ಬೆಂಗಳೂರು: ಬಸವನಗುಡಿಯಲ್ಲಿ ರಾಷ್ಟ್ರೀಯ ಮೀನುಗಾರರ ಸಮಾವೇಶ ಮುಗಿಸಿದ ಬಳಿಕ ಸಿಎಂ ಯಡಿಯೂರಪ್ಪ ಲಾಲ್ಬಾಗ್ ರಸ್ತೆಯಲ್ಲಿರುವ ಪ್ರಸಿದ್ಧ ಎಂಟಿಆರ್ ಹೋಟೆಲ್ನಲ್ಲಿ ಊಟ ಮಾಡಿದರು.
ಸುಮಾರು ಅರ್ಧ ತಾಸಿಗೂ ಹೆಚ್ಚು ಕಾಲ ಹೋಟೆಲ್ನಲ್ಲಿ ಇದ್ದ ಸಿಎಂ ಯಡಿಯೂರಪ್ಪಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸಾಥ್ ನೀಡಿದರು. ಪೂರಿ ಊಟ ಸವಿದ ಸಿಎಂ ಯಡಿಯೂರಪ್ಪ ಆ ಸಮಯದಲ್ಲೇ ಹೋಟೆಲ್ ಸಿಬ್ಬಂದಿ ಜತೆ ಸೆಲ್ಫಿಗೂ ಪೋಸ್ ಕೊಟ್ಟರು.
ಹೋಟೆಲ್ಗೆ ಬಂದಿದ್ದ ಕೆಲ ಗ್ರಾಹಕರೂ ಸಿಎಂ ನೋಡಿ ಅಚ್ಚರಿಗೊಂಡರು. ಸಿಎಂ ಜೊತೆ ಕೆಲ ಗ್ರಾಹಕರು ನಿಂತು ಸೆಲ್ಫಿ ತೆಗೆಸಿಕೊಂಡರು.