ETV Bharat / state

ರಿಯಲ್ ಎಸ್ಟೇಟ್ ಉದ್ಯಮಿಗೆ ಪರಲೋಕ ದರ್ಶನ.. ಪೊಲೀಸರಿಗೆ ಶರಣಾದ್ಲು ನೆಲಮಂಗಲದ ಸುರಸುಂದರಾಗಿ

author img

By

Published : Nov 8, 2021, 1:07 PM IST

Updated : Nov 8, 2021, 2:27 PM IST

ರಿಯಲ್ ಎಸ್ಟೇಟ್ ಉದ್ಯಮಿಯನ್ನು ಕೊಲೆ ಮಾಡಿದ ಬ್ಯೂಟಿಶಿಯನ್​​ ನೇರವಾಗಿ ಪೊಲೀಸ್​ ಠಾಣೆಗೆ ಶರಣಾಗಿದ್ದಾಳೆ.

businessman murder in nelamangala
ನೆಲಮಂಗಲದಲ್ಲಿ ಉದ್ಯಮಿ ಕೊಲೆ

ನೆಲಮಂಗಲ: ರಿಯಲ್ ಎಸ್ಟೇಟ್ ಉದ್ಯಮಿಯನ್ನು ಕೊಲೆ ಮಾಡಿದ ಬ್ಯೂಟಿ ಪಾರ್ಲರ್​ನ ಬ್ಯೂಟಿಯೊಬ್ಬಳು ನೇರವಾಗಿ ಪೊಲೀಸ್​ ಠಾಣೆಗೆ ಆಗಮಿಸಿ ಪೊಲೀಸರಿಗೆ ಶರಣಾಗಿದ್ದಾಳೆ.

ರಿಯಲ್ ಎಸ್ಟೇಟ್ ಉದ್ಯಮಿಯನ್ನು ಕೊಲೆಗೈದ ಬ್ಯೂಟಿಶಿಯನ್

ಪಲಾರ್ ಸ್ವಾಮಿ ಅಲಿಯಾಸ್​ ಸ್ವಾಮಿ ರಾಜ್ (50) ಕೊಲೆಗೀಡಾದ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದು, ಕೊಲೆಗೈದ ಆರೋಪಿ ಬ್ಯೂಟಿ ಪಾರ್ಲರ್ ಬ್ಯೂಟಿ ನೇತ್ರಾ ನೇರವಾಗಿ ಮಾದನಾಯಕನಹಳ್ಳಿ ಪೊಲೀಸ್​ ಠಾಣೆಗೆ ಬಂದು ಶರಣಾಗಿದ್ದಾಳೆ.

ಕೊಲೆಯಾದ ಪಲಾರ್ ಸ್ವಾಮಿ 25 ವರ್ಷಗಳ ಹಿಂದೆ ಸತ್ಯಕುಮಾರಿ ಜೊತೆ ವಿವಾಹವಾಗಿದ್ದರು. ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದ ಈತ ಬೆಂಗಳೂರು ಉತ್ತರ ತಾಲೂಕಿನಲ್ಲಿ ಲೇಔಟ್ ನಿರ್ಮಾಣ ಮಾಡಿ ನೂರಾರು ಕೋಟಿ ಸಂಪಾದನೆ ಮಾಡಿದ್ದರು.

accused
ಆರೋಪಿ ಮಹಿಳೆ

ಈ ವೇಳೆ 6 ವರ್ಷಗಳ ಹಿಂದೆ ಬ್ಯೂಟಿ ಪಾರ್ಲರ್​ನಲ್ಲಿ ಕೆಲಸ ಮಾಡುತ್ತಿದ್ದ ನೇತ್ರಾ ಎಂಬಾಕೆಯ ಪರಿಚಯವಾಗಿತ್ತು. ಬ್ಯೂಟಿಶಿಯನ್​​ ಸೌಂದರ್ಯಕ್ಕೆ ಮನಸೋತ ಪಲಾರ್ ಸ್ವಾಮಿ, ಆಕೆಯೊಂದಿಗೆ ಎರಡನೇ ಮದುವೆಯಾಗಿದ್ದರು. ಅಲ್ಲದೆ ಹಾರೋಕ್ಯಾತನಹಳ್ಳಿ 6 ಕೋಟಿ ಖರ್ಚು ಮಾಡಿ ಭವ್ಯವಾದ ಬಂಗಲೆ ಕಟ್ಟಿ ವಾಸಿಸುತ್ತಿದ್ದರು.

ಪಲಾರ್ ಸ್ವಾಮಿ ಎರಡನೇ ಮದುವೆಯಾದರೂ ಮೊದಲನೇ ಹೆಂಡತಿಯ ಮಕ್ಕಳ ಮೇಲೆ ಪ್ರೀತಿ ಹೊಂದಿದ್ದರು. ಹಾಗಾಗಿ ಮಕ್ಕಳಿಗೆ ಹಣ ಸಹಾಯ ಮಾಡುತ್ತಿದ್ದರು. ಕೆಲ ದಿನಗಳ ಹಿಂದೆ ಮೊದಲನೇ ಹೆಂಡತಿಯ ಮಗಳಿಗೆ ಸ್ಕೂಟರ್​ ಕೊಡಿಸಿದ್ದರಂತೆ. ಇದರಿಂದ ಕೋಪಗೊಂಡ ನೇತ್ರಾ ಪತಿಯನ್ನು ಕೊಲೆ ಮಾಡಿದ್ದಾಳೆ ಎಂಬ ಆರೋಪ ಕೇಳಿ ಬಂದಿದೆ.

accused
ಆರೋಪಿ ಮಹಿಳೆ

ತನ್ನ ಗಂಡ ಲೈಂಗಿಕ ಕಿರುಕುಳ ನೀಡುತ್ತಿದ್ದ. ಪರ ಪುರುಷರೊಂದಿಗೆ ಮಲಗುವಂತೆ ಬಲವಂತ ಮಾಡುತ್ತಿದ್ದ. ಇದರಿಂದ ತಾನೇ ಕಬ್ಬಿಣದ ರಾಡ್​​​​​ನಿಂದ ಕೊಲೆ ಮಾಡಿರುವುದಾಗಿ ಮಾದನಾಯಕನಹಳ್ಳಿ ಪೊಲೀಸ್ ಠಾಣೆಗೆ ಬಂದು ಶರಣಾದ ಆರೋಪಿ ನೇತ್ರಾ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾಳೆ.

ಇದನ್ನೂ ಓದಿ: ಇಂದು ಸಂಪುಟ ಸಭೆ: ಕಿತ್ತೂರು ಕರ್ನಾಟಕ ನಾಮಕರಣ, ನೂತನ ಮರಳು ನೀತಿ ಚರ್ಚೆ ಸಾಧ್ಯತೆ

ನೆಲಮಂಗಲ: ರಿಯಲ್ ಎಸ್ಟೇಟ್ ಉದ್ಯಮಿಯನ್ನು ಕೊಲೆ ಮಾಡಿದ ಬ್ಯೂಟಿ ಪಾರ್ಲರ್​ನ ಬ್ಯೂಟಿಯೊಬ್ಬಳು ನೇರವಾಗಿ ಪೊಲೀಸ್​ ಠಾಣೆಗೆ ಆಗಮಿಸಿ ಪೊಲೀಸರಿಗೆ ಶರಣಾಗಿದ್ದಾಳೆ.

ರಿಯಲ್ ಎಸ್ಟೇಟ್ ಉದ್ಯಮಿಯನ್ನು ಕೊಲೆಗೈದ ಬ್ಯೂಟಿಶಿಯನ್

ಪಲಾರ್ ಸ್ವಾಮಿ ಅಲಿಯಾಸ್​ ಸ್ವಾಮಿ ರಾಜ್ (50) ಕೊಲೆಗೀಡಾದ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದು, ಕೊಲೆಗೈದ ಆರೋಪಿ ಬ್ಯೂಟಿ ಪಾರ್ಲರ್ ಬ್ಯೂಟಿ ನೇತ್ರಾ ನೇರವಾಗಿ ಮಾದನಾಯಕನಹಳ್ಳಿ ಪೊಲೀಸ್​ ಠಾಣೆಗೆ ಬಂದು ಶರಣಾಗಿದ್ದಾಳೆ.

ಕೊಲೆಯಾದ ಪಲಾರ್ ಸ್ವಾಮಿ 25 ವರ್ಷಗಳ ಹಿಂದೆ ಸತ್ಯಕುಮಾರಿ ಜೊತೆ ವಿವಾಹವಾಗಿದ್ದರು. ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದ ಈತ ಬೆಂಗಳೂರು ಉತ್ತರ ತಾಲೂಕಿನಲ್ಲಿ ಲೇಔಟ್ ನಿರ್ಮಾಣ ಮಾಡಿ ನೂರಾರು ಕೋಟಿ ಸಂಪಾದನೆ ಮಾಡಿದ್ದರು.

accused
ಆರೋಪಿ ಮಹಿಳೆ

ಈ ವೇಳೆ 6 ವರ್ಷಗಳ ಹಿಂದೆ ಬ್ಯೂಟಿ ಪಾರ್ಲರ್​ನಲ್ಲಿ ಕೆಲಸ ಮಾಡುತ್ತಿದ್ದ ನೇತ್ರಾ ಎಂಬಾಕೆಯ ಪರಿಚಯವಾಗಿತ್ತು. ಬ್ಯೂಟಿಶಿಯನ್​​ ಸೌಂದರ್ಯಕ್ಕೆ ಮನಸೋತ ಪಲಾರ್ ಸ್ವಾಮಿ, ಆಕೆಯೊಂದಿಗೆ ಎರಡನೇ ಮದುವೆಯಾಗಿದ್ದರು. ಅಲ್ಲದೆ ಹಾರೋಕ್ಯಾತನಹಳ್ಳಿ 6 ಕೋಟಿ ಖರ್ಚು ಮಾಡಿ ಭವ್ಯವಾದ ಬಂಗಲೆ ಕಟ್ಟಿ ವಾಸಿಸುತ್ತಿದ್ದರು.

ಪಲಾರ್ ಸ್ವಾಮಿ ಎರಡನೇ ಮದುವೆಯಾದರೂ ಮೊದಲನೇ ಹೆಂಡತಿಯ ಮಕ್ಕಳ ಮೇಲೆ ಪ್ರೀತಿ ಹೊಂದಿದ್ದರು. ಹಾಗಾಗಿ ಮಕ್ಕಳಿಗೆ ಹಣ ಸಹಾಯ ಮಾಡುತ್ತಿದ್ದರು. ಕೆಲ ದಿನಗಳ ಹಿಂದೆ ಮೊದಲನೇ ಹೆಂಡತಿಯ ಮಗಳಿಗೆ ಸ್ಕೂಟರ್​ ಕೊಡಿಸಿದ್ದರಂತೆ. ಇದರಿಂದ ಕೋಪಗೊಂಡ ನೇತ್ರಾ ಪತಿಯನ್ನು ಕೊಲೆ ಮಾಡಿದ್ದಾಳೆ ಎಂಬ ಆರೋಪ ಕೇಳಿ ಬಂದಿದೆ.

accused
ಆರೋಪಿ ಮಹಿಳೆ

ತನ್ನ ಗಂಡ ಲೈಂಗಿಕ ಕಿರುಕುಳ ನೀಡುತ್ತಿದ್ದ. ಪರ ಪುರುಷರೊಂದಿಗೆ ಮಲಗುವಂತೆ ಬಲವಂತ ಮಾಡುತ್ತಿದ್ದ. ಇದರಿಂದ ತಾನೇ ಕಬ್ಬಿಣದ ರಾಡ್​​​​​ನಿಂದ ಕೊಲೆ ಮಾಡಿರುವುದಾಗಿ ಮಾದನಾಯಕನಹಳ್ಳಿ ಪೊಲೀಸ್ ಠಾಣೆಗೆ ಬಂದು ಶರಣಾದ ಆರೋಪಿ ನೇತ್ರಾ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾಳೆ.

ಇದನ್ನೂ ಓದಿ: ಇಂದು ಸಂಪುಟ ಸಭೆ: ಕಿತ್ತೂರು ಕರ್ನಾಟಕ ನಾಮಕರಣ, ನೂತನ ಮರಳು ನೀತಿ ಚರ್ಚೆ ಸಾಧ್ಯತೆ

Last Updated : Nov 8, 2021, 2:27 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.