ಕಲಬುರಗಿ: ಪಿಎಸ್ಐ ಯಶೋಧಾ ಕಟಕ್ಕೆ ಅವರು ನಗರದ ಸ್ಲಂ ನಿವಾಸಿಗಳ ಜೊತೆ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವ ಮೂಲಕ ಜನರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.
ನಗರದ ಕ್ರೈಂ ಬ್ರಾಂಚ್ ಪಿಎಸ್ಐ ಯಶೋಧಾ ಕಟಕ್ಕೆ ಅವರು ಶಹಾಬಾಜಾರ್ ಬಳಿ ಇರುವ ಸ್ಲಂ ಬಡಾವಣೆಯ ಬಡವರಿಗೆ ಬಟ್ಟೆ ವಿತರಿಸುವ ಮೂಲಕ ತಮ್ಮ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿಕೊಂಡರು.
ಓದಿ-ನಿರ್ಮಲಾ ಬಜೆಟ್.. ಭಾರತೀಯ ಸಂಚಾರದ ಜೀವನಾಡಿ ರೈಲ್ವೆಗೆ ಏನೆಲ್ಲಾ ಸಿಗಲಿದೆ?
ಪೊಲೀಸ್ ಅಂದರೆ ಜನರಿಗೆ ಭಯ. ಅದರಲ್ಲೂ ಸ್ಲಂ ಜನರಂತು ಪೊಲೀಸರನ್ನು ಕಂಡರೆ ಹೆದರೋದು ಸಹಜ. ಆದ್ದರಿಂದ ಪೊಲೀಸರು ಸಹ ಜನಸ್ನೇಹಿಗಳೆಂದು ತಿಳಿಸುವ ನಿಟ್ಟಿನಲ್ಲಿ ಯಶೋಧಾ ಅವರು ಈ ಬಾರಿ ತಮ್ಮ ಹುಟ್ಟುಹಬ್ಬವನ್ನು ಸ್ಲಂ ಜನರೊಂದಿಗೆ ಆಚರಿಸಿಕೊಂಡಿದ್ದಾರೆ.
ಈ ಹಿಂದೆ ಲಾಕ್ಡೌನ್ ಸಮಯದಲ್ಲಿ ಕೂಡ ಪಿಎಸ್ಐ ಕಟಕ್ಕೆ ಅವರು ಕೊರೊನಾ ಸೋಂಕಿತ ಕುಟುಂಬಗಳಿಗೆ ಅಗತ್ಯ ಸಾಮಾಗ್ರಿಗಳನ್ನು ನೀಡಿವ ಮೂಲಕ ಮಾದರಿಯಾಗಿದ್ದರು.