ETV Bharat / state

ಬೆಂಗಳೂರಲ್ಲಿ ನಾಳೆಯೂ ಮುಂದುವರಿಯಲಿದೆ ವರುಣನ ಆರ್ಭಟ

author img

By

Published : Aug 6, 2020, 7:24 PM IST

ಸಿಲಿಕಾನ್ ಸಿಟಿಯಲ್ಲಿ ವಿಪರೀತ ಮಳೆ ಸುರಿಯುತ್ತಿದ್ದು, ಇದು ನಾಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Forecast by the Meteorological Department
ಸಿಲಿಕಾನ್ ಸಿಟಿಯಲ್ಲಿ ವರುಣನ ಆರ್ಭಟ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ವರುಣನ ಆರ್ಭಟ ಜೋರಾಗಿದೆ. ಇಂದು ಸುರಿದ ಮಳೆಗೆ ಬೆಂಗಳೂರು ನಗರ ಕೆರೆಯಂತಾಗಿದೆ. ಕಳೆದ ಎರಡು ದಿನಗಳಿಂದ ಮೋಡ ಕವಿದ ವಾತಾವರಣವಿದ್ದು, ಇಂದು ಸಂಜೆ ಗಾಳಿ ಸಹಿತ ಜೋರಾದ ಮಳೆ ಸುರಿದಿದೆ.

ಜಯನಗರ, ಮತ್ತಿಕರೆ, ಮೆಜೆಸ್ಟಿಕ್, ಬನಶಂಕರಿ, ಕೆಆರ್ ಮಾರ್ಕೆಟ್, ಮೈಸೂರು ರಸ್ತೆಯಲ್ಲಿ ವಿಪರೀತ ಮಳೆಯಾಗಿದೆ. ಇನ್ನು ಕಳೆದ ಒಂದು ಗಂಟೆಯಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕಚೇರಿಯಿಂದ ಮನೆಗೆ ತೆರಳುವ ಬೈಕ್ ಸವಾರರು ಪರದಾಡುವಂತಾಗಿದೆ.

ಅಲ್ಲದೆ ಮೋಡ ಕವಿದ ವಾತಾವರಣವಿದ್ದು ರಾತ್ರಿವರೆಗೂ ಮಳೆಯಾಗುವ ಸಾಧ್ಯತೆ ಇದೆ. ಈಗಾಗಲೇ ಹವಾಮಾನ ಇಲಾಖೆಯ ಇಂದು ಮತ್ತು ನಾಳೆ ಜೋರು ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ.

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ವರುಣನ ಆರ್ಭಟ ಜೋರಾಗಿದೆ. ಇಂದು ಸುರಿದ ಮಳೆಗೆ ಬೆಂಗಳೂರು ನಗರ ಕೆರೆಯಂತಾಗಿದೆ. ಕಳೆದ ಎರಡು ದಿನಗಳಿಂದ ಮೋಡ ಕವಿದ ವಾತಾವರಣವಿದ್ದು, ಇಂದು ಸಂಜೆ ಗಾಳಿ ಸಹಿತ ಜೋರಾದ ಮಳೆ ಸುರಿದಿದೆ.

ಜಯನಗರ, ಮತ್ತಿಕರೆ, ಮೆಜೆಸ್ಟಿಕ್, ಬನಶಂಕರಿ, ಕೆಆರ್ ಮಾರ್ಕೆಟ್, ಮೈಸೂರು ರಸ್ತೆಯಲ್ಲಿ ವಿಪರೀತ ಮಳೆಯಾಗಿದೆ. ಇನ್ನು ಕಳೆದ ಒಂದು ಗಂಟೆಯಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕಚೇರಿಯಿಂದ ಮನೆಗೆ ತೆರಳುವ ಬೈಕ್ ಸವಾರರು ಪರದಾಡುವಂತಾಗಿದೆ.

ಅಲ್ಲದೆ ಮೋಡ ಕವಿದ ವಾತಾವರಣವಿದ್ದು ರಾತ್ರಿವರೆಗೂ ಮಳೆಯಾಗುವ ಸಾಧ್ಯತೆ ಇದೆ. ಈಗಾಗಲೇ ಹವಾಮಾನ ಇಲಾಖೆಯ ಇಂದು ಮತ್ತು ನಾಳೆ ಜೋರು ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.