ETV Bharat / state

ಕೃಷಿ ಮಸೂದೆ ವಿರೋಧಿಸಿ ರಾಜ್ಯದಲ್ಲಿ ರೈತ ಮಹಾಪಂಚಾಯತ್; ಮುಖಂಡರ ಆಗಮನ

author img

By

Published : Mar 20, 2021, 10:24 AM IST

ಶಿವಮೊಗ್ಗದಲ್ಲಿ ರೈತ ಮಹಾಪಂಚಾಯತ್ ನಡೆಸಲು ರಾಷ್ಟ್ರೀಯ ರೈತ ಮುಖಂಡರಾದ ರಾಕೇಶ್ ಟಿಕಾಯತ್, ಯದುವೀರ್ ಸಿಂಗ್ ಕರ್ನಾಟಕಕ್ಕೆ ಆಗಮಿಸಿದ್ದು, ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಪ್ರಯಾಣ ಬೆಳೆಸಿದ್ದಾರೆ.

farmer leaders protest begins from shimogha
ರೈತ ನಾಯಕರ ಆಗಮನ

ಬೆಂಗಳೂರು: ಶಿವಮೊಗ್ಗದಲ್ಲಿ ರೈತ ಮಹಾಪಂಚಾಯತ್ ನಡೆಸಲು ರಾಷ್ಟ್ರೀಯ ರೈತ ನಾಯಕರು ಆಗಮಿಸಿದ್ದು, ಬೆಂಗಳೂರಿನ ಮೌರ್ಯ ಸರ್ಕಲ್​ನಲ್ಲಿರುವ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ನಂತರ ಶಿವಮೊಗ್ಗಕ್ಕೆ ತೆರಳಿದರು.

farmer leaders protest begins from shimogha
ರೈತ ನಾಯಕರ ಆಗಮನ

ಕೇಂದ್ರ ರೈತ ನಾಯಕರಾದ ರಾಕೇಶ್ ಟಿಕಾಯತ್, ಯದುವೀರ್ ಸಿಂಗ್ ಹಾಗೂ ರಾಜ್ಯ ರೈತ ಮುಖಂಡರಾದ ಬಡಗಲಪುರ ನಾಗೇಂದ್ರ, ಕುರುಬೂರು ಶಾಂತಕುಮಾರ್, ಚುಕ್ಕಿ‌ ನಂಜುಂಡಸ್ವಾಮಿ,‌ ಕೋಡಿಹಳ್ಳಿ ಚಂದ್ರಶೇಖರ್ ಮೊದಲಾದವರು ಸಾಥ್ ನೀಡಿದರು.

farmer leaders protest begins from shimogha
ರೈತ ನಾಯಕರ ಆಗಮನ

ರಾಜ್ಯದಲ್ಲಿ ಇಂದಿನಿಂದ ರೈತ ಮಹಾಪಂಚಾಯತ್ ಆರಂಭವಾಗಲಿದ್ದು, ಕೇಂದ್ರದ ಮೂರು ರೈತ ವಿರೋಧಿ ಶಾಸನಗಳ ಬಗ್ಗೆ ಜನಜಾಗೃತಿ ಮೂಡಿಸಲಿದ್ದಾರೆ. ಇಂದಿನಿಂದ ಮೂರು ದಿನ ರಾಜ್ಯ ಪ್ರವಾಸ ಮಾಡಿ, ರೈತರಲ್ಲಿ ಅರಿವು ಮೂಡಿಸಲಿದ್ದಾರೆ.

ರೈತ ನಾಯಕರ ಆಗಮನ

ಈ ಬಗ್ಗೆ ಮಾತನಾಡಿದ ಬಡಗಲಪುರ ನಾಗೇಂದ್ರ, ಕೇಂದ್ರದ ಕೃಷಿ ಮಸೂದೆಗಳನ್ನು ವಿರೋಧಿಸಿ, ಕಳೆದ ನಾಲ್ಕು ತಿಂಗಳಿಂದ ಹೋರಾಟ ನಡೆಯುತ್ತಿದೆ. ಇದರ ಭಾಗವಾಗಿ ರಾಷ್ಟ್ರೀಯ ಸಂಯುಕ್ತ ಕಿಸಾನ್ ಮೋರ್ಚಾದ ನಾಯಕರು ಮೂರು ದಿನದ ರಾಜ್ಯ ಪ್ರವಾಸ ಕೈಗೊಂಡು ಇಂದು ಶಿವಮೊಗ್ಗ, ನಾಳೆ ಹಾವೇರಿ ಹಾಗೂ ಸೋಮವಾರ ನಗರದ ಬೃಹತ್ ವಿಧಾನಸೌಧ ಚಲೋ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು. ಉತ್ತರ ಭಾರತ ಹಾಗೂ ದಕ್ಷಿಣ ಭಾರತ ರೈತರ ಹೋರಾಟದ ಕೊಂಡಿಯನ್ನು ಗಟ್ಟಿಮಾಡುವ ಹೊಸ ಮುನ್ನುಡಿ ಬರೆಯಲಾಗುತ್ತಿದೆ ಎಂದರು.

farmer leaders protest begins from shimogha
ರೈತ ನಾಯಕರ ಆಗಮನ

ಬೆಂಗಳೂರು: ಶಿವಮೊಗ್ಗದಲ್ಲಿ ರೈತ ಮಹಾಪಂಚಾಯತ್ ನಡೆಸಲು ರಾಷ್ಟ್ರೀಯ ರೈತ ನಾಯಕರು ಆಗಮಿಸಿದ್ದು, ಬೆಂಗಳೂರಿನ ಮೌರ್ಯ ಸರ್ಕಲ್​ನಲ್ಲಿರುವ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ನಂತರ ಶಿವಮೊಗ್ಗಕ್ಕೆ ತೆರಳಿದರು.

farmer leaders protest begins from shimogha
ರೈತ ನಾಯಕರ ಆಗಮನ

ಕೇಂದ್ರ ರೈತ ನಾಯಕರಾದ ರಾಕೇಶ್ ಟಿಕಾಯತ್, ಯದುವೀರ್ ಸಿಂಗ್ ಹಾಗೂ ರಾಜ್ಯ ರೈತ ಮುಖಂಡರಾದ ಬಡಗಲಪುರ ನಾಗೇಂದ್ರ, ಕುರುಬೂರು ಶಾಂತಕುಮಾರ್, ಚುಕ್ಕಿ‌ ನಂಜುಂಡಸ್ವಾಮಿ,‌ ಕೋಡಿಹಳ್ಳಿ ಚಂದ್ರಶೇಖರ್ ಮೊದಲಾದವರು ಸಾಥ್ ನೀಡಿದರು.

farmer leaders protest begins from shimogha
ರೈತ ನಾಯಕರ ಆಗಮನ

ರಾಜ್ಯದಲ್ಲಿ ಇಂದಿನಿಂದ ರೈತ ಮಹಾಪಂಚಾಯತ್ ಆರಂಭವಾಗಲಿದ್ದು, ಕೇಂದ್ರದ ಮೂರು ರೈತ ವಿರೋಧಿ ಶಾಸನಗಳ ಬಗ್ಗೆ ಜನಜಾಗೃತಿ ಮೂಡಿಸಲಿದ್ದಾರೆ. ಇಂದಿನಿಂದ ಮೂರು ದಿನ ರಾಜ್ಯ ಪ್ರವಾಸ ಮಾಡಿ, ರೈತರಲ್ಲಿ ಅರಿವು ಮೂಡಿಸಲಿದ್ದಾರೆ.

ರೈತ ನಾಯಕರ ಆಗಮನ

ಈ ಬಗ್ಗೆ ಮಾತನಾಡಿದ ಬಡಗಲಪುರ ನಾಗೇಂದ್ರ, ಕೇಂದ್ರದ ಕೃಷಿ ಮಸೂದೆಗಳನ್ನು ವಿರೋಧಿಸಿ, ಕಳೆದ ನಾಲ್ಕು ತಿಂಗಳಿಂದ ಹೋರಾಟ ನಡೆಯುತ್ತಿದೆ. ಇದರ ಭಾಗವಾಗಿ ರಾಷ್ಟ್ರೀಯ ಸಂಯುಕ್ತ ಕಿಸಾನ್ ಮೋರ್ಚಾದ ನಾಯಕರು ಮೂರು ದಿನದ ರಾಜ್ಯ ಪ್ರವಾಸ ಕೈಗೊಂಡು ಇಂದು ಶಿವಮೊಗ್ಗ, ನಾಳೆ ಹಾವೇರಿ ಹಾಗೂ ಸೋಮವಾರ ನಗರದ ಬೃಹತ್ ವಿಧಾನಸೌಧ ಚಲೋ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು. ಉತ್ತರ ಭಾರತ ಹಾಗೂ ದಕ್ಷಿಣ ಭಾರತ ರೈತರ ಹೋರಾಟದ ಕೊಂಡಿಯನ್ನು ಗಟ್ಟಿಮಾಡುವ ಹೊಸ ಮುನ್ನುಡಿ ಬರೆಯಲಾಗುತ್ತಿದೆ ಎಂದರು.

farmer leaders protest begins from shimogha
ರೈತ ನಾಯಕರ ಆಗಮನ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.