ETV Bharat / sitara

ಕೊಚ್ಚಿಯಲ್ಲಿ ಜರುಗುತ್ತಿರುವ ಹೊಸ ಸಿನಿಮಾ ಚಿತ್ರೀಕರಣದಲ್ಲಿ ಪಾಲ್ಗೊಂಡ ರಾಶಿ ಖನ್ನಾ

ಕೇರಳದ ಕೊಚ್ಚಿಯಲ್ಲಿ ನಡೆಯುತ್ತಿರುವ 'ಅಂಧಾದುನ್' ರೀಮೇಕ್ ಚಿತ್ರದಲ್ಲಿ ರಾಶಿಖನ್ನಾ ಪಾಲ್ಗೊಂಡಿದ್ದಾರೆ. ಸುಮಾರು 1 ವಾರಗಳ ಕಾಲ ರಾಶಿ ಖನ್ನಾ ಕೊಚ್ಚಿಯಲ್ಲಿ ಉಳಿಯಲಿದ್ದು ಚಿತ್ರೀಕರಣ ಪೂರೈಸಲಿದ್ದಾರೆ.

author img

By

Published : Feb 25, 2021, 2:07 PM IST

Raashii Khanna
ರಾಶಿ ಖನ್ನಾ

ಹಿಂದಿಯಿಂದ ಮಲಯಾಳಂಗೆ ರೀಮೇಕ್ ಆಗುತ್ತಿರುವ ಸೂಪರ್ ಹಿಟ್ 'ಅಂಧಾದುನ್' ಸಿನಿಮಾ ಚಿತ್ರೀಕರಣ ಭರದಿಂದ ಸಾಗಿದ್ದು ಸಿನಿಮಾ ಕೊನೆಯ ಹಂತ ತಲುಪಿದೆ. ಇನ್ನೂ ಹೆಸರಿಡದ ಸಿನಿಮಾ ಚಿತ್ರೀಕರಣ ಕೊಚ್ಚಿಯಲ್ಲಿ ನಡೆಯುತ್ತಿದ್ದು ರಾಶಿಖನ್ನಾ ಚಿತ್ರದ ಕೊನೆಯ ಶೆಡ್ಯೂಲ್ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.

ಹಿಂದಿಯಲ್ಲಿ ರಾಧಿಕಾ ಆಪ್ಟೆ ಮಾಡಿದ್ದ ಪಾತ್ರವನ್ನು ಮಲಯಾಳಂನಲ್ಲಿ ರಾಶಿಖನ್ನಾ ಮಾಡುತ್ತಿದ್ದಾರೆ. ಹಾಗೆಯೇ ಹಿಂದಿಯಲ್ಲಿ ಆಯುಷ್ಮಾನ ಖುರಾನ ನಟಿಸಿದ್ದ ಪಾತ್ರದಲ್ಲಿ ಪೃಥ್ವಿರಾಜ್ ಕಾಣಿಸಿಕೊಂಡಿದ್ದಾರೆ. ಸಿನಿಮಾ ಬಗ್ಗೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ರಾಶಿಖನ್ನಾ, "ಅಂಧಾದುನ್ ಮಲಯಾಳಂನಲ್ಲಿ ರೀಮೇಕ್ ಆಗುತ್ತಿದ್ದು ಆ ಪಾತ್ರಕ್ಕೆ ನನಗೆ ಆಫರ್ ಬಂದಾಗ ಸಂತೋಷದಿಂದಲೇ ಒಪ್ಪಿಕೊಂಡೆ. ನಾನು ಈ ಚಿತ್ರದ ಭಾಗವಾಗಿರುವುದಕ್ಕೆ ಬಹಳ ಖುಷಿಯಾಗುತ್ತಿದೆ. ರವಿ ಕೆ. ಚಂದ್ರನ್ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಕೊನೆಯ ಹಂತದ ಚಿತ್ರೀಕರಣದಲ್ಲಿದ್ದೇವೆ. ಸದ್ಯಕ್ಕೆ ಕೇರಳದಲ್ಲಿ ಚಿತ್ರೀಕರಣ ನಡೆಯುತ್ತಿದೆ" ಎಂದು ರಾಶಿಖನ್ನಾ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಕ್ಷಮೆ ಯಾಚಿಸಿದ ದರ್ಶನ್​: ದಾಸನಿಗೆ ನವರಸನಾಯಕನ ಧನ್ಯವಾದ

ಕೊಚ್ಚಿಯಲ್ಲಿ ಸುಮಾರು 1ವಾರಗಳ ಕಾಲ ರಾಶಿಖನ್ನಾ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ. ಇದಕ್ಕೂ ಮುನ್ನ ರಾಶಿಖನ್ನಾ ಶಾಹಿದ್ ಕಪೂರ್ ಜೊತೆ ವೆಬ್​ಸೀರೀಸ್​​​ ಒಂದರ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ತೆಲುಗಿನ ಪ್ರತಿ ರೋಜು ಪಂಡಗ, ವೆಂಕಿ ಮಾಮ, ತೊಲಿ ಪ್ರೇಮ, ಜೈ ಲವಕುಶ ತೆಲುಗು ಸಿನಿಮಾಗಳಲ್ಲಿ ರಾಶಿ ಖನ್ನಾ ನಟಿಸಿದ್ದಾರೆ.

ಹಿಂದಿಯಿಂದ ಮಲಯಾಳಂಗೆ ರೀಮೇಕ್ ಆಗುತ್ತಿರುವ ಸೂಪರ್ ಹಿಟ್ 'ಅಂಧಾದುನ್' ಸಿನಿಮಾ ಚಿತ್ರೀಕರಣ ಭರದಿಂದ ಸಾಗಿದ್ದು ಸಿನಿಮಾ ಕೊನೆಯ ಹಂತ ತಲುಪಿದೆ. ಇನ್ನೂ ಹೆಸರಿಡದ ಸಿನಿಮಾ ಚಿತ್ರೀಕರಣ ಕೊಚ್ಚಿಯಲ್ಲಿ ನಡೆಯುತ್ತಿದ್ದು ರಾಶಿಖನ್ನಾ ಚಿತ್ರದ ಕೊನೆಯ ಶೆಡ್ಯೂಲ್ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.

ಹಿಂದಿಯಲ್ಲಿ ರಾಧಿಕಾ ಆಪ್ಟೆ ಮಾಡಿದ್ದ ಪಾತ್ರವನ್ನು ಮಲಯಾಳಂನಲ್ಲಿ ರಾಶಿಖನ್ನಾ ಮಾಡುತ್ತಿದ್ದಾರೆ. ಹಾಗೆಯೇ ಹಿಂದಿಯಲ್ಲಿ ಆಯುಷ್ಮಾನ ಖುರಾನ ನಟಿಸಿದ್ದ ಪಾತ್ರದಲ್ಲಿ ಪೃಥ್ವಿರಾಜ್ ಕಾಣಿಸಿಕೊಂಡಿದ್ದಾರೆ. ಸಿನಿಮಾ ಬಗ್ಗೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ರಾಶಿಖನ್ನಾ, "ಅಂಧಾದುನ್ ಮಲಯಾಳಂನಲ್ಲಿ ರೀಮೇಕ್ ಆಗುತ್ತಿದ್ದು ಆ ಪಾತ್ರಕ್ಕೆ ನನಗೆ ಆಫರ್ ಬಂದಾಗ ಸಂತೋಷದಿಂದಲೇ ಒಪ್ಪಿಕೊಂಡೆ. ನಾನು ಈ ಚಿತ್ರದ ಭಾಗವಾಗಿರುವುದಕ್ಕೆ ಬಹಳ ಖುಷಿಯಾಗುತ್ತಿದೆ. ರವಿ ಕೆ. ಚಂದ್ರನ್ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಕೊನೆಯ ಹಂತದ ಚಿತ್ರೀಕರಣದಲ್ಲಿದ್ದೇವೆ. ಸದ್ಯಕ್ಕೆ ಕೇರಳದಲ್ಲಿ ಚಿತ್ರೀಕರಣ ನಡೆಯುತ್ತಿದೆ" ಎಂದು ರಾಶಿಖನ್ನಾ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಕ್ಷಮೆ ಯಾಚಿಸಿದ ದರ್ಶನ್​: ದಾಸನಿಗೆ ನವರಸನಾಯಕನ ಧನ್ಯವಾದ

ಕೊಚ್ಚಿಯಲ್ಲಿ ಸುಮಾರು 1ವಾರಗಳ ಕಾಲ ರಾಶಿಖನ್ನಾ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ. ಇದಕ್ಕೂ ಮುನ್ನ ರಾಶಿಖನ್ನಾ ಶಾಹಿದ್ ಕಪೂರ್ ಜೊತೆ ವೆಬ್​ಸೀರೀಸ್​​​ ಒಂದರ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ತೆಲುಗಿನ ಪ್ರತಿ ರೋಜು ಪಂಡಗ, ವೆಂಕಿ ಮಾಮ, ತೊಲಿ ಪ್ರೇಮ, ಜೈ ಲವಕುಶ ತೆಲುಗು ಸಿನಿಮಾಗಳಲ್ಲಿ ರಾಶಿ ಖನ್ನಾ ನಟಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.