ETV Bharat / city

ಊಟದ ಬಿಲ್ ಕೇಳಿದ್ದಕ್ಕೆ ಡಾಬಾಕ್ಕೆ ಬೆಂಕಿ ಇಟ್ಟ ಪುಂಡರು..

author img

By

Published : Dec 27, 2021, 1:51 PM IST

Updated : Dec 27, 2021, 2:26 PM IST

ಬಿಲ್ ಕೊಡದೇ ತೆರಳಿದ್ದ ಆರೋಪಿಗಳು, ಮಧ್ಯರಾತ್ರಿ 12.30ರ ಸುಮಾರಿಗೆ ವಾಪಸ್​ ಡಾಬಾ ಬಳಿ ಬಂದಿದ್ದಾರೆ. ಡಾಬಾ ಬಾಗಿಲಿಗೆ ಪೆಟ್ರೋಲ್ ಸುರಿದು ಬೆಂಕಿ ಇಟ್ಟು ಅಲ್ಲಿಂದ ಪರಾರಿಯಾಗಿದ್ದಾರೆ..

bangalore
ದೊಡ್ಡಬಳ್ಳಾಪುರ

ದೊಡ್ಡಬಳ್ಳಾಪುರ : ಊಟದ ಬಿಲ್ ಕೇಳಿದ್ದಕ್ಕೆ ಡಾಬಾಗೆ ಪೆಟ್ರೋಲ್ ಸುರಿದು ಬೆಂಕಿ ಇಟ್ಟಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಬ್ಯಾಲಕೆರೆ ಬಳಿಯ ಯೂರ್ಟನ್ ನಳಿ ನಿನ್ನೆ ರಾತ್ರಿ ನಡೆದಿದೆ.

ಪುಂಡರ ಗ್ಯಾಂಗ್​ವೊಂದು ಡಾಬಾಕ್ಕೆ ಊಟಕ್ಕೆ ಬಂದಿತ್ತು. ಭಾನುವಾರ ರಾತ್ರಿ ಹತ್ತು ಗಂಟೆಗೆ ಡಾಬಾ ಕ್ಲೋಸ್ ಮಾಡಬೇಕಾದ ಹಿನ್ನೆಲೆ ಬಿಲ್ ಪಾವತಿ ಮಾಡುವಂತೆ ಸಪ್ಲೇಯರ್ ಕೇಳಿದ್ದಾರೆ. ಇದಕ್ಕೆ ಕೋಪಗೊಂಡ ಪುಂಡರು, ಸಪ್ಲೇಯರ್​ಗೆ ಆವಾಜ್ ಹಾಕಿ, ಬಿಲ್ ಕೊಡದೆ ಅಲ್ಲಿಂದ ತೆರಳಿದ್ದಾರೆ.

ಡಾಬಾಕ್ಕೆ ಬೆಂಕಿ ಇಟ್ಟ ಕಿಡಿಗೇಡಿಗಳು

ಬಿಲ್ ಕೊಡದೇ ತೆರಳಿದ್ದ ಆರೋಪಿಗಳು, ಮಧ್ಯರಾತ್ರಿ 12.30ರ ಸುಮಾರಿಗೆ ವಾಪಸ್​ ಡಾಬಾ ಬಳಿ ಬಂದಿದ್ದಾರೆ. ಡಾಬಾ ಬಾಗಿಲಿಗೆ ಪೆಟ್ರೋಲ್ ಸುರಿದು ಬೆಂಕಿ ಇಟ್ಟು ಅಲ್ಲಿಂದ ಪರಾರಿಯಾಗಿದ್ದಾರೆ.

ಈ ವೇಳೆ ಡಾಬಾದ ಒಳಗಿನ ರೂಮ್‌ನಲ್ಲಿ ಸಪ್ಲೇಯರ್ ಮನೋಜ್ ಎಂಬಾತ ಊಟ ಮಾಡುತ್ತಿದ್ದ. ಬೆಂಕಿ ಅವಘಡದಿಂದ ಮನೋಜ್ ಗಾಯಗೊಂಡಿದ್ದು, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಈ ಕುರಿತು ಸೊಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೊಡ್ಡಬಳ್ಳಾಪುರ : ಊಟದ ಬಿಲ್ ಕೇಳಿದ್ದಕ್ಕೆ ಡಾಬಾಗೆ ಪೆಟ್ರೋಲ್ ಸುರಿದು ಬೆಂಕಿ ಇಟ್ಟಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಬ್ಯಾಲಕೆರೆ ಬಳಿಯ ಯೂರ್ಟನ್ ನಳಿ ನಿನ್ನೆ ರಾತ್ರಿ ನಡೆದಿದೆ.

ಪುಂಡರ ಗ್ಯಾಂಗ್​ವೊಂದು ಡಾಬಾಕ್ಕೆ ಊಟಕ್ಕೆ ಬಂದಿತ್ತು. ಭಾನುವಾರ ರಾತ್ರಿ ಹತ್ತು ಗಂಟೆಗೆ ಡಾಬಾ ಕ್ಲೋಸ್ ಮಾಡಬೇಕಾದ ಹಿನ್ನೆಲೆ ಬಿಲ್ ಪಾವತಿ ಮಾಡುವಂತೆ ಸಪ್ಲೇಯರ್ ಕೇಳಿದ್ದಾರೆ. ಇದಕ್ಕೆ ಕೋಪಗೊಂಡ ಪುಂಡರು, ಸಪ್ಲೇಯರ್​ಗೆ ಆವಾಜ್ ಹಾಕಿ, ಬಿಲ್ ಕೊಡದೆ ಅಲ್ಲಿಂದ ತೆರಳಿದ್ದಾರೆ.

ಡಾಬಾಕ್ಕೆ ಬೆಂಕಿ ಇಟ್ಟ ಕಿಡಿಗೇಡಿಗಳು

ಬಿಲ್ ಕೊಡದೇ ತೆರಳಿದ್ದ ಆರೋಪಿಗಳು, ಮಧ್ಯರಾತ್ರಿ 12.30ರ ಸುಮಾರಿಗೆ ವಾಪಸ್​ ಡಾಬಾ ಬಳಿ ಬಂದಿದ್ದಾರೆ. ಡಾಬಾ ಬಾಗಿಲಿಗೆ ಪೆಟ್ರೋಲ್ ಸುರಿದು ಬೆಂಕಿ ಇಟ್ಟು ಅಲ್ಲಿಂದ ಪರಾರಿಯಾಗಿದ್ದಾರೆ.

ಈ ವೇಳೆ ಡಾಬಾದ ಒಳಗಿನ ರೂಮ್‌ನಲ್ಲಿ ಸಪ್ಲೇಯರ್ ಮನೋಜ್ ಎಂಬಾತ ಊಟ ಮಾಡುತ್ತಿದ್ದ. ಬೆಂಕಿ ಅವಘಡದಿಂದ ಮನೋಜ್ ಗಾಯಗೊಂಡಿದ್ದು, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಈ ಕುರಿತು ಸೊಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Last Updated : Dec 27, 2021, 2:26 PM IST

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.