ETV Bharat / state

ಬಿಬಿಎಂಪಿ ಕೌನ್ಸಿಲ್​ ಸಭೆಯಲ್ಲಿ ಗಿರೀಶ್​ ಕಾರ್ನಾಡ್​, ನಾರಾಯಣರಾವ್​ಗೆ ಶ್ರದ್ಧಾಂಜಲಿ

ಪಾಲಿಕೆಯ ಕೌನ್ಸಿಲ್ ಸಭೆಯಲ್ಲಿ ಜ್ಞಾನಪೀಠ ಪುರಸ್ಕೃತ ಗಿರೀಶ್ ಕಾರ್ನಾಡ್ ಹಾಗೂ ಪಾಲಿಕೆಯ ಮಾಜಿ ಸದಸ್ಯ ಸತ್ಯ ನಾರಾಯಣರಾವ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು

author img

By

Published : Jun 29, 2019, 7:54 AM IST

ಪಾಲಿಕೆಯ ಕೌನ್ಸಿಲ್ ಸಭೆ

ಬೆಂಗಳೂರು: ಪಾಲಿಕೆಯ ಕೌನ್ಸಿಲ್ ಸಭೆಯಲ್ಲಿ ಜ್ಞಾನಪೀಠ ಪುರಸ್ಕೃತ ಗಿರೀಶ್ ಕಾರ್ನಾಡ್ ಹಾಗೂ ಪಾಲಿಕೆಯ ಮಾಜಿ ಸದಸ್ಯ ಸತ್ಯ ನಾರಾಯಣರಾವ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಈ ವೇಳೆ ಮಾತನಾಡಿದ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್, ಇಬ್ಬರು ಸಾಧಕರ ನಿಧನದಿಂದ ಕನ್ನಡ ಮತ್ತು ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ. ಅಗಲಿಕೆಯ ನೋವು ಭರಿಸುವ ಶಕ್ತಿಯನ್ನು ದೇವರು ಅವರ ಕುಟುಂಬಗಳಿಗೆ ನೀಡಲಿ ಎಂದು ಸಂತಾಪ ಸೂಚಿಸಿದರು.

ಸಂತಾಪ ಸೂಚನೆ ನಂತರ ಇತ್ತೀಚೆಗೆ ಪಾಲಿಕೆಯ ಕಾವೇರಿಪುರ ವಾರ್ಡ್, ಸಗಾಯಪುರ ವಾರ್ಡ್‌ಗಳಲ್ಲಿ ಉಪಚುನಾವಣೆ ನಡೆದಿದ್ದು, ಕಾವೇರಿಪುರ ವಾರ್ಡ್‌ನ ಪಲ್ಲವಿ, ಸಗಾಯಪುರ ವಾರ್ಡ್‌ನ ಪಳನಿಯಮ್ಮಳ್ ಜಯಗಳಿದ್ದರು. ಇವರಿಬ್ಬರು ಪ್ರಮಾಣ ವಚನ ಸ್ವೀಕರಿಸಿ, ಮೇಯರ್ ಹೂಗುಚ್ಛ ನೀಡಿ ಅಭಿನಂದಿಸಿದರು.

ಪಾಲಿಕೆಯ ಕೌನ್ಸಿಲ್ ಸಭೆ

ನಂತರ, ಕೌನ್ಸಿಲ್ ಸಭೆ ಆರಂಭವಾಗುತ್ತಿದ್ದಂತೆ ಮಾತನಾಡಿದ ಆಡಳಿತ ಪಕ್ಷದ ನಾಯಕ ವಾಜಿದ್, ಹಣಕಾಸು ವರ್ಷ ಆರಂಭವಾಗಿ 3 ತಿಂಗಳು ಪೂರ್ಣವಾಗುವ ಮುನ್ನವೇ ಶೇ.50ರಷ್ಟು ಆಸ್ತಿ ಸಂಗ್ರಹವಾಗಿದ್ದು, ಇದಕ್ಕೆ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಹಾಗೂ ಅಧಿಕಾರಿಗಳೇ ಕಾರಣ. ಈವರೆಗೆ 1700 ಕೋಟಿ ಆಸ್ತಿ ತೆರಿಗೆ ಸಂಗ್ರಹವಾಗಿದ್ದು, ಈ ಬಾರಿ 3500 ಕೋಟಿ ರೂ. ಸಂಗ್ರಹಿಸಲಾಗುವುದು. ಪಾಲಿಕೆ ವ್ಯಾಪ್ತಿಯ ಎಲ್ಲಾ ಆಸ್ತಿಗಳು ತೆರಿಗೆ ವ್ಯಾಪ್ತಿಗೆ ಬಂದರೆ ಹೆಚ್ಚಿನ ಸಂಗ್ರಹ ಸಾಧ್ಯ ಎಂದರು.

ಇಂದಿರಾ ಕ್ಯಾಂಟೀನ್ ಟೆಂಡರ್ ರದ್ದುಗೊಳಿಸಿ:

ಇಂದಿರಾ ಕ್ಯಾಂಟೀನ್​ಗಳಲ್ಲಿ ಊಟದ ಕ್ವಾಲಿಟಿ ಸರಿ ಇಲ್ಲ. ಹಾಗಾಗಿ ಸಾರ್ವಜನಿಕರ ಸಂಖ್ಯೆ ಕಡಿಮೆಯಾಗಿದೆ. ತಕ್ಷಣ ಟೆಂಡರ್ ರದ್ದುಗೊಳಿಸಿ ಕ್ಷೇತ್ರವಾರು ಟೆಂಡರ್ ನೀಡುವಂತೆ ಶಾಸಕ‌ ಮುನಿರತ್ನ ಒತ್ತಾಯ ಮಾಡಿದರು. ಮೊದಲ ಬಾರಿಗೆ ಇಂದಿರಾ ಕ್ಯಾಂಟೀನ್ ಬಗ್ಗೆ ಸತ್ಯವನ್ನೇ ಹೇಳಿದ್ದೀರಾ ಎಂದು ಶಾಸಕ ಸತೀಶ್ ರೆಡ್ಡಿ ಮುನಿರತ್ನರ ಕಾಲೆಳೆದರು.

ಬೆಂಗಳೂರು: ಪಾಲಿಕೆಯ ಕೌನ್ಸಿಲ್ ಸಭೆಯಲ್ಲಿ ಜ್ಞಾನಪೀಠ ಪುರಸ್ಕೃತ ಗಿರೀಶ್ ಕಾರ್ನಾಡ್ ಹಾಗೂ ಪಾಲಿಕೆಯ ಮಾಜಿ ಸದಸ್ಯ ಸತ್ಯ ನಾರಾಯಣರಾವ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಈ ವೇಳೆ ಮಾತನಾಡಿದ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್, ಇಬ್ಬರು ಸಾಧಕರ ನಿಧನದಿಂದ ಕನ್ನಡ ಮತ್ತು ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ. ಅಗಲಿಕೆಯ ನೋವು ಭರಿಸುವ ಶಕ್ತಿಯನ್ನು ದೇವರು ಅವರ ಕುಟುಂಬಗಳಿಗೆ ನೀಡಲಿ ಎಂದು ಸಂತಾಪ ಸೂಚಿಸಿದರು.

ಸಂತಾಪ ಸೂಚನೆ ನಂತರ ಇತ್ತೀಚೆಗೆ ಪಾಲಿಕೆಯ ಕಾವೇರಿಪುರ ವಾರ್ಡ್, ಸಗಾಯಪುರ ವಾರ್ಡ್‌ಗಳಲ್ಲಿ ಉಪಚುನಾವಣೆ ನಡೆದಿದ್ದು, ಕಾವೇರಿಪುರ ವಾರ್ಡ್‌ನ ಪಲ್ಲವಿ, ಸಗಾಯಪುರ ವಾರ್ಡ್‌ನ ಪಳನಿಯಮ್ಮಳ್ ಜಯಗಳಿದ್ದರು. ಇವರಿಬ್ಬರು ಪ್ರಮಾಣ ವಚನ ಸ್ವೀಕರಿಸಿ, ಮೇಯರ್ ಹೂಗುಚ್ಛ ನೀಡಿ ಅಭಿನಂದಿಸಿದರು.

ಪಾಲಿಕೆಯ ಕೌನ್ಸಿಲ್ ಸಭೆ

ನಂತರ, ಕೌನ್ಸಿಲ್ ಸಭೆ ಆರಂಭವಾಗುತ್ತಿದ್ದಂತೆ ಮಾತನಾಡಿದ ಆಡಳಿತ ಪಕ್ಷದ ನಾಯಕ ವಾಜಿದ್, ಹಣಕಾಸು ವರ್ಷ ಆರಂಭವಾಗಿ 3 ತಿಂಗಳು ಪೂರ್ಣವಾಗುವ ಮುನ್ನವೇ ಶೇ.50ರಷ್ಟು ಆಸ್ತಿ ಸಂಗ್ರಹವಾಗಿದ್ದು, ಇದಕ್ಕೆ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಹಾಗೂ ಅಧಿಕಾರಿಗಳೇ ಕಾರಣ. ಈವರೆಗೆ 1700 ಕೋಟಿ ಆಸ್ತಿ ತೆರಿಗೆ ಸಂಗ್ರಹವಾಗಿದ್ದು, ಈ ಬಾರಿ 3500 ಕೋಟಿ ರೂ. ಸಂಗ್ರಹಿಸಲಾಗುವುದು. ಪಾಲಿಕೆ ವ್ಯಾಪ್ತಿಯ ಎಲ್ಲಾ ಆಸ್ತಿಗಳು ತೆರಿಗೆ ವ್ಯಾಪ್ತಿಗೆ ಬಂದರೆ ಹೆಚ್ಚಿನ ಸಂಗ್ರಹ ಸಾಧ್ಯ ಎಂದರು.

ಇಂದಿರಾ ಕ್ಯಾಂಟೀನ್ ಟೆಂಡರ್ ರದ್ದುಗೊಳಿಸಿ:

ಇಂದಿರಾ ಕ್ಯಾಂಟೀನ್​ಗಳಲ್ಲಿ ಊಟದ ಕ್ವಾಲಿಟಿ ಸರಿ ಇಲ್ಲ. ಹಾಗಾಗಿ ಸಾರ್ವಜನಿಕರ ಸಂಖ್ಯೆ ಕಡಿಮೆಯಾಗಿದೆ. ತಕ್ಷಣ ಟೆಂಡರ್ ರದ್ದುಗೊಳಿಸಿ ಕ್ಷೇತ್ರವಾರು ಟೆಂಡರ್ ನೀಡುವಂತೆ ಶಾಸಕ‌ ಮುನಿರತ್ನ ಒತ್ತಾಯ ಮಾಡಿದರು. ಮೊದಲ ಬಾರಿಗೆ ಇಂದಿರಾ ಕ್ಯಾಂಟೀನ್ ಬಗ್ಗೆ ಸತ್ಯವನ್ನೇ ಹೇಳಿದ್ದೀರಾ ಎಂದು ಶಾಸಕ ಸತೀಶ್ ರೆಡ್ಡಿ ಮುನಿರತ್ನರ ಕಾಲೆಳೆದರು.

Intro:ಪಾಲಿಕೆಯಲ್ಲಿ‌ಅಗಲಿದ ಗಣ್ಯರಿಗೆ ಸಂತಾಪ ಸೂಚನೆ..‌
*ಅಥವಾ*
ಪಾಲಿಕೆಯಲ್ಲಿ ಅಗಲಿದ ಗಣ್ಯರಿಗೆ ಸಂತಾಪ ಸೂಚನೆ- ಹೊಸ ಸದಸ್ಯರಿಗೆ ಪ್ರಮಾಣ ವಚನ ಸ್ವೀಕಾರ..

ಬೆಂಗಳೂರು: ಇಂದು ಪಾಲಿಕೆಯ ಕೌನ್ಸಿಲ್ ಸಭೆ ಶುರುವಾಗಿದ್ದು, ಜ್ಞಾನಪೀಠ ಪುರಸ್ಕೃತ ಗಿರೀಶ್ ಕಾರ್ನಾಡ್, ಪಾಲಿಕೆ ಮಾಜಿ ಸದಸ್ಯ ಸತ್ಯ ನಾರಾಯಣ ರಾವ್ ರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ವೇಳೆ ಮಾತನಾಡಿದ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್, ಇಬ್ಬರು ಸಾಧಕರ ನಿಧನದಿಂದ ಕನ್ನಡ ಮತ್ತು ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ. ಅಗಲಿಕೆಯ ನೋವನ್ನು ಭರಿಸುವ ಶಕ್ತಿ ಅವರ ಕುಟುಂಬಗಳಿಗೆ ನೀಡಲಿ ಎಂದರು.

ಸಂತಾಪ ಸೂಚನೆ ನಂತರ ಇತ್ತೀಚಿಗೆ ಪಾಲಿಕೆಯ ಕಾವೇರಿಪುರ ವಾರ್ಡ್, ಸಗಾಯಪುರ ವಾರ್ಡ್‌ಗಳಲ್ಲಿ ಉಪಚುನಾವಣೆ ನಡೆದಿದ್ದು, ಕಾವೇರಿಪುರ ವಾರ್ಡ್‌ನ ಪಲ್ಲವಿ, ಸಗಾಯಪುರ ವಾರ್ಡ್‌ನ ಪಳನಿಯಮ್ಮಳ್ ಜಯಗಳಿದ್ದರು. ಇವರಿಬ್ಬರು ಪ್ರಮಾಣ ವಚನ ಸ್ವೀಕರಿಸಿ, ಮೇಯರ್ ಹೂಗುಚ್ಛ ನೀಡಿ ಅಭಿನಂದಿಸಿದರು.

ನಂತರ, ಕೌನ್ಸಿಲ್ ಸಭೆ ಆರಂಭವಾಗುತ್ತಿದ್ದಂತೆ ಮಾತನಾಡಿದ ಆಡಳಿತ ಪಕ್ಷದ ನಾಯಕ ವಾಜಿದ್, ಹಣಕಾಸು ವರ್ಷ ಆರಂಭವಾಗಿ 3 ತಿಂಗಳು ಪೂರ್ಣವಾಗುವ ಮುನ್ನವೇ ಶೇ.50ರಷ್ಟು ಆಸ್ತಿ ಸಂಗ್ರಹವಾಗಿದ್ದು, ಇದಕ್ಕೆ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಹಾಗೂ ಅಧಕಾರಿಗಳೇ  ಕಾರಣ. ಈವರೆಗೆ 1700 ಕೋಟಿ ಆಸ್ತಿ ತೆರಿಗೆ ಸಂಗ್ರಹವಾಗಿದ್ದು, ಈ ಬಾರಿ 3500 ಕೋಟಿ ರೂ. ಸಂಗ್ರಹಿಸಲಾಗುವುದು. ಪಾಲಿಕೆ ವ್ಯಾಪ್ತಿಯ ಎಲ್ಲಾ ಆಸ್ತಿಗಳು ತೆರಿಗೆ ವ್ಯಾಪ್ತಿಗೆ ಬಂದರೆ ಹೆಚ್ಚಿನ ಸಂಗ್ರಹ ಸಾಧ್ಯ ಎಂದರು.

*ಇಂದಿರಾ ಕ್ಯಾಂಟೀನ್ ಟೆಂಡರ್ ರದ್ದುಗೊಳಿಸಿ; ಶಾಸಕ‌ ಮುನಿರತ್ನ*

ಇನ್ನು ಸಭೆಯಲ್ಲಿ ಇಂದಿರಾ ಕ್ಯಾಂಟೀನ್ ಟೆಂಡರ್ ರದ್ದುಗೊಳಿಸುವಂತೆ ಕೂಗು ಕೇಳಿ ಬಂತು..‌
ಇಂದಿರಾ ಕ್ಯಾಂಟೀನ್ ಗಳಲ್ಲಿ ಊಟದ ಕ್ವಾಲಿಟಿ ಸರಿ ಇಲ್ಲ.. ಹಾಗಾಗಿ ಸಾರ್ವಜನಿಕರ ಸಂಖ್ಯೆ ಕಡಿಮೆಯಾಗಿದೆ.. ತಕ್ಷಣ ಟೆಂಡರ್ ರದ್ದು ಗೊಳಿಸಿ ಕ್ಷೇತ್ರವಾರು ಟೆಂಡರ್ ನೀಡುವಂತೆ ಮುನಿರತ್ನ ಒತ್ತಾಯ ಮಾಡಿದರು.. ಮೊದಲ ಬಾರಿಗೆ ಇಂದಿರಾ ಕ್ಯಾಂಟೀನ್ ಬಗ್ಗೆ ಸತ್ಯವನ್ನೇ ಹೇಳಿದ್ದೀರಾ ಅಂತ ಮುನಿರತ್ನರ ಕಾಲೆಳೆದರು ಶಾಸಕ ಸತೀಶ್ ರೆಡ್ಡಿ..‌

ಕಾಂಗ್ರೆಸ್ ಪಕ್ಷದದಿಂದಲೇ ಊಟದ ಗುಣಮಟ್ಟದ ಬಗ್ಗೆ ಅಪಸ್ವರ ಕೇಳಿ ಬಂದಿದೆ.. ಇಂದಿರಾ ಕ್ಯಾಂಟೀನ್ ಊಟದ ಲೆಕ್ಕದಲ್ಲಿ ವ್ಯತ್ಯಾಸ ವಾಗುತ್ತಿದೆ..‌ ತಿಂದೊರು ೧೦ ಜನ ಆದರೆ ಬಿಲ್ ಇರೋದು ೧೦೦ ಜನದ್ದು.. ಕೂಡಲೇ ಲೆಕ್ಕದಲ್ಲಿ ಆಗ್ತಿರೋ ಅಕ್ರಮಕ್ಕೆ ಕಡಿವಾಣ ಹಾಕಿ ಅಂತ ಬಿಜೆಪಿ ಸದಸ್ಯ ಡಾ. ರಾಜು ಆಗ್ರಹಿಸಿದರು..


KN_BNG_04_COUNCIL_MEETING_SCRIPT_7201801

Byte- gangabike_mayoreBody:..Conclusion:..
ETV Bharat Logo

Copyright © 2024 Ushodaya Enterprises Pvt. Ltd., All Rights Reserved.