ಬೆಂಗಳೂರು: ಖಾಸಗಿ ಬಸ್ಗೆ ಓವರ್ ಲೋಡ್ ಲಗೇಜ್ ಹೇರಿದ್ದ ಪರಿಣಾಮ ಅಂಡರ್ ಪಾಸ್ ಕೆಳಗೆ ಸಿಲುಕಿ ವಾಹನ ಸವಾರರಿಗೆ ತೊಂದರೆಯಾದ ಘಟನೆ ನಗರದ ಮಹಾರಾಣಿ ಕಾಲೇಜು ಬಳಿ ನಡೆದಿದೆ.
ಈ ವೇಳೆ ನಗರದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಹೀಗಾಗಿ, ಇದರ ನಿಯಂತ್ರಣಕ್ಕೆ ಟ್ರಾಫಿಕ್ ಪೊಲೀಸರು ಮುಂದಾಗಿ ವಾಹನ ಸವಾರರ ರೂಟ್ ಬದಲಾವಣೆ ಮಾಡಿದ್ದರು. ಪ್ಯಾಲೇಸ್ ರಸ್ತೆಯ ಅಂಡರ್ ಪಾಸ್ನಿಂದ ಮೈಸೂರು ಬ್ಯಾಂಕ್ ವೃತ್ತದವರೆಗೂ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಪರಿಣಾಮ ವಾಹನ ಸವಾರರು ಕಿರಿಕಿರಿ ಅನುಭವಿಸಿದರು.ಈ ವೇಳೆ ಪೊಲೀಸ್ ಸಿಬ್ಬಂದಿ ಹರಸಾಹಸ ಪಟ್ಟು ಬಸ್ ಟೈರ್ಗಳ ಗಾಳಿ ತೆಗೆದು ವಾಹನವನ್ನು ಹಿಂತೆಗೆದಿದ್ದಾರೆ.
ಓದಿ: 'ಕುಮಾರಸ್ವಾಮಿಗೆ ನಾಲಿಗೆ ಮೇಲೆ ಹಿಡಿತ ಇಲ್ಲ, ಅವರಿಗೆ ಬಾಯಿ ಚಪಲ': ಚಲುವರಾಯ ಸ್ವಾಮಿ ಆರೋಪ