ಬೆಂಗಳೂರು: ವಿಜಯನಗರದ ಹೆಡ್ ಮಾಸ್ಟರ್ ಭದ್ರಯ್ಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ 8 ಆರೋಪಿಗಳ ವಿರುದ್ಧ ಸಿಸಿಬಿ ಪೊಲೀಸರು ಕೋಕಾ ಕಾಯ್ದೆ ಪ್ರಯೋಗಿಸಿದ್ದಾರೆ.
ಈ ಪ್ರಕರಣದ ಪ್ರಮುಖ ಆರೋಪಿ ಆರ್ಟಿಇ ಕಾರ್ಯಕರ್ತ ರವಿ ಸೇರಿದಂತೆ ಎಲ್ಲಾ ಆರೋಪಿಗಳ ಮೇಲೆ ಕೋಕಾ ಕಾಯ್ದೆ ಜಾರಿಯಾಗಿದೆ. ಕಳೆದ ಫೆಬ್ರವರಿ 19 ರಂದು ವಿಜಯನಗರದ ಹೆಡ್ ಮಾಸ್ಟರ್ ಭದ್ರಯ್ಯ ಎಂಬುವರ ಅಪಹರಣ ಮಾಡಲಾಗಿತ್ತು. ಪ್ರಕರಣ ನಡೆದು ನಾಲ್ಕು ತಿಂಗಳ ಬಳಿಕ ಜೂನ್ 8ರಂದು ಆರೋಪಿ ರವಿ ಎಂಬಾತನನ್ನ ಬಂಧಿಸಲಾಗಿತ್ತು.
ಅಷ್ಟೆ ಅಲ್ಲದೇ ಇತ್ತೀಚೆಗೆ ರೌಡಿಶೀಟರ್ ಲಕ್ಷ್ಮಣನ ಕೊಲೆ ಪ್ರಕರಣ ಹಾಗೂ ರಕ್ತಚಂದನ ಕಳ್ಳ ಸಾಗಾಣಿಕೆ ಪ್ರಕರಣದಲ್ಲಿ ಆರೋಪಿಗಳ ಮೇಲೆ ಕೋಕಾ ಕಾಯ್ದೆಯನ್ನು ಸಿಸಿಬಿ ಜಾರಿಗೊಳಿಸಿತ್ತು. ಇದೀಗ ಹೆಡ್ ಮಾಸ್ಟರ್ ಅಪಹರಣ ಪ್ರಕರಣದಲ್ಲಿ ಕೋಕಾ ಕಾಯ್ದೆ ಹಾಕಿ ಬಿಸಿ ಮುಟ್ಟಿಸಿದ್ದಾರೆ.