ETV Bharat / sitara

‘ಡಾ. ರಾಜ್​​​​​​​​​​​​​​​ಕುಮಾರ್ ಅಭಿಮಾನಿಗಳ ಸಂಘ’ ಟೈಟಲ್ ಬಿಡುಗಡೆ ಮಾಡಿದ ಸುಮಲತಾ ಅಂಬರೀಶ್

ತಾರಕರಾಮ್ ಎಂಬ ಹೊಸ ನಿರ್ದೇಶಕ ಆ್ಯಕ್ಷನ್ ಕಟ್ ಹೇಳುತ್ತಿರುವ ‘ಡಾ ರಾಜ್​​​​​​​​​​​​​​​ಕುಮಾರ್ ಅಭಿಮಾನಿಗಳ ಸಂಘ’ ಶೀರ್ಷಿಕೆಯನ್ನು ಸಂಸದೆ ಸುಮಲತಾ ಅಂಬರೀಶ್ ಇತ್ತೀಚೆಗೆ ಅನಾವರಣಗೊಳಿಸಿದ್ದಾರೆ. ಚಿತ್ರದಲ್ಲಿ ರೈತರ ಸಮಸ್ಯೆ ಜೊತೆ ಮಂಡ್ಯ ಸೊಗಡಿನ ಕಥೆ ಇರಲಿದೆ.

author img

By

Published : Sep 24, 2019, 10:33 AM IST

ಸುಮಲತಾ ಅಂಬರೀಶ್

ನಟರ ಹೆಸರಿನಲ್ಲಿ ಅಭಿಮಾನಿಗಳು ಸಂಘ ಕಟ್ಟುವುದು ಸಾಮಾನ್ಯ. ಆದರೆ ನಟರ ಸಂಘದ ಹೆಸರೇ ಸಿನಿಮಾ ಟೈಟಲ್ ಆದರೆ? ಹೌದು, ‘ಡಾ ರಾಜ್​​​​​​​​ಕುಮಾರ್ ಅಭಿಮಾನಿಗಳ ಸಂಘ’ ಎಂಬ ಸಿನಿಮಾ ಇದೀಗ ಸ್ಯಾಂಡಲ್​​​ವುಡ್​​​​ನಲ್ಲಿ ತಯಾರಾಗುತ್ತಿದೆ.

ಶಿವ ಆರ್ಟ್ಸ್ ಆ್ಯಂಡ್​​​​​​​​​​​​​​​​​​​​​​ ಮೂವೀಸ್ ಬ್ಯಾನರ್ ಮೂಲಕ ‘ಡಾ. ರಾಜ್​​​​​​​​​​​​​​​ಕುಮಾರ್ ಅಭಿಮಾನಿಗಳ ಸಂಘ’ ಸಿನಿಮಾ ಮೈದಳೆಯುತ್ತಿದೆ. ಸಿನಿಮಾ ಶೀರ್ಷಿಕೆಯನ್ನು ಇತ್ತೀಚೆಗೆ ಸಂಸದೆ, ನಟಿ ಸುಮಲತಾ ಅಂಬರೀಶ್ ಮಂಡ್ಯದಲ್ಲಿ ಅನಾವರಣ ಮಾಡಿದ್ದಾರೆ. ರವಿಗೌಡ ಮಂಡ್ಯ ಹಾಗೂ ಹೈದರಾಬಾದ್ ಮೂಲದ ವ್ಯಕ್ತಿಯೊಬ್ಬರು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ತಾರಕರಾಮ್ ಎಂಬುವವರು ಕಥೆ, ಚಿತ್ರಕಥೆ ಬರೆದು ಸಿನಿಮಾ ನಿರ್ದೇಶಿಸಿದ್ದಾರೆ. ಈ ಮುನ್ನ ಇವರು ‘ವಸುಂಧರೆ’ ಸೇರಿ ಅನೇಕ ಕಿರುಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಜೊತೆಗೆ ಬಹಳಷ್ಟು ಸಿನಿಮಾಗಳಲ್ಲಿ ಸಹನಿರ್ದೇಶಕನಾಗಿ ಕೆಲಸ ಮಾಡಿದ್ದಾರೆ. ರೈತರ ಸಮಸ್ಯೆ ಜೊತೆ ಮಂಡ್ಯ ಸೊಗಡಿನ ವಿಚಾರ ಇಟ್ಟುಕೊಂಡು ಚಿತ್ರದ ಕಥೆಯನ್ನು ಬರೆಯಲಾಗಿದೆ. ಚಿತ್ರದಲ್ಲಿ 5 ಹಾಡುಗಳಿವೆ. ಚಿತ್ರಕ್ಕೆ ‘ಟಗರು’ ಖ್ಯಾತಿಯ ಮಾಸ್ತಿ ಮಂಜು ಸಂಭಾಷಣೆ, ಕೆಜಿಎಫ್​​​​​​​​​ ಶ್ರೀಕಾಂತ್ ಸಂಕಲನ ಇದೆ.

ನಟರ ಹೆಸರಿನಲ್ಲಿ ಅಭಿಮಾನಿಗಳು ಸಂಘ ಕಟ್ಟುವುದು ಸಾಮಾನ್ಯ. ಆದರೆ ನಟರ ಸಂಘದ ಹೆಸರೇ ಸಿನಿಮಾ ಟೈಟಲ್ ಆದರೆ? ಹೌದು, ‘ಡಾ ರಾಜ್​​​​​​​​ಕುಮಾರ್ ಅಭಿಮಾನಿಗಳ ಸಂಘ’ ಎಂಬ ಸಿನಿಮಾ ಇದೀಗ ಸ್ಯಾಂಡಲ್​​​ವುಡ್​​​​ನಲ್ಲಿ ತಯಾರಾಗುತ್ತಿದೆ.

ಶಿವ ಆರ್ಟ್ಸ್ ಆ್ಯಂಡ್​​​​​​​​​​​​​​​​​​​​​​ ಮೂವೀಸ್ ಬ್ಯಾನರ್ ಮೂಲಕ ‘ಡಾ. ರಾಜ್​​​​​​​​​​​​​​​ಕುಮಾರ್ ಅಭಿಮಾನಿಗಳ ಸಂಘ’ ಸಿನಿಮಾ ಮೈದಳೆಯುತ್ತಿದೆ. ಸಿನಿಮಾ ಶೀರ್ಷಿಕೆಯನ್ನು ಇತ್ತೀಚೆಗೆ ಸಂಸದೆ, ನಟಿ ಸುಮಲತಾ ಅಂಬರೀಶ್ ಮಂಡ್ಯದಲ್ಲಿ ಅನಾವರಣ ಮಾಡಿದ್ದಾರೆ. ರವಿಗೌಡ ಮಂಡ್ಯ ಹಾಗೂ ಹೈದರಾಬಾದ್ ಮೂಲದ ವ್ಯಕ್ತಿಯೊಬ್ಬರು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ತಾರಕರಾಮ್ ಎಂಬುವವರು ಕಥೆ, ಚಿತ್ರಕಥೆ ಬರೆದು ಸಿನಿಮಾ ನಿರ್ದೇಶಿಸಿದ್ದಾರೆ. ಈ ಮುನ್ನ ಇವರು ‘ವಸುಂಧರೆ’ ಸೇರಿ ಅನೇಕ ಕಿರುಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಜೊತೆಗೆ ಬಹಳಷ್ಟು ಸಿನಿಮಾಗಳಲ್ಲಿ ಸಹನಿರ್ದೇಶಕನಾಗಿ ಕೆಲಸ ಮಾಡಿದ್ದಾರೆ. ರೈತರ ಸಮಸ್ಯೆ ಜೊತೆ ಮಂಡ್ಯ ಸೊಗಡಿನ ವಿಚಾರ ಇಟ್ಟುಕೊಂಡು ಚಿತ್ರದ ಕಥೆಯನ್ನು ಬರೆಯಲಾಗಿದೆ. ಚಿತ್ರದಲ್ಲಿ 5 ಹಾಡುಗಳಿವೆ. ಚಿತ್ರಕ್ಕೆ ‘ಟಗರು’ ಖ್ಯಾತಿಯ ಮಾಸ್ತಿ ಮಂಜು ಸಂಭಾಷಣೆ, ಕೆಜಿಎಫ್​​​​​​​​​ ಶ್ರೀಕಾಂತ್ ಸಂಕಲನ ಇದೆ.

 

ಡಾ ರಾಜಕುಮಾರ್ ಅಭಿಮಾನಿಗಳ ಸಂಘ ಎಂದು ಶೀರ್ಷಿಕೆ ಅನಾವರಣ ಆಗಿದೆ

 

ಅನೇಕ ಹೊಸ ಪ್ರಯತ್ನಗಳು ಆಗಬೇಕು ನಿಜ.  ಬದಲಾವಣೆ ಸಹ ಜಗತ್ತಿನ ನಿಯಮ. ಈಗ ಕೇಳಿ ಚಿತ್ರದ ಹೆಸರೇ ಡಾ ರಾಜಕುಮಾರ್ ಅಭಿಮಾನಿಗಳ ಸಂಘ ಎಂದು. ಹೀಗೆ ಶೀರ್ಷಿಕೆ ಇಟ್ಟರಾದರು ಪ್ರೇಕ್ಷಕರನ್ನು ಸೆಳೆಯುವ ಉದ್ದೇಶ ಇರಬೇಕು.

 

ಶಿವ ಆರ್ಟ್ಸ್ ಅಂಡ್ ಮೂವೀಸ್ ಅಡಿಯಲ್ಲಿ ಡಾ ರಾಜಕುಮಾರ್ ಅಭಿಮಾನಿಗಳ ಸಂಘ ಶೀರ್ಷಿಕೆಯನ್ನು ಸಂಸದೆ, ನಟಿ ಸುಮಲತಾ ಅಂಬರೀಶ್ ಅವರು ಮಂಡ್ಯದಲ್ಲಿ ಇತ್ತೀಚಿಗೆ ಅನಾವರಣ ಮಾಡಿದ್ದಾರೆ. ನಾಲ್ಲಾವು ರೆಡ್ಡಿ ಹೈದರಾಬಾದ್ ಹಾಗೂ ರವಿ ಗೌಡ ಮಂಡ್ಯ ಚಿತ್ರದ ನಿರ್ಮಾಪಕರುಗಳು.

 

ಸಹಕಾರ ನಿರ್ದೇಶಕ ಆಗಿ ಶ್ರಾವಣ ಹಾಗೂ ಗಾಂಚಲಿ ಸಿನಿಮಾಗಳಿಗೆ ಕೆಲಸ ಮಾಡಿ, ವಸುಂಧರೆ ಕಿರು ಚಿತ್ರ ನಿರ್ದೇಶನ ಮಾಡಿದ ತಾರಕರಾಮ ಈ ಚಿತ್ರ ನಿರ್ದೇಶನ ಮಾಡಲಿದ್ದಾರೆ. ಕಥೆ ಹಾಗೂ ಚಿತ್ರಕಥೆ ಸಹ ನಿರ್ದೇಶಕರೆ ಬರೆದಿದ್ದಾರೆ.

 

ರೈತರ ಸಮಸ್ಯೆ ಜೊತೆ ಮಂಡ್ಯ ಸೊಗಡಿನ ವಿಚಾರ ಇಟ್ಟುಕೊಂಡು ಕಥೆ ಮಾಡಲಾಗಿದೆ. ಐದು ಹಾಡುಗಳು ಚಿತ್ರದಲ್ಲಿ ಬಳಸಬೇಕು ಎಂದು ನಿರ್ದೇಶಕರು ತೀರ್ಮಾನಿಸಿದ್ದಾರೆ. ಟಗರು ಖ್ಯಾತಿಯ ಮಾಸ್ತಿ ಮಂಜು ಸಂಭಾಷಣೆ, ಕೆ ಜಿ ಎಫ್ ಶ್ರೀಕಾಂತ್ ಸಂಕಲನ ಮಾಡಲಿದ್ದಾರೆ.

 

ETV Bharat Logo

Copyright © 2024 Ushodaya Enterprises Pvt. Ltd., All Rights Reserved.