ETV Bharat / state

ಓವರ್​ ಲೋಡ್​: ಬೆಂಗಳೂರಿನ ಅಂಡರ್ ಪಾಸ್​ನಲ್ಲಿ ಸಿಲುಕಿಕೊಂಡ ಖಾಸಗಿ ಬಸ್

ಬಸ್ ಅಂಡರ್ ಪಾಸ್‌ನಲ್ಲಿ ಸಿಲುಕಿಕೊಂಡಿದ್ದರಿಂದ ಪ್ಯಾಲೇಸ್ ರಸ್ತೆಯ ಅಂಡರ್ ಪಾಸ್‌ನಿಂದ ಮೈಸೂರು ಬ್ಯಾಂಕ್ ವೃತ್ತದವರೆಗೂ ಟ್ರಾಫಿಕ್ ಜಾಮ್ ಉಂಟಾಗಿತ್ತು. ಹೀಗಾಗಿ, ವಾಹನ ಸವಾರರು ಕಿರಿಕಿರಿ ಅನುಭವಿಸುವಂತಾಯಿತು.

author img

By

Published : Oct 26, 2021, 10:04 PM IST

Updated : Oct 26, 2021, 10:41 PM IST

bus-stuck-in-under-pass-in-bengalore
ಅಂಡರ್ ಪಾಸ್​ನಲ್ಲಿ ಸಿಲುಕಿಕೊಂಡ ಖಾಸಗಿ ಬಸ್

ಬೆಂಗಳೂರು: ಖಾಸಗಿ ಬಸ್​ಗೆ ಓವರ್ ಲೋಡ್ ಲಗೇಜ್ ಹೇರಿದ್ದ ಪರಿಣಾಮ ಅಂಡರ್ ಪಾಸ್ ಕೆಳಗೆ​ ಸಿಲುಕಿ ವಾಹನ ಸವಾರರಿಗೆ ತೊಂದರೆಯಾದ ಘಟನೆ ನಗರದ ಮಹಾರಾಣಿ ಕಾಲೇಜು ಬಳಿ ನಡೆದಿದೆ.

ಅಂಡರ್ ಪಾಸ್​ನಲ್ಲಿ ಸಿಲುಕಿಕೊಂಡ ಖಾಸಗಿ ಬಸ್

ಈ ವೇಳೆ ನಗರದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಹೀಗಾಗಿ, ಇದರ ನಿಯಂತ್ರಣಕ್ಕೆ ಟ್ರಾಫಿಕ್ ಪೊಲೀಸರು ಮುಂದಾಗಿ ವಾಹನ ಸವಾರರ ರೂಟ್ ಬದಲಾವಣೆ ಮಾಡಿದ್ದರು. ಪ್ಯಾಲೇಸ್ ರಸ್ತೆಯ ಅಂಡರ್ ಪಾಸ್‌ನಿಂದ ಮೈಸೂರು ಬ್ಯಾಂಕ್ ವೃತ್ತದವರೆಗೂ ಟ್ರಾಫಿಕ್ ಜಾಮ್ ಉಂಟಾಗಿತ್ತು.

ಪರಿಣಾಮ ವಾಹನ ಸವಾರರು ಕಿರಿಕಿರಿ ಅನುಭವಿಸಿದರು.ಈ ವೇಳೆ ಪೊಲೀಸ್​ ಸಿಬ್ಬಂದಿ ಹರಸಾಹಸ ಪಟ್ಟು ಬಸ್ ಟೈರ್‌ಗಳ ಗಾಳಿ ತೆಗೆದು ವಾಹನವನ್ನು ಹಿಂತೆಗೆದಿದ್ದಾರೆ.

ಓದಿ: 'ಕುಮಾರಸ್ವಾಮಿಗೆ ನಾಲಿಗೆ ಮೇಲೆ ಹಿಡಿತ ಇಲ್ಲ, ಅವರಿಗೆ ಬಾಯಿ ಚಪಲ': ಚಲುವರಾಯ ಸ್ವಾಮಿ ಆರೋಪ

ಬೆಂಗಳೂರು: ಖಾಸಗಿ ಬಸ್​ಗೆ ಓವರ್ ಲೋಡ್ ಲಗೇಜ್ ಹೇರಿದ್ದ ಪರಿಣಾಮ ಅಂಡರ್ ಪಾಸ್ ಕೆಳಗೆ​ ಸಿಲುಕಿ ವಾಹನ ಸವಾರರಿಗೆ ತೊಂದರೆಯಾದ ಘಟನೆ ನಗರದ ಮಹಾರಾಣಿ ಕಾಲೇಜು ಬಳಿ ನಡೆದಿದೆ.

ಅಂಡರ್ ಪಾಸ್​ನಲ್ಲಿ ಸಿಲುಕಿಕೊಂಡ ಖಾಸಗಿ ಬಸ್

ಈ ವೇಳೆ ನಗರದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಹೀಗಾಗಿ, ಇದರ ನಿಯಂತ್ರಣಕ್ಕೆ ಟ್ರಾಫಿಕ್ ಪೊಲೀಸರು ಮುಂದಾಗಿ ವಾಹನ ಸವಾರರ ರೂಟ್ ಬದಲಾವಣೆ ಮಾಡಿದ್ದರು. ಪ್ಯಾಲೇಸ್ ರಸ್ತೆಯ ಅಂಡರ್ ಪಾಸ್‌ನಿಂದ ಮೈಸೂರು ಬ್ಯಾಂಕ್ ವೃತ್ತದವರೆಗೂ ಟ್ರಾಫಿಕ್ ಜಾಮ್ ಉಂಟಾಗಿತ್ತು.

ಪರಿಣಾಮ ವಾಹನ ಸವಾರರು ಕಿರಿಕಿರಿ ಅನುಭವಿಸಿದರು.ಈ ವೇಳೆ ಪೊಲೀಸ್​ ಸಿಬ್ಬಂದಿ ಹರಸಾಹಸ ಪಟ್ಟು ಬಸ್ ಟೈರ್‌ಗಳ ಗಾಳಿ ತೆಗೆದು ವಾಹನವನ್ನು ಹಿಂತೆಗೆದಿದ್ದಾರೆ.

ಓದಿ: 'ಕುಮಾರಸ್ವಾಮಿಗೆ ನಾಲಿಗೆ ಮೇಲೆ ಹಿಡಿತ ಇಲ್ಲ, ಅವರಿಗೆ ಬಾಯಿ ಚಪಲ': ಚಲುವರಾಯ ಸ್ವಾಮಿ ಆರೋಪ

Last Updated : Oct 26, 2021, 10:41 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.