ಚೆನ್ನೈ (ತಮಿಳುನಾಡು): ಖ್ಯಾತ ತಮಿಳು ನಿರ್ದೇಶಕ, ಛಾಯಾಗ್ರಾಹಕ ಕೆ.ವಿ.ಆನಂದ್ (54) ಹೃದಯಾಘಾತದಿಂದಾಗಿ ಇಂದು ಬೆಳಗ್ಗೆ ಚೆನ್ನೈನಲ್ಲಿ ನಿಧನರಾಗಿದ್ದಾರೆ.
ಆನಂದ್ ಅವರು 1994ರಲ್ಲಿ 'ಥೆನ್ಮಾವಿನ್ ಕೊಂಬತ್' ಎಂಬ ಮಲಯಾಳಂ ಚಿತ್ರಕ್ಕೆ ಛಾಯಾಗ್ರಾಹಕರಾಗಿ ತಮ್ಮ ಸಿನಿ ಜೀವನ ಪ್ರಾರಂಭಿಸಿದ್ದರು. ಈ ಚಿತ್ರದಲ್ಲಿನ ಅತ್ಯುತ್ತಮ ಛಾಯಾಗ್ರಹಣಕ್ಕಾಗಿ ರಾಷ್ಟ್ರ ಪ್ರಶಸ್ತಿಯನ್ನೂ ಪಡೆದರು.
ಇದನ್ನೂ ಓದಿ: ನನ್ನ ಆರೋಗ್ಯಕ್ಕಾಗಿ ಪ್ರಾರ್ಥಿಸಿದ ಎಲ್ಲರಿಗೂ ಧನ್ಯವಾದಗಳು: ನಟ ಸುದೀಪ್
2005ರಲ್ಲಿ ತಮಿಳಿನ 'ಕನಾ ಕಂದೇನ್' ಸಿನಿಮಾ ಮೂಲಕ ನಿರ್ದೇಶಕರಾಗಿ ಹೊರಹೊಮ್ಮಿದರು. ಬಳಿಕ ಕವನ್, ಕಪ್ಪಾನ್, ಅಯಾನ್ನಂತಹ ಪ್ರಸಿದ್ಧ ಚಿತ್ರಗಳು ಇವರ ನಿರ್ದೇಶನದಲ್ಲಿ ಮೂಡಿ ಬಂದಿವೆ. ಇವರ ನಿಧನದ ವಿಚಾರ ಕೇಳಿ ತಮಿಳು-ಮಲಯಾಳಂ ಚಿತ್ರರಂಗ ಕಂಬನಿ ಮಿಡಿದಿದೆ.