ETV Bharat / state

ಹೈಕೋರ್ಟ್ ಜಡ್ಜ್​ ಸಹಿಯನ್ನೇ ನಕಲು ಮಾಡಿದ ಭೂಪರು... ಖದೀಮರಿಗಾಗಿ ಪೊಲೀಸರ ತಲಾಶ್​

ಹೈಕೋರ್ಟ್​ ನ್ಯಾಯಮೂರ್ತಿಗಳ ಸಹಿಯನ್ನು ನಕಲು ಮಾಡಿ ವಾರಂಟ್​ಗೆ ತಡೆಯಾಜ್ಞೆ ನೀಡಿರುವ ರೀತಿಯ ಆದೇಶ ಪ್ರತಿಯನ್ನು ಸೃಷ್ಟಿಸಿ ಕೋರ್ಟ್​ಗೆ ಸಲ್ಲಿಸಿರುವ ಆರೋಪಿಗಳ ಬಂಧನಕ್ಕೆ ಪೊಲೀಸರು ತಲಾಶ್​ ನಡೆಸಿದ್ದಾರೆ.

author img

By

Published : Jun 26, 2019, 3:26 PM IST

ಹೈಕೋರ್ಟ್​

ಬೆಂಗಳೂರು: ಉತ್ತರ ಪ್ರದೇಶ ಮೂಲದವರೆನ್ನಲಾದ ಕೆಲ ಖದೀಮರು ಹೈಕೋರ್ಟ್​ನ ನ್ಯಾಯಮೂರ್ತಿಗಳ ಸಹಿಯನ್ನೇ ನಕಲು ಮಾಡಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ಬೆಳಕಿಗೆ ಬಂದಿದೆ.

ಉತ್ತರ ಪ್ರದೇಶ ಮೂಲದ ಕೆಲವರು ಹಲವು ಅಪರಾಧ ಚಟುವಟಿಕೆಗಳಲ್ಲಿ‌ ಭಾಗಿಯಾಗಿ ತಲೆ‌ಮರೆಸಿಕೊಂಡಿದ್ರು. ಹೀಗಾಗಿ ಡಿ.ಜಿ ಮತ್ತು. ಐಜಿಪಿ ಉತ್ತರ ಪ್ರದೇಶ ರಾಜ್ಯದ ಮುಖಾಂತರ ಜಾಮೀನು ರಹಿತ ವಾರಂಟ್ ಜಾರಿಗೊಳಿಸಿದ್ದರು. ಆದ್ರೆ ಆರೋಪಿಗಳಾದ‌ ವಿಕ್ಕಿ ಸಿಂಗ್‌ ಹಾಗೂ ವಿಶಾಲ್ ಸಿಂಗ್ ವಾರಂಟ್​ಗೆ ತಡೆಯಾಜ್ಞೆ ನೀಡಿರುವುದಾಗಿ ಆದೇಶ ಪ್ರತಿ ಸೃಷ್ಟಿಸಿ ಹೈಕೋರ್ಟ್ ನ್ಯಾ. ಕೆ. ನಟರಾಜನ್ ಸಹಿ ನಕಲು ಮಾಡಿದ್ದಾರೆ.

ಈ ವಿಚಾರ ಹೈಕೋರ್ಟ್ ಡೆಪ್ಯೂಟಿ ರಿಜಿಸ್ಟ್ರಾರ್ ಗಮನಕ್ಕೆ ಬಂದಿದ್ದು, ತಕ್ಷಣ ಅವರು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ ಆರೋಪಿಗಳು ಪರಾರಿಯಾಗಿದ್ದು, ವಿಧಾನಸೌಧ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಬೆಂಗಳೂರು: ಉತ್ತರ ಪ್ರದೇಶ ಮೂಲದವರೆನ್ನಲಾದ ಕೆಲ ಖದೀಮರು ಹೈಕೋರ್ಟ್​ನ ನ್ಯಾಯಮೂರ್ತಿಗಳ ಸಹಿಯನ್ನೇ ನಕಲು ಮಾಡಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ಬೆಳಕಿಗೆ ಬಂದಿದೆ.

ಉತ್ತರ ಪ್ರದೇಶ ಮೂಲದ ಕೆಲವರು ಹಲವು ಅಪರಾಧ ಚಟುವಟಿಕೆಗಳಲ್ಲಿ‌ ಭಾಗಿಯಾಗಿ ತಲೆ‌ಮರೆಸಿಕೊಂಡಿದ್ರು. ಹೀಗಾಗಿ ಡಿ.ಜಿ ಮತ್ತು. ಐಜಿಪಿ ಉತ್ತರ ಪ್ರದೇಶ ರಾಜ್ಯದ ಮುಖಾಂತರ ಜಾಮೀನು ರಹಿತ ವಾರಂಟ್ ಜಾರಿಗೊಳಿಸಿದ್ದರು. ಆದ್ರೆ ಆರೋಪಿಗಳಾದ‌ ವಿಕ್ಕಿ ಸಿಂಗ್‌ ಹಾಗೂ ವಿಶಾಲ್ ಸಿಂಗ್ ವಾರಂಟ್​ಗೆ ತಡೆಯಾಜ್ಞೆ ನೀಡಿರುವುದಾಗಿ ಆದೇಶ ಪ್ರತಿ ಸೃಷ್ಟಿಸಿ ಹೈಕೋರ್ಟ್ ನ್ಯಾ. ಕೆ. ನಟರಾಜನ್ ಸಹಿ ನಕಲು ಮಾಡಿದ್ದಾರೆ.

ಈ ವಿಚಾರ ಹೈಕೋರ್ಟ್ ಡೆಪ್ಯೂಟಿ ರಿಜಿಸ್ಟ್ರಾರ್ ಗಮನಕ್ಕೆ ಬಂದಿದ್ದು, ತಕ್ಷಣ ಅವರು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ ಆರೋಪಿಗಳು ಪರಾರಿಯಾಗಿದ್ದು, ವಿಧಾನಸೌಧ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Intro:ಹೈಕೋರ್ಟ್ ನ್ಯಾಯಮೂರ್ತಿಗಳ ಸಹಿಯನ್ನೆ ನಕಲು
ಆರೋಪಿಗಳಿಗೆ ಪೊಲೀಸರಿಂದ ಶೋಧ

ಭವ್ಯ

Higcourt files ಬಳಸಿ

ಹೈಕೋರ್ಟ್ ನ್ಯಾಯಮೂರ್ತಿಗಳ ಸಹಿಯನ್ನೆ ನಕಲು ಮಾಡಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ಬೆಳಕಿಗೆ ಬಂದಿದೆ.
ಉತ್ತರ ಪ್ರದೇಶ ಮೂಲದ ಕ್ರಿಮಿನಲ್ ಆರೋಪಿಗಳು ಸಿಲಿಕಾನ್ ಸಿಟಿಯಲ್ಲಿ ಹಲವಾರು ಅಪರಾಧ ಚಟುವಟಿಕೆಯಲ್ಲಿ‌ ಭಾಗಿಯಾಗಿ ಉತ್ತರಪ್ರದೇಶದಲ್ಲಿ ತಲೆ‌ಮರೆಸಿಕೊಂಡಿದ್ರು. ಹೀಗಾಗಿ ಡಿ.ಜಿ ಮತ್ತು. ಐಜಿಪಿ ಉತ್ತರ ಪ್ರದೇಶ ರಾಜ್ಯ ಮುಖಾಂತರ ಜಾಮೀನು ರಹಿತ ವಾರಂಟ್ ಜಾರಿಗೊಳಿಸಿತ್ತು..

ಆದ್ರೆ ಆರೋಪಿಗಳಾದ‌ ವಿಕ್ಕಿ ಸಿಂಗ್‌ ಹಾಗೂ ವಿಶಾಲ್ ಸಿಂಗ್
ವಾರಂಟ್ ಗೆ ತಡೆಯಾಜ್ಞೆ ನೀಡಿರುವುದಾಗಿ ಆದೇಶ ಪ್ರತಿ ಸೃಷ್ಟಿ ಮಾಡಿ ಹೈಕೋರ್ಟ್ ನ್ಯಾ.ಕೆ.ನಟರಾಜನ್ ಸಹಿ ನಕಲು ಮಾಡಿದ್ದಾರೆ. ಈ ವಿಚಾರ ಹೈಕೋರ್ಟ್ ಡೆಪ್ಯೂಟಿ ರಿಜಿಸ್ಟ್ರಾರ್ ಗಮನಕ್ಕೆ ಬಂದಿದ್ದು ತಕ್ಷಣ ಅನಿತಾ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಸದ್ಯ ಆರೋಪಿಗಳು ಪರಾರಿಯಾಗಿದ್ದು ವಿಧಾನ ಸೌಧ ಪೊಲೀಸರು ತನಿಕೆ ಮುಂದುವರೆಸಿದ್ದಾರೆ.



Body:KN_BNG_03_26-HIGCOURT_BHAVYA_7204498Conclusion:KN_BNG_03_26-HIGCOURT_BHAVYA_7204498

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.