ETV Bharat / state

ಪಾದರಾಯನಪುರದಲ್ಲಿ ಕೊರೊ‌ನಾ ವಾರಿಯರ್ ಮೇಲೆ ಹಲ್ಲೆ ಪ್ರಕರಣ: ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

author img

By

Published : Aug 18, 2020, 10:19 PM IST

ಪಾದರಾಯನಪುರ ಗಲಾಟೆಯಲ್ಲಿ ಭಾಗಿಯಾಗಿ ಸೈಯದ್ ಪರವೇಜ್ ಪಾಷ ಎಂಬ ಆರೋಪಿಯನ್ನು ಜೆ.ಜೆ‌ನಗರ ಪೊಲೀಸರು ಬಂಧಿಸಿದ್ದಾರೆ.

Assault case on Corona Warriors  In Padarayanapura
ಪಾದರಾಯನಪುರದಲ್ಲಿ ಕೊರೊ‌ನಾ ವಾರಿಯರ್ ಮೇಲೆ ಹಲ್ಲೆ ಪ್ರಕರಣ

ಬೆಂಗಳೂರು: ಸೋಂಕಿತರನ್ನು ಕ್ವಾರಂಟೈನ್ ಮಾಡಲು ತೆರಳಿದ ಕೊರೊನಾ ವಾರಿಯರ್ಸ್​ ಮೇಲೆ ಹಲ್ಲೆ ನಡೆಸಿ ತಲೆಮರೆಸಿಕೊಂಡಿದ್ದ ಆರೊಪಿಯನ್ನ ಬಂಧಿಸುವಲ್ಲಿ ಜೆ.ಜೆ‌ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.

ಪಾದರಾಯನಪುರ ಗಲಾಟೆಯಲ್ಲಿ ಭಾಗಿಯಾಗಿ ಸೈಯದ್ ಪರವೇಜ್ ಪಾಷ ಪರಾರಿಯಾಗಿದ್ದ. ಈತ ಚಿಂತಾಮಣಿಯಲ್ಲಿ ಇರುವ ಮಾಹಿತಿ‌ ಮೇರೆಗೆ ನಗರ ಪೊಲೀಸರು ತೆರಳಿ ಈತನನ್ನು ಬಂಧಿಸಿದ್ದಾರೆ.

ಪಾದರಾಯನಪುರ ಬಳಿ ಕೊರೊನಾ ವಾರಿಯರ್ ಮೇಲೆ ಗಲಾಟೆ ಮಾಡಿ, ಸ್ಥಳದಲ್ಲಿ ಸೀಲ್​ಡೌನ್ ಇದ್ದರೂ ಕೂಡ ತಗಡು ಮುರಿದು ಆರೋಪಿಗಳು ಗಲಭೆ ಸೃಷ್ಟಿ ಮಾಡಿದ್ದರು. ಈ ಪ್ರಕರಣ ಬಹಳ ಗಂಭೀರತೆ ಪಡೆದು ಪ್ರಕರಣದಲ್ಲಿ ಕಾರ್ಪೋರೇಟರ್ ಸೇರಿದಂತೆ ಹಲವರನ್ನ ಬಂಧನಕ್ಕೊಳಪಡಿಸಲಾಗಿತ್ತು.

ಸದ್ಯ ಬಂಧಿತ ಆರೋಪಿ ಗಲಭೆಯಾದಾಗ ಸಿಕ್ಕ ಸಿಕ್ಕ ವಸ್ತುಗಳನ್ನ ಪುಡಿ ಪುಡಿ ಮಾಡಿ ದಾಂಧಲೆ ಸೃಷ್ಟಿ ಮಾಡಿದ್ದ ಎನ್ನಲಾಗಿದೆ. ಘಟನೆಯಲ್ಲಿ ಈತ ಕೂಡ ಪ್ರಮುಖ ಆರೋಪಿಯಾಗಿದ್ದು, ಸದ್ಯ ಪಶ್ಚಿಮ ವಿಭಾಗ ಡಿಸಿಪಿ ನೇತೃತ್ವದಲ್ಲಿ ತನಿಖೆ ಮುಂದುವರೆದಿದೆ.

ಬೆಂಗಳೂರು: ಸೋಂಕಿತರನ್ನು ಕ್ವಾರಂಟೈನ್ ಮಾಡಲು ತೆರಳಿದ ಕೊರೊನಾ ವಾರಿಯರ್ಸ್​ ಮೇಲೆ ಹಲ್ಲೆ ನಡೆಸಿ ತಲೆಮರೆಸಿಕೊಂಡಿದ್ದ ಆರೊಪಿಯನ್ನ ಬಂಧಿಸುವಲ್ಲಿ ಜೆ.ಜೆ‌ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.

ಪಾದರಾಯನಪುರ ಗಲಾಟೆಯಲ್ಲಿ ಭಾಗಿಯಾಗಿ ಸೈಯದ್ ಪರವೇಜ್ ಪಾಷ ಪರಾರಿಯಾಗಿದ್ದ. ಈತ ಚಿಂತಾಮಣಿಯಲ್ಲಿ ಇರುವ ಮಾಹಿತಿ‌ ಮೇರೆಗೆ ನಗರ ಪೊಲೀಸರು ತೆರಳಿ ಈತನನ್ನು ಬಂಧಿಸಿದ್ದಾರೆ.

ಪಾದರಾಯನಪುರ ಬಳಿ ಕೊರೊನಾ ವಾರಿಯರ್ ಮೇಲೆ ಗಲಾಟೆ ಮಾಡಿ, ಸ್ಥಳದಲ್ಲಿ ಸೀಲ್​ಡೌನ್ ಇದ್ದರೂ ಕೂಡ ತಗಡು ಮುರಿದು ಆರೋಪಿಗಳು ಗಲಭೆ ಸೃಷ್ಟಿ ಮಾಡಿದ್ದರು. ಈ ಪ್ರಕರಣ ಬಹಳ ಗಂಭೀರತೆ ಪಡೆದು ಪ್ರಕರಣದಲ್ಲಿ ಕಾರ್ಪೋರೇಟರ್ ಸೇರಿದಂತೆ ಹಲವರನ್ನ ಬಂಧನಕ್ಕೊಳಪಡಿಸಲಾಗಿತ್ತು.

ಸದ್ಯ ಬಂಧಿತ ಆರೋಪಿ ಗಲಭೆಯಾದಾಗ ಸಿಕ್ಕ ಸಿಕ್ಕ ವಸ್ತುಗಳನ್ನ ಪುಡಿ ಪುಡಿ ಮಾಡಿ ದಾಂಧಲೆ ಸೃಷ್ಟಿ ಮಾಡಿದ್ದ ಎನ್ನಲಾಗಿದೆ. ಘಟನೆಯಲ್ಲಿ ಈತ ಕೂಡ ಪ್ರಮುಖ ಆರೋಪಿಯಾಗಿದ್ದು, ಸದ್ಯ ಪಶ್ಚಿಮ ವಿಭಾಗ ಡಿಸಿಪಿ ನೇತೃತ್ವದಲ್ಲಿ ತನಿಖೆ ಮುಂದುವರೆದಿದೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.