ETV Bharat / entertainment

54 ವರ್ಷಗಳ ನಂತರ ಸ್ಯಾಂಡಲ್​ವುಡ್​​ನಲ್ಲಿ ಮತ್ತೆ 'ಜೇಡರ ಬಲೆ' ಸಿನಿಮಾ

ಎಪ್ಪತ್ತರ ದಶಕದಲ್ಲಿ ಸೂಪರ್ ಹಿಟ್ ಆದ ಜೇಡರ ಬಲೆ ಸಿನಿಮಾ ಶೀರ್ಷಿಕೆ ಮರು ಬಳಕೆ ಆಗುತ್ತಿದೆ. 54 ವರ್ಷಗಳ ನಂತರ ಮತ್ತೆ ಇದೇ ಹೆಸರಿನ ಮೇಲೆ ಸಿನಿಮಾವೊಂದನ್ನು ಮಾಡಲು ಸಿದ್ಧತೆ ನಡೆದಿದೆ.

author img

By

Published : Aug 30, 2022, 2:05 PM IST

Jedara bale movie again in Sandalwood after 54 years
54 ವರ್ಷಗಳ ನಂತರ ಸ್ಯಾಂಡಲ್​ವುಡ್​​ನಲ್ಲಿ ಮತ್ತೆ ಜೇಡರ ಬಲೆ

ಸ್ಯಾಂಡಲ್ ವುಡ್​ನಲ್ಲಿ ಎಪ್ಪತ್ತರ ದಶಕದಲ್ಲಿ ಸೂಪರ್ ಹಿಟ್ ಆದ ಸಿನಿಮಾಗಳ ಟೈಟಲ್​​ಗಳೀಗ ಮರು ಬಳಕೆ ಆಗುವ ಟ್ರೆಂಡ್ ಶುರುವಾಗಿದೆ. ಡಾ. ರಾಜ್ ಕುಮಾರ್ ಅಭಿನಯದ ಸಿನಿಮಾಗಳ ಟೈಟಲ್ ಮರು ಬಳಕೆ ಆಗುತ್ತಿದೆ. ಖ್ಯಾತ ನಿರ್ದೇಶಕ ದೊರೆ ಭಗವಾನ್ ನಿರ್ದೇಶನದಲ್ಲಿ, ನಟ ಸಾರ್ವಭೌಮ ಡಾ. ರಾಜ್​​​ಕುಮಾರ್ ಹಾಗೂ ಜಯಂತಿ ಅವರ ಅಭಿನಯದಲ್ಲಿ ಮೂಡಿಬಂದಿದ್ದ ಜೇಡರ ಬಲೆ ಸಿನಿಮಾ ಸೂಪರ್ ಹಿಟ್ ಆಗಿತ್ತು. ಈ ಶೀರ್ಷಿಕೆ ಮತ್ತೆ ಬಳಕೆಯಾಗುತ್ತಿದೆ.

54 ವರ್ಷಗಳ ನಂತರ ಮತ್ತೆ ಇದೇ ಹೆಸರಿನ ಮೇಲೆ ಸಿನಿಮಾವೊಂದನ್ನು ಮಾಡಲು ಸಿದ್ಧತೆ ನಡೆದಿದೆ. ಕನ್ನಡ ಚಿತ್ರರಂಗದೊಂದಿಗೆ ಹಲವು ವರ್ಷಗಳ ನಂಟನ್ನು ಹೊಂದಿರುವ ಯುವ ಉದ್ಯಮಿ ವಿಕಾಸ್ ಗೌಡ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಸಿದ್ವಿಕ್ ಪ್ರೊಡಕ್ಷನ್ ಎಂಬ ನೂತನ ನಿರ್ಮಾಣ ಸಂಸ್ಥೆಯ ಲಾಂಛನದಲ್ಲಿ ಜೇಡರಬಲೆ ನಿರ್ಮಾಣ ಮಾಡಲು ಸಜ್ಜಾಗಿದ್ದಾರೆ. ಮಂಗಳವಾರ ರಜಾದಿನ ಚಿತ್ರ ನಿರ್ದೇಶಿಸಿದ್ದ ಯುವಿನ್ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ.

ಡಾ. ರಾಜ್​ಕುಮಾರ್ ಅಭಿಮಾನಿಯಾಗಿರೋ ವಿಕಾಸ್ ಗೌಡ ಮಾತನಾಡಿ, ''ನಾನು ಅಣ್ಣಾವ್ರ ಅಭಿಮಾನಿ. ಅವರ ಚಿತ್ರಗಳೆಂದರೆ ನನಗೆ ಪ್ರಾಣ. ನಮ್ಮ ಚಿತ್ರ ಕೂಡ ಸಸ್ಪೆನ್ಸ್ ಕಥಾಹಂದರ ಹೊಂದಿರುವುದರಿಂದ ಜೇಡರಬಲೆ ಎಂಬ ಶೀರ್ಷಿಕೆ ಇಟ್ಟಿದ್ದೇವೆ. ಮುಂದಿನ ತಿಂಗಳಿನಿಂದ ಚಿತ್ರೀಕರಣ ಆರಂಭಿಸುತ್ತೇವೆ'' ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ನಾಳೆ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಡಲಿದ್ದಾರೆ ಸ್ಯಾಂಡಲ್​ವುಡ್ ಕ್ವೀನ್​ ರಮ್ಯಾ

ಸದ್ಯ ಜೇಡರ ಬಲೆ ಶೀರ್ಷಿಕೆ ಅನಾವಾರಣ ಆಗಿದ್ದು, ಇನ್ನು ಸಿನಿಮಾದ ನಾಯಕ, ನಾಯಕಿ ಯಾರಾಗ್ತಾರೆ, ಉಳಿದ ತಾರಬಳಗದಲ್ಲಿ ಯಾರಿದ್ದಾರೆ ಅನ್ನೋದನ್ನು ಮುಂದಿನ ದಿನಗಳಲ್ಲಿ ಚಿತ್ರತಂಡ ಅನಾವರಣ ಮಾಡಲಿದೆ.

ಸ್ಯಾಂಡಲ್ ವುಡ್​ನಲ್ಲಿ ಎಪ್ಪತ್ತರ ದಶಕದಲ್ಲಿ ಸೂಪರ್ ಹಿಟ್ ಆದ ಸಿನಿಮಾಗಳ ಟೈಟಲ್​​ಗಳೀಗ ಮರು ಬಳಕೆ ಆಗುವ ಟ್ರೆಂಡ್ ಶುರುವಾಗಿದೆ. ಡಾ. ರಾಜ್ ಕುಮಾರ್ ಅಭಿನಯದ ಸಿನಿಮಾಗಳ ಟೈಟಲ್ ಮರು ಬಳಕೆ ಆಗುತ್ತಿದೆ. ಖ್ಯಾತ ನಿರ್ದೇಶಕ ದೊರೆ ಭಗವಾನ್ ನಿರ್ದೇಶನದಲ್ಲಿ, ನಟ ಸಾರ್ವಭೌಮ ಡಾ. ರಾಜ್​​​ಕುಮಾರ್ ಹಾಗೂ ಜಯಂತಿ ಅವರ ಅಭಿನಯದಲ್ಲಿ ಮೂಡಿಬಂದಿದ್ದ ಜೇಡರ ಬಲೆ ಸಿನಿಮಾ ಸೂಪರ್ ಹಿಟ್ ಆಗಿತ್ತು. ಈ ಶೀರ್ಷಿಕೆ ಮತ್ತೆ ಬಳಕೆಯಾಗುತ್ತಿದೆ.

54 ವರ್ಷಗಳ ನಂತರ ಮತ್ತೆ ಇದೇ ಹೆಸರಿನ ಮೇಲೆ ಸಿನಿಮಾವೊಂದನ್ನು ಮಾಡಲು ಸಿದ್ಧತೆ ನಡೆದಿದೆ. ಕನ್ನಡ ಚಿತ್ರರಂಗದೊಂದಿಗೆ ಹಲವು ವರ್ಷಗಳ ನಂಟನ್ನು ಹೊಂದಿರುವ ಯುವ ಉದ್ಯಮಿ ವಿಕಾಸ್ ಗೌಡ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಸಿದ್ವಿಕ್ ಪ್ರೊಡಕ್ಷನ್ ಎಂಬ ನೂತನ ನಿರ್ಮಾಣ ಸಂಸ್ಥೆಯ ಲಾಂಛನದಲ್ಲಿ ಜೇಡರಬಲೆ ನಿರ್ಮಾಣ ಮಾಡಲು ಸಜ್ಜಾಗಿದ್ದಾರೆ. ಮಂಗಳವಾರ ರಜಾದಿನ ಚಿತ್ರ ನಿರ್ದೇಶಿಸಿದ್ದ ಯುವಿನ್ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ.

ಡಾ. ರಾಜ್​ಕುಮಾರ್ ಅಭಿಮಾನಿಯಾಗಿರೋ ವಿಕಾಸ್ ಗೌಡ ಮಾತನಾಡಿ, ''ನಾನು ಅಣ್ಣಾವ್ರ ಅಭಿಮಾನಿ. ಅವರ ಚಿತ್ರಗಳೆಂದರೆ ನನಗೆ ಪ್ರಾಣ. ನಮ್ಮ ಚಿತ್ರ ಕೂಡ ಸಸ್ಪೆನ್ಸ್ ಕಥಾಹಂದರ ಹೊಂದಿರುವುದರಿಂದ ಜೇಡರಬಲೆ ಎಂಬ ಶೀರ್ಷಿಕೆ ಇಟ್ಟಿದ್ದೇವೆ. ಮುಂದಿನ ತಿಂಗಳಿನಿಂದ ಚಿತ್ರೀಕರಣ ಆರಂಭಿಸುತ್ತೇವೆ'' ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ನಾಳೆ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಡಲಿದ್ದಾರೆ ಸ್ಯಾಂಡಲ್​ವುಡ್ ಕ್ವೀನ್​ ರಮ್ಯಾ

ಸದ್ಯ ಜೇಡರ ಬಲೆ ಶೀರ್ಷಿಕೆ ಅನಾವಾರಣ ಆಗಿದ್ದು, ಇನ್ನು ಸಿನಿಮಾದ ನಾಯಕ, ನಾಯಕಿ ಯಾರಾಗ್ತಾರೆ, ಉಳಿದ ತಾರಬಳಗದಲ್ಲಿ ಯಾರಿದ್ದಾರೆ ಅನ್ನೋದನ್ನು ಮುಂದಿನ ದಿನಗಳಲ್ಲಿ ಚಿತ್ರತಂಡ ಅನಾವರಣ ಮಾಡಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.