ಬೆಂಗಳೂರು: ಕೇಂದ್ರೀಯ ವಿಭಾಗದ ಘಟಕ ಹಾಗೂ ಕಾರ್ಯಾಗಾರಾಕ್ಕೆ ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ. ಕಳಸದ ಭೇಟಿ ನೀಡಿ ಬಸ್ಸುಗಳಿಗೆ ಸ್ಯಾನಿಟೈಸೇಷನ್ ಕಾರ್ಯವನ್ನು ಪರಿಶೀಲಿಸಿ ಮತ್ತಷ್ಟು ಸಲಹೆ ನೀಡಿದರು. ಇದೇ ರೀತಿ ಎಲ್ಲಾ ವಿಭಾಗಗಳಲ್ಲೂ ನಿರ್ಮಿಸಲು ಸೂಚಿಸಿದರು.
ನಂತರ ಮಾಸ್ಕ್ ತಯಾರಿಕೆ ಹಾಗೂ ವಿತರಣೆ ಬಗ್ಗೆ ಮಾಹಿತಿ ಪಡೆದರು. ಸೂಕ್ತ ಮುಂಜಾಗ್ರತೆ ವಹಿಸುವಂತೆ ಸಿಬ್ಬಂದಿಗಳಿಗೆ ಸೂಚಿಸಿದರು. ಲಾಕ್ಡೌನ್ ತೆರವುಗೊಳಿಸುವ ಜಿಲ್ಲೆಗಳಲ್ಲಿ ಬಸ್ ಚಲಾಯಿಸುವಾಗ ಎಲ್ಲಾ ಸಿಬ್ಬಂದಿಗಳು ತಪ್ಪದೆ ಮಾಸ್ಕ್ ಧರಿಸಿ ಕರ್ತವ್ಯ ನಿರ್ವಹಿಸಬೇಕು. ಆದ್ದರಿಂದ ಈಗಿನಿಂದಲೇ ಎಲ್ಲಾ ವಿಭಾಗೀಯ ನಿಯಂತ್ರಣಾಧಿಕಾರಿಗಳು ಅಗತ್ಯವಿರುವಷ್ಟು ಮಾಸ್ಕ್ ತಯಾರಿಸಿ ಇಟ್ಟುಕೊಳ್ಳುವಂತೆ ಸೂಚಿಸಿದರು. ಅಲ್ಲದೆ ಈ ಮಾರಕ ವೈರಸ್ನಿಂದ ನಾವೆಲ್ಲರೂ ಹೊರ ಬರೋಣ, ಆರೋಗ್ಯವಂತ ಬದುಕು ನಮ್ಮದಾಗಲಿ ಎಂದು ಹಾರೈಸುವ ಮೂಲಕ ಘಟಕದ ಆವರಣದಲ್ಲಿ ಸಸಿ ನೆಟ್ಟರು.