಾಮೀಜಿ ಹೇಳಿದರು.

ಸುಖದೇವಾನಂದ ಮಠದ ಪೀಠಾಧ್ಯಕ್ಷ ಶ್ರೀ ಅಭಿನವಸಿದ್ದಲಿಂಗ ಸ್ವಾಮೀಜಿ..

ಕೊರೊನಾ ಸೋಂಕಿಗೆ ಭಯ ಪಡುವ ಬದಲು ಎಚ್ಚರವಹಿಸುವುದು ಅಗತ್ಯ. ಸರ್ಕಾರ ಘೋಷಿಸುವ ಲಾಕ್‌ಡೌನ್ ಆದೇಶಗಳನ್ನು ಪಾಲಿಸಬೇಕು ಎಂದು ಮಾಧ್ಯಮಗೋಷ್ಠಿಯಲ್ಲಿ ಮನವಿ ಮಾಡಿದರು. ಧರ್ಮ ಹಾಗೂ ಅವುಗಳ ಕುರಿತು ವಿಚಾರ ಮಾಡುವ, ಚರ್ಚಿಸುವ ಸಂದರ್ಭ ಇದಲ್ಲ. ಮುಖ್ಯವಾಗಿ ಕೊರೊನಾ ಹಿಮ್ಮೆಟ್ಟಿಸುವಲ್ಲಿ ಎಚ್ಚರವಹಿಸಬೇಕು. ಈನಿಟ್ಟಿನಲ್ಲಿ ನಯಾನಗರ ಗ್ರಾಮದ ಪ್ರತಿಯೊಬ್ಬರಿಗೂ ಮಠದಿಂದ ಮಾಸ್ಕ್​ಗಳನ್ನು ವಿತರಿಸಲಾಗಿದೆ. ಧರಿಸಿಕೊಂಡೆ ಹೊರಗಡೆ ಬರಬೇಕು ಎಂದರು.

ಈ ಸಂದರ್ಭದಲ್ಲಿ ನಮ್ಮನ್ನು ನಾವೇ ರಕ್ಷಿಸಿಕೊಳ್ಳದಿದ್ದರೆ, ನಮಗೆ ಮತ್ತು ನಮ್ಮ ಪರಿವಾರಕ್ಕೆ ನಾವೇ ಶತ್ರುಗಳಾಗುತ್ತೇವೆ. ಜನರು ಅನಾವಶ್ಯಕವಾಗಿ ಗುಂಪು, ಗುಂಪಾಗಿ ಸಂಚರಿಸಬಾರದು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ನಯಾನಗರ ಗ್ರಾಮದಲ್ಲಿ ಶಿಸ್ತಿನ ವ್ಯವಸ್ಥೆ ಮಾಡಲಾಗಿದ್ದು, ಈಗಾಗಲೇ ನಡೆಯಬೇಕಿದ್ದ ಜಾತ್ರೆಯನ್ನೂ ರದ್ದು ಮಾಡಲಾಗಿದೆ. ಸುಖದೇವಾನಂದ ಸಿದ್ದಲಿಂಗ ಗುರುಗಳ ಆಶೀರ್ವಾದ ಈ ನಾಡಿನ ಜನತೆ ಮೇಲಿರಲಿದೆ ಎಂದರು.

ವೈದ್ಯರು , ಪೊಲೀಸರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಹಾಗೂ ಮಾಧ್ಯಮದವರು ಕೊರೊನಾ ವಿರುದ್ಧ ಹೋರಾಟದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ. ಅವರೆಲ್ಲರಿಗೂ ಅಭಿನಂದನೆಗಳು ಎಂದು ತಿಳಿಸಿದರು.

ಬೈಲಹೊಂಗಲ(ಬೆಳಗಾವಿ): ಮಹಾಮಾರಿ ಕೊರೊನಾ ಸೋಂಕು ದೇಶಕ್ಕೆ ಅಂಟಿಕೊಂಡಿದೆ. ಪ್ರತಿಯೊಬ್ಬರು ಎಚ್ಚರವಹಿಸುವುದರ ಜೊತೆಗೆ ಸರ್ಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಸರ್ಕಾರದೊಂದಿಗೆ ಕೈಜೋಡಿಸಬೇಕು ಎಂದು ನಯಾನಗರ ಸುಖದೇವಾನಂದ ಮಠದ ಪೀಠಾಧ್ಯಕ್ಷ ಶ್ರೀ ಅಭಿನವಸಿದ್ದಲಿಂಗ ಸ್ವಾಮೀಜಿ ಹೇಳಿದರು.

ಸುಖದೇವಾನಂದ ಮಠದ ಪೀಠಾಧ್ಯಕ್ಷ ಶ್ರೀ ಅಭಿನವಸಿದ್ದಲಿಂಗ ಸ್ವಾಮೀಜಿ..

ಕೊರೊನಾ ಸೋಂಕಿಗೆ ಭಯ ಪಡುವ ಬದಲು ಎಚ್ಚರವಹಿಸುವುದು ಅಗತ್ಯ. ಸರ್ಕಾರ ಘೋಷಿಸುವ ಲಾಕ್‌ಡೌನ್ ಆದೇಶಗಳನ್ನು ಪಾಲಿಸಬೇಕು ಎಂದು ಮಾಧ್ಯಮಗೋಷ್ಠಿಯಲ್ಲಿ ಮನವಿ ಮಾಡಿದರು. ಧರ್ಮ ಹಾಗೂ ಅವುಗಳ ಕುರಿತು ವಿಚಾರ ಮಾಡುವ, ಚರ್ಚಿಸುವ ಸಂದರ್ಭ ಇದಲ್ಲ. ಮುಖ್ಯವಾಗಿ ಕೊರೊನಾ ಹಿಮ್ಮೆಟ್ಟಿಸುವಲ್ಲಿ ಎಚ್ಚರವಹಿಸಬೇಕು. ಈನಿಟ್ಟಿನಲ್ಲಿ ನಯಾನಗರ ಗ್ರಾಮದ ಪ್ರತಿಯೊಬ್ಬರಿಗೂ ಮಠದಿಂದ ಮಾಸ್ಕ್​ಗಳನ್ನು ವಿತರಿಸಲಾಗಿದೆ. ಧರಿಸಿಕೊಂಡೆ ಹೊರಗಡೆ ಬರಬೇಕು ಎಂದರು.

ಈ ಸಂದರ್ಭದಲ್ಲಿ ನಮ್ಮನ್ನು ನಾವೇ ರಕ್ಷಿಸಿಕೊಳ್ಳದಿದ್ದರೆ, ನಮಗೆ ಮತ್ತು ನಮ್ಮ ಪರಿವಾರಕ್ಕೆ ನಾವೇ ಶತ್ರುಗಳಾಗುತ್ತೇವೆ. ಜನರು ಅನಾವಶ್ಯಕವಾಗಿ ಗುಂಪು, ಗುಂಪಾಗಿ ಸಂಚರಿಸಬಾರದು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ನಯಾನಗರ ಗ್ರಾಮದಲ್ಲಿ ಶಿಸ್ತಿನ ವ್ಯವಸ್ಥೆ ಮಾಡಲಾಗಿದ್ದು, ಈಗಾಗಲೇ ನಡೆಯಬೇಕಿದ್ದ ಜಾತ್ರೆಯನ್ನೂ ರದ್ದು ಮಾಡಲಾಗಿದೆ. ಸುಖದೇವಾನಂದ ಸಿದ್ದಲಿಂಗ ಗುರುಗಳ ಆಶೀರ್ವಾದ ಈ ನಾಡಿನ ಜನತೆ ಮೇಲಿರಲಿದೆ ಎಂದರು.

ವೈದ್ಯರು , ಪೊಲೀಸರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಹಾಗೂ ಮಾಧ್ಯಮದವರು ಕೊರೊನಾ ವಿರುದ್ಧ ಹೋರಾಟದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ. ಅವರೆಲ್ಲರಿಗೂ ಅಭಿನಂದನೆಗಳು ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.