ETV Bharat / sitara

ಮಂಡ್ಯದ ಮುದ್ದಾದ ಹುಡುಗ ಗಟ್ಟಿಮೇಳದ ಧೃವನಿಗೆ ಅಪ್ಪು ಸ್ಫೂರ್ತಿಯಂತೆ..

author img

By

Published : Jul 11, 2020, 5:17 PM IST

ಕಿರುತೆರೆಯಲ್ಲಿ ರಂಜನ್​ಗೆ ಬ್ಯುಸಿಯಾಗಿರುವ ರಂಜನ್​ಗೆ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಸ್ಫೂರ್ತಿಯಂತೆ.

dsds
ಗಟ್ಟಿಮೇಳದ ಧೃವನಿಗೆ ಅಪ್ಪು ಸ್ಫೂರ್ತಿಯಂತೆ..!

ಬೆಂಗಳೂರು : ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ಗಟ್ಟಿಮೇಳದಲ್ಲಿ ಧೃವ ಪಾತ್ರಕ್ಕೆ ಜೀವ ತುಂಬಿದ ಈತ ಮಂಡ್ಯದ ಮುದ್ದಾದ ಹುಡುಗ. ಕಿರುತೆರೆ ಲೋಕದಲ್ಲಿ ಧೃವತಾರೆಯಂತೆ ಮಿನುಗುತ್ತಿರುವ ರಂಜನ್ ಹುಟ್ಟಿ ಬೆಳೆದಿದ್ದೆಲ್ಲಾ ಸಕ್ಕರೆ ನಾಡು ಮಂಡ್ಯದಲ್ಲಿ.

ಬಾಲ್ಯದಿಂದಲೂ ರಂಜನ್​ಗೆ ಇದ್ದುದು ಒಂದೇ ಕನಸು! ತಾನು ನಟನಾಗಬೇಕು. ನಟನಾ ರಂಗದಲ್ಲಿ ಗುರುತಿಸಿಕೊಳ್ಳಬೇಕು ಎಂಬುದೇ ಅವರಿಗಿದ್ದ ಕನಸು‌. ವಿದ್ಯಾಭ್ಯಾಸ ಮುಗಿದ ಬಳಿಕ ನಟನಾಗುವ ಉದ್ದೇಶದಿಂದ ಮಂಡ್ಯದಿಂದ ಬೆಂಗಳೂರಿಗೆ ಬಂದ ರಂಜನ್ ಸೀದಾ ಸೇರಿದ್ದು, ನಾಗಾಭರಣ ಅಭಿನಯ ತರಗತಿ ಶಾಲೆಗೆ. ಅಲ್ಲಿ ಚೆನ್ನಾಗಿ ಪಳಗಿದ ರಂಜನ್ ನಟನೆಯ ರೀತಿ ರಿವಾಜು ತಿಳಿದಿರುವ ಹುಡುಗ. ಮುಂದೆ ಒಂದಷ್ಟು ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸಿದ್ದ ರಂಜನ್ ಸಿನಿಮಾಗಳಲ್ಲಿ ಸಹ ಕಲಾವಿದನಾಗಿ ಬಣ್ಣ ಹಚ್ಚಿದ್ದಾನೆ.

ಅಷ್ಟರಲ್ಲಿ ಅದೃಷ್ಟ ದೇವತೆ ರಂಜನ್​ ಕೈ ಹಿಡಿದೇ ಬಿಟ್ಟಳು. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಇಷ್ಟದೇವತೆ ಧಾರಾವಾಹಿಯಲ್ಲಿ ವಸಿಷ್ಠ ಎಂಬ ವಿಲನ್ ರೋಲ್ ಮಾಡಿ ಸೈ ಎನ್ನಿಸಿಕೊಂಡಿದ್ದರು. ತದ ನಂತರ ಗಟ್ಟಿಮೇಳದ ಧೃವ ಆಗಿ ಬದಲಾದ ರಂಜನ್​ಗೆ ದೊಡ್ಡ ಯಶಸ್ಸು ಸಿಕ್ಕಿದೆ. ಇಂದು ರಂಜನ್ ಎಲ್ಲೇ ಹೋದರೂ ಜನ ಅವರನ್ನು ಧೃವ ಎಂದು ಗುರುತಿಸುವಂತಾಗಿದೆ. ನಿಜಕ್ಕೂ ತುಂಬಾನೇ ಸಂತಸವಾಗುತ್ತಿದೆ ಎನ್ನುವ ರಂಜನ್ ಸಿನಿಮಾದಿಂದಲೂ ಅವಕಾಶಗಳು ಬರುತ್ತಿವೆಯಂತೆ.

ಬೆಂಗಳೂರು : ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ಗಟ್ಟಿಮೇಳದಲ್ಲಿ ಧೃವ ಪಾತ್ರಕ್ಕೆ ಜೀವ ತುಂಬಿದ ಈತ ಮಂಡ್ಯದ ಮುದ್ದಾದ ಹುಡುಗ. ಕಿರುತೆರೆ ಲೋಕದಲ್ಲಿ ಧೃವತಾರೆಯಂತೆ ಮಿನುಗುತ್ತಿರುವ ರಂಜನ್ ಹುಟ್ಟಿ ಬೆಳೆದಿದ್ದೆಲ್ಲಾ ಸಕ್ಕರೆ ನಾಡು ಮಂಡ್ಯದಲ್ಲಿ.

ಬಾಲ್ಯದಿಂದಲೂ ರಂಜನ್​ಗೆ ಇದ್ದುದು ಒಂದೇ ಕನಸು! ತಾನು ನಟನಾಗಬೇಕು. ನಟನಾ ರಂಗದಲ್ಲಿ ಗುರುತಿಸಿಕೊಳ್ಳಬೇಕು ಎಂಬುದೇ ಅವರಿಗಿದ್ದ ಕನಸು‌. ವಿದ್ಯಾಭ್ಯಾಸ ಮುಗಿದ ಬಳಿಕ ನಟನಾಗುವ ಉದ್ದೇಶದಿಂದ ಮಂಡ್ಯದಿಂದ ಬೆಂಗಳೂರಿಗೆ ಬಂದ ರಂಜನ್ ಸೀದಾ ಸೇರಿದ್ದು, ನಾಗಾಭರಣ ಅಭಿನಯ ತರಗತಿ ಶಾಲೆಗೆ. ಅಲ್ಲಿ ಚೆನ್ನಾಗಿ ಪಳಗಿದ ರಂಜನ್ ನಟನೆಯ ರೀತಿ ರಿವಾಜು ತಿಳಿದಿರುವ ಹುಡುಗ. ಮುಂದೆ ಒಂದಷ್ಟು ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸಿದ್ದ ರಂಜನ್ ಸಿನಿಮಾಗಳಲ್ಲಿ ಸಹ ಕಲಾವಿದನಾಗಿ ಬಣ್ಣ ಹಚ್ಚಿದ್ದಾನೆ.

ಅಷ್ಟರಲ್ಲಿ ಅದೃಷ್ಟ ದೇವತೆ ರಂಜನ್​ ಕೈ ಹಿಡಿದೇ ಬಿಟ್ಟಳು. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಇಷ್ಟದೇವತೆ ಧಾರಾವಾಹಿಯಲ್ಲಿ ವಸಿಷ್ಠ ಎಂಬ ವಿಲನ್ ರೋಲ್ ಮಾಡಿ ಸೈ ಎನ್ನಿಸಿಕೊಂಡಿದ್ದರು. ತದ ನಂತರ ಗಟ್ಟಿಮೇಳದ ಧೃವ ಆಗಿ ಬದಲಾದ ರಂಜನ್​ಗೆ ದೊಡ್ಡ ಯಶಸ್ಸು ಸಿಕ್ಕಿದೆ. ಇಂದು ರಂಜನ್ ಎಲ್ಲೇ ಹೋದರೂ ಜನ ಅವರನ್ನು ಧೃವ ಎಂದು ಗುರುತಿಸುವಂತಾಗಿದೆ. ನಿಜಕ್ಕೂ ತುಂಬಾನೇ ಸಂತಸವಾಗುತ್ತಿದೆ ಎನ್ನುವ ರಂಜನ್ ಸಿನಿಮಾದಿಂದಲೂ ಅವಕಾಶಗಳು ಬರುತ್ತಿವೆಯಂತೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.